
ಕೆಸರು ಗದ್ದೆಯಂತಾದ ರಸ್ತೆ…ನಾಟಿ ಮಾಡಿ ಆಕ್ರೋಷ ವ್ಯಕ್ತಪಡಿಸಿದ ಹಾಡಿ ನಿವಾಸಿಗಳು…
- MysoreTV10 Kannada Exclusive
- July 7, 2024
- No Comment
- 228
ಎಚ್.ಡಿ.ಕೋಟೆ,ಜು7,Tv10 ಕನ್ನಡಹಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಕೆಸರುಗದ್ದೆಯಂತಾದ ಹಿನ್ನಲೆ ನಾಟಿ ಮಾಡಿ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕೆಎಡತೊರೆಯಲ್ಲಿ ನಡೆದಿದೆ.ರಸ್ತೆ ಅವ್ಯವಸ್ಥೆಯಿಂದ ಬೇಸೆತ್ತು ರಸ್ತೆ ಮಧ್ಯದಲ್ಲೇ ನಾಟಿ ಮಾಡಿ ಹಾಡಿವಾಸಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಅಣ್ಣೂರು ಗ್ರಾಮ ಪಂಚಾಯ್ತಿಗೆ ಸೇರಿದ ಎಡತೊರೆ ಹಾಡಿ ಇಂದಿಗೂ ಸಾರಿಗೆ ಸಂಪರ್ಕದಿಂದ ವಂಚಿತವಾಗಿದೆ.
ಶಾಲಾ ಕಾಲೇಜು ಆಸ್ಪತ್ರೆ ಸೇರಿದಂತೆ ದೈನದಿನ ಜೀವನ ನಿರ್ವಹಣೆಹೆ ಕಾಲು ನಡಿಗೆಯಲ್ಲೇ ನಡೆದು ಬರಬೇಕಾದ ದುಃಸ್ಥಿತಿ ಇಲ್ಲಿನವರದ್ದು.
ಕಳೆದ ವರ್ಷ ಚುನಾವಣೆ ಸಂದರ್ಭದಲ್ಲಿ ಹಾಡಿ ಮಂದಿ ಮನವಿ ಆಲಿಸಿದ ಶಾಸಕ ಅನಿಲ್ ಚಿಕ್ಕಮಾದು ಎರಡೇ ದಿನದಲ್ಲಿ ರಸ್ತೆ ಕಾಮಗಾರಿ ಆರಂಭಿಸಲು ಹಾಡಿಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಒಂದು ವರ್ಷ ಕಳೆದರೂ ರಸ್ತೆ ಭಾಗ್ಯ ಈ ಹಾಡಿಗೆ ಇಲ್ಲದಂತಾಗಿದೆ.ಮಳೆ ಬಂದರೆ ರಸ್ತೆ ಕೆಸರು ಗದ್ದೆಯಂತಾಗಿ ನಿವಾಸಿಗಳು ನಾಲೆ ಏರಿ ಮೇಲೆ ಸಂಚರಿಸಬೇಕಾಗುತ್ತದೆ.
ಹಾಡಿಗೆ ಸಂಪರ್ಕ ಸಾಧಿಸುವ ಏಕೈಕ ರಸ್ತೆ ಅಭಿವೃದ್ದಿ ಪಡಿಸುವಂತೆ ಆದಿವಾಸಿಗರ ಒತ್ತಾಯಿಸಿದ್ದಾರೆ.
ಇನ್ನಾದರೂ ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ರಸ್ತೆ ಸಮಸ್ಯೆ ಬಗೆ ಹರಿಸುತ್ತಾರಾ ಕಾದು ನೋಡಬೇಕಿದೆ…