ಸ್ವಾತಂತ್ರ್ಯ ತಂದುಕೊಟ್ಟವರಿಗಿಂತ ಸಿನಿಮಾದವರೇ ಆದರ್ಶವಾಗಿದ್ದಾರೆ… ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ವಿಷಾಧ

ಸ್ವಾತಂತ್ರ್ಯ ತಂದುಕೊಟ್ಟವರಿಗಿಂತ ಸಿನಿಮಾದವರೇ ಆದರ್ಶವಾಗಿದ್ದಾರೆ… ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ವಿಷಾಧ

ಮೈಸೂರು,ಸೆ11,Tv10 ಕನ್ನಡ

ಇಂದಿನ ಯುವ ಪೀಳಿಗೆಗೆ ಗಾಂಧಿ, ನೆಹರು, ಅಂಬೇಡ್ಕರ್ ಆದರ್ಶವಾಗಿರದೆ ಸಿನಿಮಾ ನಟ-ನಟಿಯರು ಆರಾಧ್ಯ ದೈವಗಳಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರಿಗಿಂತ ಸಿನಿಮಾದಲ್ಲಿ ನಟಿರುವವರೇ ನಿಜ ನಾಯಕರಾಗುತ್ತಿರುವುದು ಈ ದೇಶದ ದೊಡ್ಡ ದುರಂತ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ವಿಷಾಧ ವ್ಯಕ್ತಪಡಿಸಿದರು.
ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವ ಅರಿಯದ ಯುವಕ-ಯುವತಿಯರು ಸಿನಿಮಾವೇ ಜೀವನ, ನಟ-ನಟಿಯರೇ ಆದರ್ಶ ಎಂದು ಭಾವಿಸಿರುವುದು ಆತಂಕ ಮೂಡಿಸುವ ವಿಷಯವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಪ್ರಸ್ತುತ ಯುವ ಸಮುದಾಯವು ರೀಲ್ಸ್ ಮಾಡುವುದು, ಟ್ರೋಲ್ ಆಗುವುದೇ ನಿಜವಾದ ಸಾಧನೆ ಎಂದು ಭಾವಿಸಿದೆ.ಶಾಲಾ-ಕಾಲೇಜಿನ ಗುರುಗಳಿಗಿಂತಲೂ ಗೂಗಲ್ ಗುರುವೇ ನಿಜವಾದ ಗುರು ಎಂದುಕೊಂಡಿದೆ. ಆದರೆ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಿರಿಯರು ನಡೆಸಿದ ಹೋರಾಟ, ಸಂವಿಧಾನ ಬರೆಯಲು ಡಾ. ಅಂಬೇಡ್ಕರ್ ಪಟ್ಟ ಶ್ರಮ, ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದಂತ್ತಾಗಿದೆ ಎಂದು ನೊಂದು ನುಡಿದರು.ಇಂದಿನ ಯುವಕ-ಯುವತಿಯರಿಗೆ ನಿಮಗೆ ಇಷ್ಟವಾದ ಹೀರೋ-ಹೀರೋಯಿನ್ ಯಾರು ಎಂದು ಕೇಳಿದರೆ, ಅವರು ಸಿನಿಮಾ ನಟ-ನಟಿಯರ ಹೆಸರನ್ನು ಹೇಳುತ್ತಾರೆ. ಆದರೆ, ಜೀವ ಕೊಟ್ಟ ತಂದೆ-ತಾಯಿ, ಜೀವನ ಕಟ್ಟಿಕೊಡಲು ನೆರವಾಗುವ ಬಂಧು-ಬಳಗ, ಗುರು-ಹಿರಿಯರು ಇವರಿಗೆ ಹೀರೋಗಳಾಗಿ ಕಾಣಿಸುವುದೇ ಇಲ್ಲ. ಆದ್ದರಿಂದ ನಮ್ಮ ಪ್ರತಿಕ್ಷಣದ ಬೆಳವಣಿಗೆಯಲ್ಲಿ ತಮ್ಮ ಜೀವನವನ್ನು ಮುಡುಪಾಗಿಡುವ ತಂದೆ-ತಾಯಿಯೆ ನಿಜವಾದ ಹೀರೋಗಳು ಎಂದು ಭಾವಿಸುವವರು ಮಾತ್ರ ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂದು ತಿಳಿಸಿದರು.
ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳನ್ನಾಗಿ ಮಾಡುವುದು ಎಷ್ಟು ಮುಖ್ಯವೋ ಸಮಾಜ ಸೇವಕರನ್ನಾಗಿ ರೂಪಿಸುವುದೂ ಅಷ್ಟೇ ಮುಖ್ಯ. ಏಕೆಂದರೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳದ ಡಾಕ್ಟರ್, ಇಂಜಿನಿಯರ್, ಲಾಯರ್ ಮತ್ತು ಅಧಿಕಾರಿಗಳಿಂದ ಈ ದೇಶಕ್ಕೆ ಉಪಯೋಗಕ್ಕಿಂತಲೂ ಅಪಾಯವೇ ಹೆಚ್ಚು. ದೇಶಕ್ಕೆ ಡಾಕ್ಟರ್, ಇಂಜಿನಿಯರ್, ಅಧಿಕಾರಿ ವರ್ಗ ಎಷ್ಟು ಮುಖ್ಯವೋ ಸಮಾಜ ಸೇವೆ ಮಾಡುವ ಮನೋಭಾವ ಉಳ್ಳ ನಾಗರೀಕರೂ ಅಷ್ಟೇ ಮುಖ್ಯ ಎಂದರು.
1969ರಲ್ಲಿ ಆರಂಭಗೊಂಡ ರಾಷ್ಟ್ರೀಯ ಸೇವಾ ಯೋಜನೆಯು ಸಾವಿರಾರು ಯುವಕ-ಯುವತಿಯರಲ್ಲಿ ಸಮಾಜ ಸೇವಾ ಮನೋಭಾವನೆಯನ್ನು ಹುಟ್ಟು ಹಾಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯೂ ಆಧುನಿಕ ಆಕರ್ಷಣೆಗಳಿಗೆ ಬಲಿಯಾಗಿ ಸೇವಾ ಮನೋಭಾವನೆಗಿಂತ್ತಲೂ ಸ್ವಾರ್ಥ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿದೆ. ಶ್ರಮ ಪಡೆದಯೇ ಎಲ್ಲವನ್ನೂ ಪಡೆದುಕೊಳ್ಳಬೇಕೆಂಬ ಭ್ರಮೆಗೆ ಬಿದ್ದಿರುವ ಯುವ ಸಮ್ಮೂಹ, ಅಡ್ಡ ದಾರಿಗಳನ್ನು ಹಿಡಿದು ಬದುಕನ್ನೇ ನರಕ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಇಂದು ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಜಾಗೃತಿ ಮೂಡಿರುವುದು ಅತ್ಯಂತ ಸಂತೋಷದ ಸಂಗತಿ. ಆದರೆ, ಶಿಕ್ಷಣ ಪಡೆದು ಮತ್ತೆ ಮನೆ ಮತ್ತು ಕುಟುಂಬಕ್ಕೆ ಸೀಮಿತವಾದರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ನೀವು ಪಡೆಯುವ ಶಿಕ್ಷಣ ನಿಮ್ಮ ಪೋಷಕರಲ್ಲಿ ಸಂತೋಷ ತರಬೇಕು, ಸಮಾಜಕ್ಕೆ ಉಪಕಾರಿಯಾಗಬೇಕು, ದೇಶದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಆಗಲೇ, ನೀವು ಪಡೆದ ಶಿಕ್ಷಣ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ ಎಂದು ಕರೆ ನೀಡಿದರು…

Spread the love

Related post

ವಿದ್ಯತ್ ಸ್ಪರ್ಷ…ತಾಯಿಮಗ ಸಾವು…ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ದುರ್ಘಟನೆ…

ವಿದ್ಯತ್ ಸ್ಪರ್ಷ…ತಾಯಿಮಗ ಸಾವು…ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ದುರ್ಘಟನೆ…

ವಿದ್ಯತ್ ಸ್ಪರ್ಷ…ತಾಯಿಮಗ ಸಾವು…ಬೆಳೆಗೆ ಔಷಧಿ ಸಿಂಪಡಿಸುವ ವೇಳೆ ದುರ್ಘಟನೆ… ಹುಣಸೂರು,ಅ29,Tv10 ಕನ್ನಡಬೆಳೆಗಳಿಗೆ ಔಷಧಿ ಸಿಂಪಡಿಸುವ ವೇಳೆ ವಿದ್ಯುತ್ ಸ್ಪರ್ಷಿಸಿ ತಾಯಿ ಮಗ ಸಾವನ್ನಪ್ಪಿದ ದುರಂತ ಘಟನೆ ಹುಣಸೂರು ತಾಲೂಕಿನ…
SLOUCH HAT ಗೆ ಬೈ ಬೈ…PEAK CAP ಗೆ ಹಾಯ್ ಹಾಯ್…ಇಂದಿನಿಂದ ಪೊಲೀಸ್ ಸಿಬ್ಬಂದಿಗಳಿಗೆ ಹೊಸ ಕ್ಯಾಪ್…ಸಿಎಂ,ಡಿಸಿಎಂ ರಿಂದ ಲಾಂಚ್…

SLOUCH HAT ಗೆ ಬೈ ಬೈ…PEAK CAP ಗೆ ಹಾಯ್ ಹಾಯ್…ಇಂದಿನಿಂದ…

ಬೆಂಗಳೂರು,ಅ28,Tv10 ಕನ್ನಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ಹಾಗೂ ಮುಖ್ಯಪೇದೆಗಳಿಗೆ ಹೊಸ ಕ್ಯಾಪ್ ಧರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.ನೂತನವಾಗಿ ಆಕರ್ಷಕವಾಗಿ ಸಿದ್ದಪಡಿಸಲಾದ PEAK CAP ಗೆ ಬೆಂಗಳೂರಿನ…
ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ…

ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ…

ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ… ಮೈಸೂರು,ಅ28,Tv10 ಕನ್ನಡ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಇಂದು ಅಪೂರ್ವ ಸ್ನೇಹಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಚಾಮುಂಡಿಪುರಂ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ…

Leave a Reply

Your email address will not be published. Required fields are marked *