
ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಸಸ್ಪೆಂಡ್…ತಾಂತ್ರಿಕ ಸಮಿತಿ ನೀಡಿದ ವರದಿ ಆಧಾರದ ಮೇಲೆ ಕ್ರಮ…ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ…
- CrimeTV10 Kannada Exclusive
- September 2, 2024
- No Comment
- 321
ಮೈಸೂರು,ಸೆ2,Tv10 ಕನ್ನಡ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ
ನಡೆದ ಅಕ್ರಮಗಳಿಗೆ ಓರ್ವ ಅಧಿಕಾರಿ ತಲೆದಂಡವಾಗಿದೆ.ತನಿಖೆಗಾಗಿ ರಚಿಸಲಾದ ತಾಂತ್ರಿಕ ಸಮಿತಿ ನೀಡಿದ ವರದಿ ಆಧಾರದ ಮೇಲೆ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ರನ್ನ ಇಲಾಖಾ ವಿಚಾರಣೆಗೆ ಕಾಯ್ದಿರಿಸಿ ಅಮಾನತು ಪಡಿಸಲಾಗಿದೆ. ತಾಂತ್ರಿಕ ಸಮಿತಿ ಕಡತಗಳನ್ನ,ಸುತ್ತೋಲೆಗಳನ್ನ,ಮಾರ್ಗಸೂಚಿಗಳನ್ನ ಪರಿಶೀಲಿಸಿ ನಿಯಮಬಾಹಿರವಾಗಿ ಕೈಗೊಂಡ ಕ್ರಮಗಳ ಬಗ್ಗೆ ವಿಸ್ತೃತ ವರದಿಯನ್ನ ನೀಡಿರುವ ಆಧಾರದ ಮೇಲೆ ಸಸ್ಪೆಂಡ್ ಮಾಡಲಾಗಿದೆ.
ಜಿ.ಟಿ.ದಿನೇಶ್ ಕುಮಾರ್ ರವರ ಆಡಳಿತಾವಧಿಯಲ್ಲಿ ನಡೆದ ಕೆಲವು ಸಭೆಗಳಲ್ಲಿ ಮಂಡಿಸಲಾದ ಬಹುತೇಕ ವಿಷಯಗಳಲ್ಲಿ ಸ್ಪಷ್ಟ ಅಭಿಪ್ರಾಯವನ್ನ ದಾಖಲಿಸದೇ ಮಂಡಿಸಿರುವುದು,ಸರ್ಕಾರದ ಯಾವುದೇ ನಿರ್ದೇಶನಗಳನ್ನ ಪಾಲಿಸದಿರುವುದು,ವ್ಯತಿರಿಕ್ತವಾಗಿ ನಿರ್ಣಯಗಳನ್ನ ಕೈಗೊಂಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.50-50 ಅನುಪಾತದಲ್ಲಿ ನಿಯಮಗಳನ್ಮ ಅನುಸರಿಸದಿರುವುದು ಸೇರಿದಂತೆ ಹಲವು ಅಕ್ರಮಗಳನ್ನ ವರದಿಯಲ್ಲಿ ಸವಿಸ್ತಾರವಾಗಿ ಉಲ್ಲೇಖಿಸಿ ಅಮಾನತು ಆದೇಶ ಹೊರಡಿಸಲಾಗಿದೆ…