ಚಂಪಾಕಲಿ,ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ…ಬೇಕರಿ ನೌಕರನಿಗೆ ಚಾಕು ಇರಿತ…

ಚಂಪಾಕಲಿ,ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ…ಬೇಕರಿ ನೌಕರನಿಗೆ ಚಾಕು ಇರಿತ…

ಮೈಸೂರು,ಜು7,Tv10 ಕನ್ನಡ

ಚಂಪಾಕಲಿ ಹಾಗೂ ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ ಮಾಡಿ ಬೇಕರಿ ನೌಕರನಿಗೆ ಚಾಕುವಿನಿಂದ ಇರಿದ ಘಟನೆ ಹೂಟಗಳ್ಳಿ ಕಾಲೋನಿಯಲ್ಲಿ ನಡೆದಿದೆ.ಕೃಷ್ಣಾ ಬೇಕರಿಯಲ್ಲಿ ಕೆಲಸ ಮಾಡುವ ಮಹಮದ್ ಸಾಜಿದ್ ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ.ಅದೃಷ್ಟವಶಾತ್ ಮಹಮದ್ ಸಾಜಿದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರೌಡಿಶೀಟರ್ ಪ್ರಜ್ವಲ್@ಸ್ಪಾಟ್ ಹಾಗೂ ಸಂಜು ಎಂಬುವರು ದಾಂಧಲೆ ನಡೆಸಿದ ಆರೋಪಿಗಳು.
ರಾತ್ರಿ ಸುಮಾರು 10 ಗಂಟೆ ವೇಳೆಯಲ್ಲಿ ಬೇಕರಿಗೆ ಬಂದ ಪ್ರಜ್ವಲ್ ಹಾಗೂ ಸಂಜು ಚೆಂಪಾಕಲಿ ಹಾಗೂ ಪಪ್ಸ್ ತಿಂದಿದ್ದಾರೆ.ಹಣ ಕೇಳಿದಾಗ ಟ್ರೇಗಳನ್ನ ತಳ್ಳಿ ಪದಾರ್ಥಗಳನ್ನ ಬೀಳಿಸಿ ರೌಡಿಸಂ ಪ್ರದರ್ಶಿಸಿ ಮಹಮದ್ ಸಾಜಿದ್ ಗೆ ಚಾಕುವಿನಿಂದ ಇರಿದಿದ್ದಾರೆ.ಅದೃಷ್ಟವಶಾತ್ ಮಹಮದ್ ಸಾಜಿದ್ ಸ್ವೆಟರ್ ಧರಿಸಿದ್ದರಿಂದ ಚಾಕು ಸಿಲುಕಿಕೊಂಡಿದೆ.ನಂತರ ಮಹಮದ್ ಸಾಜಿದ್ ಧರಿಸಿದ್ದ 30 ಗ್ರಾಂ ಚಿನ್ನದ ಸರ ಲಪಟಾಯಿಸಿ ಪ್ರಜ್ವಲ್ ಹಾಗೂ ಸಂಜು ಪರಾರಿಯಾಗಿದ್ದಾರೆ.ಪ್ರಜ್ವಲ್ ಹಾಗೂ ಸಂಜು ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಜು ಅರೆಸ್ಟ್ ಆಗಿದ್ದು ಪ್ರಜ್ವಲ್ ತಲೆಮರೆಸಿಕೊಂಡಿದ್ದಾನೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *