ನಿಂತಿದ್ದ ಲಾರಿಗೆ ಬೈಕ್ ಢಿಕ್ಕಿ…ಸ್ಥಳದಲ್ಲೇ ಪತ್ರಕರ್ತ ಸಾವು…
- CrimeNewsUncategorized
- July 7, 2024
- No Comment
- 303
ಮಂಡ್ಯ,ಜು7,Tv10 ಕನ್ನಡ
ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾನ ಪತ್ರಕರ್ತ ಸಾವನ್ನಪ್ಪಿದ ಘಟನೆ
ಮಂಡ್ಯದ ಮದ್ದೂರು ಟಿ.ಬಿ.ವೃತ್ತದಲ್ಲಿ ನಡೆದಿದೆ.
ಬಿ.ಎ.ಮಧುಕುಮಾರ್(34) ಮೃತಪಟ್ಟ ದುರ್ದೈವಿ.
ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯ ನಿವಾಸಿಯಾಗಿರುವ ಮಧುಕುಮಾರ್
ಪ್ರತಿನಿಧಿ ಪ್ರಾದೇಶಿಕ ದಿನಪತ್ರಿಕೆ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಮದ್ದೂರು ಟಿಬಿ ವೃತ್ತದ ಬಳಿ ಘಟನೆ ನಡೆದಿದೆ.
ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ
ತೀವ್ರ ರಕ್ತಸ್ರಾವವಾದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…