
ಪತ್ನಿಯನ್ನ ಕರೆದೊಯ್ಯಲು ಬಂದ ಅಳಿಯನ ಮೇಲೆ ದಾಳಿ…ವೃಷಣ ಅಮುಕಿ ಚಾಕುವಿನಿಂದ ಇರಿತ…7 ಮಂದಿ ವಿರುದ್ದ FIR ದಾಖಲು…
- CrimeMysore
- July 5, 2024
- No Comment
- 540
ಮೈಸೂರು,ಜು5,Tv10 ಕನ್ನಡ
ಕೌಟುಂಬಿಕ ಕಲಹ ಹಿನ್ನಲೆ ಕೋಪಿಸಿಕೊಂಡು ತವರು ಮನೆಯಲ್ಲಿದ್ದ ಪತ್ನಿಯನ್ನ ಕರೆದೊಯ್ಯಲು ಬಂದ ಅಳಿಯನ ಮೇಲೆ ದಾಳಿ ನಡೆಸಿ ವೃಷಣ ಗಾಯಗೊಳಿಸಿ ಚಾಕುವಿನಿಂದ ಇರಿದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಬೋಗಾದಿ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಗಾಯಗೊಂಡ ಅಳಿಯ ಸುಜಿತ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಭಂಧ ಅತ್ತೆ ಉಮಾ,ಮಾವ ಲೋಕೇಶ್,ಭಾವಮೈದ ದೇವರಾಜ್,ಚಿಕ್ಕಮಾವ ಅಜಯ್,ಉಮಾ ರವರ ಅಕ್ಕಂದಿರಾದ ಸೌಭಾಗ್ಯ,ಮಂಜುಳಾ ಹಾಗೂ ಸ್ನೇಹಿತೆ ಮಮತಾ ಎಂಬುವರ ಮೇಲೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಜಿತ್ ಹಾಗೂ ನಿಖಿತಾ ಪರಸ್ಪರ ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ದರು.ಸಣ್ಣಪುಟ್ಟ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು.ನಿಖಿತಾಗೆ ಅನಾರೋಗ್ಯ ಹಿನ್ನಲೆ ತವರು ಮನೆ ಸೇರಿದ್ದಳು.ಸುಮಾರು ಒಂದು ತಿಂಗಳಾದರೂ ಮನೆಗೆ ಹಿಂದಿರುಗಲಿಲ್ಲ.ಹೀಗಾಗಿ ಪತ್ನಿಯನ್ನ ಕರೆತರಲು ಸುಜಿತ್ ಬೋಗಾದಿ ಗ್ರಾಮಕ್ಕೆ ತಮ್ಮ ಸಹೋದರನ ಜೊತೆ ತೆರಳಿದ್ದಾರೆ.ಈ ವೇಳೆ ಕ್ಯಾತೆ ತೆಗೆದ ಅತ್ತೆ,ಮಾವ ಹಾಗೂ ಸಂಭಂಧಿಕರು ಸುಜಿತ್ ಮೇಲೆ ಹಲ್ಲೆ ಮಾಡಿದ್ದಾರೆ.ಉಮಾ ರವರ ಅಕ್ಕಂದಿರು ಸುಜಿತ್ ರವರ ವೃಷಣ ಅಮುಕಿ ಗಾಯಗೊಳಿಸಿದ್ದಾರೆ.ದೇವರಾಜು ಚಾಕುವಿನಿಂದ ಇರಿದಿದ್ದಾನೆ.ಈ ವೇಳೆ ಅಕ್ಕಪಕ್ಕದ ಮನೆಯವರು ಜಗಳ ಬಿಡಿಸಿದ್ದಾರೆ.ಗಾಯಗೊಂಡ ಸುಜಿತ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಹಲ್ಲೆ ನಡೆಸಿದ ಅತ್ತೆ,ಮಾವ ಹಾಗೂ ಸಂಭಂಧಿಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಪ್ರಕರಣ ದಾಖಲಿಸಿದ್ದಾರೆ…