
ಅಪರಾಧ ನಿಯಂತ್ರಣಕ್ಕೆ ಮೈಸೂರು ಖಾಕಿಪಡೆ ಸಮರ…ಮತ್ತಷ್ಟು ಬಿಗಿಯಾದ ನೈಟ್ ಬೀಟ್…ಹಿರಿಯ ಪೊಲೀಸ್ ಅಧಿಕಾರಿಗಳೂ ಭಾಗಿ…
- TV10 Kannada Exclusive
- September 2, 2024
- No Comment
- 135
ಮೈಸೂರು,ಆ2,Tv10 ಕನ್ನಡ
ಪ್ರಮುಖ ರಸ್ತೆ ಪಾರ್ಕ್ಗಳಲ್ಲಿ ರಾತ್ರಿ ಗಸ್ತು ತಿರುಗಿ ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ ನೀಡಿದ್ದಾರೆ.
ಮೈಸೂರಿನ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಲಾಗಿದೆ.
ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ವಿನೂತನ ಕಾರ್ಯಾಚರಣೆ ಆರಂಭವಾಗಿದೆ.
ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾನ್ಹವಿ ನೇತೃತ್ವದಲ್ಲಿ ಕಾರ್ಯಕ್ರಮಗಳಿಗೆ ಚುರುಕು ನೀಡಲಾಗಿದೆ.
ಎಸಿಪಿಗಳು ಇನ್ಸಪೆಕ್ಟರ್ಗಳು ಸಬ್ ಇನ್ಸಪೆಕ್ಟರ್ ಸೇರಿ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದಾರೆ.
ವಾಕಿಂಗ್ ಹಾಗೂ ಬೈಕ್ ಮೂಲಕ ಬೀಟ್ ನಡೆದಿದೆ.
ಅನುಮಾನಸ್ಪದ ವ್ಯಕ್ತಿಗಳನ್ನ ವಿಚಾರಣೆ ಮಾಡಲಾಗುತ್ತಿದೆ.
ಗುಂಪು ಸೇರುವ ಅಡ್ಡಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಮೂಲಕ ಅಪರಾಧ ತಡೆಗೆ ಖಾಕಿ ಪಡೆ ಸಮರ ಸಾರುತ್ತಿದ್ದಾರೆ.
ಸಾರ್ವಜನಿಕರ ಮಧ್ಯೆ ತೆರಳಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುತ್ತಿದ್ದಾರೆ.ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡುತ್ತಿದ್ದಾರೆ…