ಚಿಕಾಗೋ ದಲ್ಲಿ ಗೀತಾ ಉತ್ಸವ…ಗಣಪತಿಶ್ರೀಗಳ ನೇತೃತ್ವದಲ್ಲಿ ಅದ್ದೂರಿ ಕಾರ್ಯಕ್ರಮ…

ಚಿಕಾಗೋ ದಲ್ಲಿ ಗೀತಾ ಉತ್ಸವ…ಗಣಪತಿಶ್ರೀಗಳ ನೇತೃತ್ವದಲ್ಲಿ ಅದ್ದೂರಿ ಕಾರ್ಯಕ್ರಮ…

ಮೈಸೂರು,ಜು21,Tv10 ಕನ್ನಡಚಿಕಾಗೋದ ನ್ಯೂ ಅರೆನಾದಲ್ಲಿ ನಡೆದ ಗೀತಾ ಉತ್ಸವ ಮನಸೂರೆಗೊಂಡಿದೆ.ಮೈಸೂರಿನ ಅವಧೂತ ದತ್ತ ಪೀಠದ
ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಯುಎಸ್ ನ ಇಲಿನಾಯಸ್ ನ ಚಿಕಾಗೋದ ನ್ಯೂ ಅರೆನಾದಲ್ಲಿ ಕಾರ್ಯಕ್ರಮ‌ಅದ್ದೂರಿಯಿಂದ ನೆರವೇರಿದೆ.ಎಸ್ ಜಿ ಎಸ್ ಗೀತಾ ಫೌಂಡೇಶನ್ ಮತ್ತು ಕೃಷ್ಣ ದತ್ತ ಹನುಮಾನ್ ದೇವಸ್ಥಾನ ವತಿಯಿಂದ ಅತಿದೊಡ್ಡ ಯುಎಸ್ ಗೀತಾ ಉತ್ಸವವನ್ನು ಆಯೋಜಿಸಲಾಗಿತ್ತು.
ಕೇವಲ 10 ತಿಂಗಳಿನಲ್ಲಿ ವಿಧ್ಯಾರ್ಥಿಗಳು ಲ ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿದುದು ವಿಶೇಷವಾಗಿತ್ತು.
ಎಸ್ ಜಿ ಎಸ್ ಗೀತಾ ಫೌಂಡೇಶನ್ ಮೂಲಕ, 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಗತಿಕವಾಗಿ ಪದವಿ ಪಡೆದಿದ್ದಾರೆ.ಈ ಜಾಗತಿಕ ಚಳವಳಿಯನ್ನುಸಕ್ರಿಯಗೊಳಿಸಲೆಂದೇ ಎಸ್ ಜಿ ಎಸ್ ಗೀತಾ ಫೌಂಡೇಶನ್ 500 ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ.ಕಿರಿಯ ಪದವೀಧರರು 4 ವರ್ಷ ವಯಸ್ಸಿನವರು,ಹಿರಿಯ ಪದವೀಧರರು 85 ವರ್ಷ ವಯಸ್ಸಿನವರು,
2,000 ಕಂಠಪಾಠಿಗಳು 10 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು.
1,350 ಕಂಠಪಾಠ ಮಾಡುವವರು ವಯಸ್ಕರು ಗೀತಾ ಕಲಿಕೆಯನ್ನು ಸುಗಮಗೊಳಿಸಿದ್ದಾರೆ.
ಗೀತಾ ಉತ್ಸವದಲ್ಲಿ, ಸಾವಿರಾರು ಜನರು ಏಕಸ್ವರದಲ್ಲಿ ಗೀತಾ ಪಠಣ ಮಾಡುವ ಮೂಲಕ ನ್ಯೂ ಅರೆನಾ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.ಗಣ್ಯರಾದ ರಾಜಾ ಕೃಷ್ಣಮೂರ್ತಿ (ಕಾಂಗ್ರೆಸ್‌ಮನ್, ಇಲಿನಾಯ್ಸ್) ಮತ್ತು ಜೂಲಿಯಾನಾ ಸ್ಟಾರ್ಟನ್, ಇಲಿನಾಯ್ಸ್‌ನ ಲೆಫ್ಟಿನೆಂಟ್ ಗವರ್ನರ್, ಇಲಿನಾಯ್ಸ್ ನಗರಗಳ ಏಳು ಮೇಯರ್‌ಗಳ ಉಪಸ್ಥಿತರಿದ್ದು ಗೀತಾ ಉತ್ಸವವನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು,
ಚಿಕಾಗೋದ ನ್ಯೂ ಅರೆನಾದಲ್ಲಿ ಇಂದಿನ ಭಗವದ್ಗೀತೆ ಕಾರ್ಯಕ್ರಮವು ವಿದ್ಯಾರ್ಥಿಗಳು, ಪ್ರೇಕ್ಷಕರು ಮತ್ತು ದೊಡ್ಡ ಸನಾತನ ಧರ್ಮ ಸಮುದಾಯಕ್ಕೆ ಮಹತ್ವದ ಮೈಲಿಗಲ್ಲನ್ನು ನೀಡಿದೆ, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಮುಖದಲ್ಲೂ ಶ್ರೀಕೃಷ್ಣನನ್ನು ಸಾಕ್ಷೀಕರಿಸುವುದು ನಿಜಕ್ಕೂ ವಿಸ್ಮಯ ಹುಟ್ಟಿಸುವಂತಿತ್ತು ಎಂದು ಬಣ್ಣಿಸಿದರು.ಭಗವದ್ಗೀತೆಯು ನಮ್ಮ ಆತ್ಮಸಾಕ್ಷಾತ್ಕಾರದ ಪ್ರಯಾಣದಲ್ಲಿ ನಮಗೆ ಮಾರ್ಗದರ್ಶನ ನೀಡುತ್ತದೆ,ಕ್ಷಣಿಕ ಆನಂದದಿಂದ ನಿಜವಾದ, ಶಾಶ್ವತವಾದ ಸಂತೋಷವನ್ನು ನೀಡುತ್ತದೆ ಎಂದು ತಿಳಿಸಿದರು
ಎಸ್ ಜಿ ಎಸ್ ಗೀತಾ ಫೌಂಡೇಶನ್ ಮುಂದಿನ ದಿನಗಳಲ್ಲಿ 100,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ ಎಂದು ಇದೇ ವೇಳೆ ಶ್ರೀಗಳು ಘೋಷಿಸಿದರು…

Spread the love

Related post

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್ “ಆರೋಗ್ಯ ಮತ್ತು ಶಿಕ್ಷಣವ ಮಕ್ಕಳ ಭವಿಷ್ಯದ ಎರಡು ಚಕ್ರಗಳು. ಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ…
ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…

ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ…

ಮೈಸೂರಿನಲ್ಲಿ ಮೈ ಕೊರೆವ ಚಳಿ…ಹೊದಿಕೆ ವಿತರಿಸಿ ಸಾಮಾಜಿಕ ಕಳಕಳಿ… ಮೈಸೂರು,ಡಿ2,Tv10 ಕನ್ನಡ ಮೈಸೂರಿನಲ್ಲಿ ಮೈ ಕೊರೆಚ ಚಳಿ ಶುರುವಾಗಿದೆ.ರಸ್ತೆ ಬದಿ ಮಲಗುವ ನಿರಾಶ್ರಿತರು ಹೊದಿಕೆ ಇಲ್ಲದೆ ಪರದಾಡುತ್ತಿದ್ದಾರೆ.ನಿರಾಶ್ರಿತರಿಗೆ ಹೊದಿಕೆ…
ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ ಬಲೆಗೆ

ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ…

ಮೈಸೂರು ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಟ್ರ್ಯಾಪ್ಪಿರಿಯಾಪಟ್ಟಣ ಕಂದಾಯ ಇಲಾಖೆ ಸರ್ವೇಯರ್ ರವೀಂದ್ರ ಲೋಕಾಯುಕ್ತ ಬಲೆಗೆಪೋಡಿ ದುರಸ್ತಿ ಸಾಗುವಳಿ ಹೆಸರಿನಲ್ಲಿ ಲಂಚಜಮೀನು ರಸ್ತೆಗೆ ಹೋಗುತ್ತೇ ಅಂತಾ ಹೆದರಿಸಿ ಲಂಚಕ್ಕೆ‌ ಬೇಡಿಕೆ1…

Leave a Reply

Your email address will not be published. Required fields are marked *