ಹಳ್ಳಿಹಕ್ಕಿ ಪತ್ನಿ ಹೆಸರಲ್ಲಿ ಬದಲಿ ನಿವೇಶನ…ಮುಡಾ ಅಧ್ಯಕ್ಷ ಗಂಭೀರ ಆರೋಪ…

ಹಳ್ಳಿಹಕ್ಕಿ ಪತ್ನಿ ಹೆಸರಲ್ಲಿ ಬದಲಿ ನಿವೇಶನ…ಮುಡಾ ಅಧ್ಯಕ್ಷ ಗಂಭೀರ ಆರೋಪ…

ಮೈಸೂರು,ಜು8,Tv10 ಕನ್ನಡ

ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ರವರು ತಮ್ಮ ಪತ್ನಿ ಹೆಸರಲ್ಲಿ ಮುಡಾದಿಂದ ಬದಲಿ ನಿವೇಶನ ಪಡೆದಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಕೆ ಮರೀಗೌಡ ಗಂಭೀರವಾಗಿ ಆರೋಪಿಸಿದ್ದಾರೆ.
ವಿಶ್ವನಾಥ್ ಅವರ ಪತ್ನಿ ಶಾಂತಮ್ಮ ಅವರ ಹೆಸರಿನಲ್ಲಿ 2017ರಲ್ಲಿ 60×40 ಅಳತೆಯ ಬದಲಿ ನಿವೇಶನ ಪಡೆದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮುಡಾ ಹಗರಣ ಪ್ರಕರಣದಲ್ಲಿ ಹಾಲಿ, ಮಾಜಿ ಶಾಸಕರ ಹೆಸರು ಪ್ರಸ್ತಾಪ ಹಿನ್ನೆಲೆಯಲ್ಲಿ ಮುಡಾ ಅಧ್ಯಕ್ಷ ಕೆ ಮರೀಗೌಡ, ಶಾಸಕರಾದ ಕೆ ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಎಂಎಲ್ ಸಿ ಡಾ ತಿಮ್ಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇವನೂರು 3ನೇ ಹಂತದ ಬದಲು ಮುಖ್ಯರಸ್ತೆಯಲ್ಲಿ ಎಚ್.ವಿಶ್ವನಾಥ್ ನಿವೇಶನ ಪಡೆದಿದ್ದಾರೆ,ವಿಶ್ವನಾಥ್ ಅವರು ಈಗ ರಾಜಕೀಯವಾಗಿ ದಿವಾಳಿಯಾಗಿದ್ದಾರೆ, ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ,ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಮುಡಾದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಈಗ ಸಚಿವ ಭೈರತಿ ಸುರೇಶ್ ಸೂಚನೆ ಮೇರೆಗೆ ಕೂಲಂಕುಷವಾಗಿಯೇ ತನಿಖೆ ನಡೆಯುತ್ತಿದೆ. ಹೀಗಾಗಿ ಈ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.

50-50 ಅನುಪಾತದಲ್ಲಿ ಸಿಎಂ ಕುಟುಂಬ ನಿಯಮಬಾಹಿರ ಸೈಟ್ ಪಡೆದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಇಡೀ ಪ್ರಕರಣದಲ್ಲಿ ಸಿಎಂ ಹಾಗೂ ಅವರ ಕುಟುಂಬ ಕಾನೂನಾತ್ಮಕವಾಗಿದೆ ಎಂದು ಸ್ಪಷ್ಟಪಡಿಸಿದರು.
ಇಲ್ಲಿ ಮುಡಾ ಸಿಎಂ ಕುಟುಂಬಕ್ಕೆ 75 ಸಾವಿರ ಚದರ ಅಡಿ ಜಾಗ ಕೊಡಬೇಕಿತ್ತು, ಕೊಟ್ಟಿರುವುದು 38
ಸಾವಿರ ಚದರ ಅಡಿ,ಆದರೂ ನಮ್ಮ ನಾಯಕರು ತೃಪ್ತಿ ಪಟ್ಟುಕೊಂಡಿದ್ದಾರೆ, ಅಂತಹವರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಶಾಸಕರುಗಳು ಸ್ಪಷ್ಟಪಡಿಸಿದರು.
ಈಗ ಆರೋಪ ಮಾಡುತ್ತಿರುವ ಹೆಚ್.ವಿಶ್ವನಾಥ್ ಕೂಡ ದೇವನೂರು ಬಡಾವಣೆಯಲ್ಲಿ ಬದಲಿ ನಿವೇಶ ಪಡೆದಿದ್ದಾರೆ ಅವರ ಪತ್ನಿ ಶಾಂತಮ್ಮ ಹೆಸರಲ್ಲಿ.ನಿವೇಶನ ಸಂಖ್ಯೆ 2,525ರ ಬದಲಾಗಿ ಹೈವೆ ಬಳಿ ಬರುವ ನಿವೇಶನ ಸಂಖ್ಯೆ 307ರನ್ನ ಪಡೆದಿದ್ದಾರೆ. ಅಂತಹವರು ಸಿಎಂ ಬಗ್ಗೆ ಮಾತನಾಡುವಾಗ ಸರಿಯಾಗಿ ಯೋಚಿಸಿ ಮಾತಾಡಬೇಕು ಎಂದು ತಿರುಗೇಟು ನೀಡಿದರು.
ಇಡೀ ಪ್ರಕರಣದಲ್ಲಿ ಅಕ್ರಮ ಎಸಗಿರುವ ಎಲ್ಲರ ಬಗ್ಗೆಯೂ ತನಿಖೆ ನಡೆಯುತ್ತಿದೆ ಸದ್ಯದಲ್ಲೇ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಶಾಸಕ ಹರೀಶ್ ಗೌಡ ಹಾಗೂ ಮುಡಾ ಅಧ್ಯಕ್ಷ ಮರಿಗೌಡ ತಿಳಿಸಿದರು…

Spread the love

Related post

ಕರ್ತವ್ಯ ನಿರ್ವಹಣೆ ವೇಳೆ ಸೆಸ್ಕ್ ಸಿಬ್ಬಂದಿ ಸಾವು ಪ್ರಕರಣ…ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ…

ಕರ್ತವ್ಯ ನಿರ್ವಹಣೆ ವೇಳೆ ಸೆಸ್ಕ್ ಸಿಬ್ಬಂದಿ ಸಾವು ಪ್ರಕರಣ…ಮೃತರ ಕುಟುಂಬಕ್ಕೆ ಪರಿಹಾರ…

ಕರ್ತವ್ಯ ನಿರ್ವಹಣೆ ವೇಳೆ ಸೆಸ್ಕ್ ಸಿಬ್ಬಂದಿ ಸಾವು ಪ್ರಕರಣ…ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ… ಮೈಸೂರು,ಫೆ3,Tv10 ಕನ್ನಡ ಇತ್ತೀಚೆಗೆ ಹನೂರು ಉಪ ವಿಭಾಗ ವ್ಯಾಪ್ತಿಯ ಚಾವಿಸನಿನಿ (ಸೆಸ್ಕ್‌) ಸಿಬ್ಬಂದಿ…
ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ ಭರ್ಜರಿ ಸಾಧನೆ

ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ…

ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ ಭರ್ಜರಿ ಸಾಧನೆ ಮೈಸೂರು:ಮೈಸೂರಿನಲ್ಲಿ 01/02/2026 ರಂದು ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ…
ಅಭಿಮಾನಿಗಳೊಂದಿಗೆ ಅಭಿಮಾನ ಹಂಚಿಕೊಂಡ ಡಾ.ಚೇತನ

ಅಭಿಮಾನಿಗಳೊಂದಿಗೆ ಅಭಿಮಾನ ಹಂಚಿಕೊಂಡ ಡಾ.ಚೇತನ

*ಬಿಜಾಪುರ ಜಿಲ್ಲೆ ಇಂಡಿ ಪಟ್ಟಣದ ಅದ್ಭುತ ಪ್ರತಿಭೆ ತಮ್ಮ ರಾಷ್ಟ್ರಮಟ್ಟದ ಬಹು ಪ್ರಶಸ್ತಿಗಳ ಮೂಲಕ ದೇಶಕ್ಕೆ ನಾಡಿಗೆ ಮತ್ತೆ ಹುಟ್ಟುರಿಗೆ ಕೀರ್ತಿ ತಂದಿದ್ದಾರೆ ಚೇತನ ಬಸವರಾಜ ಮೂರಮನ ಕ್ಷಮಿಸಿ…

Leave a Reply

Your email address will not be published. Required fields are marked *