ಕೊನೆಗೂ ಎಚ್ಚೆತ್ತ ಜನಪ್ರತಿನಿಧಿಗಳು…ಜನರ ಸಂಕಷ್ಟ ಆಲಿಸಿದ ಶಾಸಕ ದರ್ಶನ್ ಧೃವನಾರಾಯಣ್…ಸಭೆಗೆ ಮಾತ್ರ ಸೀಮಿತವಾದ ಸಂಸದ ಸುನಿಲ್ ಬೋಸ್…

ಕೊನೆಗೂ ಎಚ್ಚೆತ್ತ ಜನಪ್ರತಿನಿಧಿಗಳು…ಜನರ ಸಂಕಷ್ಟ ಆಲಿಸಿದ ಶಾಸಕ ದರ್ಶನ್ ಧೃವನಾರಾಯಣ್…ಸಭೆಗೆ ಮಾತ್ರ ಸೀಮಿತವಾದ ಸಂಸದ ಸುನಿಲ್ ಬೋಸ್…

ನಂಜನಗೂಡು,ಜು21,Tv10 ಕನ್ನಡಕಪಿಲೆಯ ಪ್ರವಾಹಕ್ಕೆ ತತ್ತರಿಸಿರುವ ನಂಜನಗೂಡು ಜನರ ಸಂಕಷ್ಟಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಸ್ಪಂದಿಸಿದ್ದಾರೆ.ಆದ್ರೆ ಸಂಸದ ಸುನಿಲ್ ಬೋಸ್ ರವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದು ಕಾಲ್ಕಿತ್ತಿದ್ದಾರೆ.ಸುನಿಲ್ ಬೋಸ್ ರವರ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಕಬಿನಿ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನಲೆ ಕಪಿಲೆಯ ನದಿ ಪಾತ್ರದಲ್ಲಿರು ಜನ ತತ್ತರಿಸಿದ್ದಾರೆ.ತಗ್ಗು ಪ್ರದೇಶಗಳಿಗೆ ನುಗ್ಗಿ ನೀರು ಆಸ್ತಿಪಾಸ್ತಿಗಳನ್ನ ಅಪೋಷನ ತೆಗೆದುಕೊಂಡಿದೆ.ಮನೆ ಮಠಗಳಿಂದ ಹೊರಗುಳಿದ ಜನನಿರಾಶ್ರಿತರಾಗಿ ಗಂಜಿ ಕೇಂದ್ರ ಆಶ್ರಯ ಪಡೆದಿದ್ದಾರೆ.ಜನರ ಸಂಕಷ್ಟಗಳಿಗೆ ತಾಲೂಕು ಅಧಿಕಾರಿಗಳು ಸ್ಪಂದಿಸಿ ಪರಿಹಾರ ವಿತರಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ.ಇಷ್ಟೆಲ್ಲಾ ಬೆಳವಣಿಗೆಗಳಾಗಿ ಜನ ಬವಣೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು ಇತ್ತ ಸುಳಿದಿರಲಿಲ್ಲ.ಈ ವಿಚಾರವಾಗಿ Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಮಾಡಿ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು.ಎಚ್ಚೆತ್ತ ಶಾಸಕ ದರ್ಶನ್ ಧೃವನಾರಾಯಣ್ ಫೀಲ್ಡ್ ಗೆಇಳಿದಿದ್ದಾರೆ.ನಾಲ್ಕೈದು ದಿನಗಳ ನಂತರ ಅನಾಹುತ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.Tv10 ಕನ್ನಡ ವಾಹಿನಿಯ ಸುದ್ದಿಗೆ ಎಚ್ಚೆತ್ತು ಸ್ಪಂದಿಸಿದ್ದಾರೆ.ಮತ್ತೊಂದೆಡೆ ಸಂಸದ ಸುನಿಲ್ ಭೋಸ್ ತಮ್ಮ ಜವಾಬ್ದಾರಿಯನ್ನ ನಿರ್ವಹಿಸುವಲ್ಲಿ ಎಡವಿದ್ದಾರೆ.ಜನರ ಬಳಿಗೆ ಬಾರದೆ ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದು ಕಾಲ್ಕಿತ್ತಿದ್ದಾರೆ.ಚುನಾವಣೆ ವೇಳೆ ಮತಬೇಟೆಗಾಗಿ ಅನಾಹುತಗಳು ನಡೆದ ಪ್ರದೇಶಗಳಿಗೆ ಆಗಾಗ ಭೇಟಿ ನೀಡಿದ್ದ ಸುನಿಲ್ ಬೋಸ್ ಇದೀಗ ಜನರು ಸಂಕಷ್ಟದಲ್ಲಿರುವಾಗ ಸೂಕ್ತವಾಗಿ ಸ್ಪಂದಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.ಸುನಿಲ್ ಬೋಸ್ ರವರ ಈ ನಡೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.ಇನ್ನಾದ್ರೂ ಎಚ್ಚೆತ್ತುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಲಿ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *