
ಡೆಂಗ್ಯೂ ಭೀತಿ…ಮುನ್ನೆಚ್ಚರಿಕೆ ವಹಿಸಿ…ಆರೋಗ್ಯಾಧಿಕಾರಿಗಳಿಗೆ ಮನವಿ…
- MysoreNews
- July 8, 2024
- No Comment
- 103
ಮೈಸೂರು,ಜು8,Tv10 ಕನ್ನಡ
ಮೈಸೂರು ನಗರ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ಡೆಂಗ್ಯೂ ಭೀತಿ ಶುರುವಾಗಿದೆ.ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಇಬ್ಬರ ಬಲಿ ಪಡೆದಿದೆ.ಮಾರಕ ರೋಗ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಮೈಸೂರು ನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ ವೆಂಕಟೇಶ್ ಹಾಗೂ ಪಶು ಆರೋಗ್ಯ ಅಧಿಕಾರಿ ಡಾ.ಹರ್ಷ ರವರಿಗೆ ಪಿಜಿ ಜನಸ್ಪಂದನ ಫೌಂಡೇಶನ್ ಅಧ್ಯಕ್ಷ ಹಾಗೂ ಮಾಜಿ ನಗರ ಪಾಲಿಕೆ ಸದಸ್ಯ ಪ್ರಶಾಂತ್ ಗೌಡ ಮತ್ತು ಒಕ್ಕಲಿಗರ ಸಂಘದ ನಿರ್ದೇಶಕರಾದ ಎ ರವಿ, ವಕೀಲ ಎಮ್ ಗೋಪಿನಾಥ , ರಾಮ್ ಪ್ರಸಾದ್, ರಾಕೇಶ್ ರಾಮೇಗೌಡ, ಗುರುಪ್ರಸಾದ್ ದೂರು ಸಲ್ಲಿಸಿದ್ದಾರೆ.ಮುಂದಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣದಿಂದ ಯಾವುದೇ ರೀತಿಯ ಸಾವು ನೋವು ಸಂಭವಿಸದ ಹಾಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಮನವರಿಕೆ ಮಾಡಿದ್ದಾರೆ…