
ವಕೀಲರ ಉಪಯೋಗಕ್ಕಾಗಿ ಉಚಿತ ಕಾನೂನು ಮಾಹಿತಿ ಪುಸ್ತಕ ವಿತರಣೆ…ಲಾ ಗೈಡ್ ವತಿಯಿಂದ ಕಾರ್ಯಕ್ರಮ…
- MysoreNews
- July 5, 2024
- No Comment
- 78
ಮೈಸೂರು,ಜು5,Tv10 ಕನ್ನಡ
ವಕೀಲರ ಉಪಯೋಗಕ್ಕಾಗಿ ಲಾಗೈಡ್ ಕಾನೂನು ಮಾಸಿಕ ಪುಸ್ತಕ ಬಳಗದ ವತಿಯಿಂದ ರಚಿಸಲಾದ ಪುಸ್ತಕಗಳನ್ನ ವಿತರಿಸುವ ಕಾರ್ಯಕ್ರಮ ಮೈಸೂರು ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ನೆರವೇರಿತು.ವಕೀಲರಿಗೆ ಉಚಿತವಾಗಿ ಕಾನೂನು ಮಾಹಿತಿಯುಳ್ಳ ಪುಸ್ತಕಗಳನ್ನ ವಿತರಿಸಲಾಯಿತು.
ಹಿರಿಯ ವಕೀಲರಾದ ಲಾ ಗೈಡ್ ಹೆಚ್ ಎನ್ ವೆಂಕಟೇಶ್ ಅವರಿಂದ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ,
ನ್ಯಾಯಾಧೀಶರಾದ ಪುಟ್ಟಸ್ವಾಮಿ ಪಿ ಜೆ ಸೋಮಶೇಖರ್ ಸಾವಿತ್ರಿ ಶಿವಪುತ್ರ ಕುಜ್ಜಿ
ವಕೀಲರ ಸಂಘದ ಅಧ್ಯಕ್ಷರಾದ ಎಸ್ ಲೋಕೇಶ್ ಕಾರ್ಯದರ್ಶಿ ಸುಧೀರ್
ಹಿರಿಯ ವಕೀಲರಾದ ಜಿ ವಿ ರಾಮಮೂರ್ತಿ ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ಮಾತನಾಡಿದ ಮೈಸೂರು ಜಿಲ್ಲಾ ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗ್ಡೆ ಲಾಗೈಡ್ ಎಚ್ ಎನ್ ವೆಂಕಟೇಶ್ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರು ಕೊಟ್ಟ ಮಾತಿನಂತೆ ವಕೀಲರಿಗೆ ಉಚಿತ ಕಾನೂನು ಪುಸ್ತಕ ನೀಡಿದ್ದಾರೆ. ಎಚ್ ಎನ್ ವೆಂಕಟೇಶ್ ಅವರಂತ ವಕೀಲರು ಪ್ರತಿ ಜಿಲ್ಲೆಯ ಸಂಘದಲ್ಲಿದ್ದರೆ ಯಾವ ಸಂಘವು ಬಡವಾಗುವುದಿಲ್ಲ ಎಂದು ತಿಳಿಸಿದರು…