ಚಂಪಾಕಲಿ,ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ…ಬೇಕರಿ ನೌಕರನಿಗೆ ಚಾಕು ಇರಿತ…

ಚಂಪಾಕಲಿ,ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ…ಬೇಕರಿ ನೌಕರನಿಗೆ ಚಾಕು ಇರಿತ…

ಮೈಸೂರು,ಜು7,Tv10 ಕನ್ನಡ

ಚಂಪಾಕಲಿ ಹಾಗೂ ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ ಮಾಡಿ ಬೇಕರಿ ನೌಕರನಿಗೆ ಚಾಕುವಿನಿಂದ ಇರಿದ ಘಟನೆ ಹೂಟಗಳ್ಳಿ ಕಾಲೋನಿಯಲ್ಲಿ ನಡೆದಿದೆ.ಕೃಷ್ಣಾ ಬೇಕರಿಯಲ್ಲಿ ಕೆಲಸ ಮಾಡುವ ಮಹಮದ್ ಸಾಜಿದ್ ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ.ಅದೃಷ್ಟವಶಾತ್ ಮಹಮದ್ ಸಾಜಿದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರೌಡಿಶೀಟರ್ ಪ್ರಜ್ವಲ್@ಸ್ಪಾಟ್ ಹಾಗೂ ಸಂಜು ಎಂಬುವರು ದಾಂಧಲೆ ನಡೆಸಿದ ಆರೋಪಿಗಳು.
ರಾತ್ರಿ ಸುಮಾರು 10 ಗಂಟೆ ವೇಳೆಯಲ್ಲಿ ಬೇಕರಿಗೆ ಬಂದ ಪ್ರಜ್ವಲ್ ಹಾಗೂ ಸಂಜು ಚೆಂಪಾಕಲಿ ಹಾಗೂ ಪಪ್ಸ್ ತಿಂದಿದ್ದಾರೆ.ಹಣ ಕೇಳಿದಾಗ ಟ್ರೇಗಳನ್ನ ತಳ್ಳಿ ಪದಾರ್ಥಗಳನ್ನ ಬೀಳಿಸಿ ರೌಡಿಸಂ ಪ್ರದರ್ಶಿಸಿ ಮಹಮದ್ ಸಾಜಿದ್ ಗೆ ಚಾಕುವಿನಿಂದ ಇರಿದಿದ್ದಾರೆ.ಅದೃಷ್ಟವಶಾತ್ ಮಹಮದ್ ಸಾಜಿದ್ ಸ್ವೆಟರ್ ಧರಿಸಿದ್ದರಿಂದ ಚಾಕು ಸಿಲುಕಿಕೊಂಡಿದೆ.ನಂತರ ಮಹಮದ್ ಸಾಜಿದ್ ಧರಿಸಿದ್ದ 30 ಗ್ರಾಂ ಚಿನ್ನದ ಸರ ಲಪಟಾಯಿಸಿ ಪ್ರಜ್ವಲ್ ಹಾಗೂ ಸಂಜು ಪರಾರಿಯಾಗಿದ್ದಾರೆ.ಪ್ರಜ್ವಲ್ ಹಾಗೂ ಸಂಜು ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಜು ಅರೆಸ್ಟ್ ಆಗಿದ್ದು ಪ್ರಜ್ವಲ್ ತಲೆಮರೆಸಿಕೊಂಡಿದ್ದಾನೆ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *