ಧುಮ್ಮಿಕ್ಕುವ ಜಲಪಾತದಲ್ಲಿ ಬಣ್ಣಬಣ್ಣಗಳ ಬೆಳಕಿನ ನರ್ತನ…ರಂಗುರಂಗಿನ ಚುಂಚನಕಟ್ಟೆ ಜಲಪಾತೋತ್ಸವ ಕಣ್ತುಂಬಿಕೊಂಡ ಸಹಸ್ರಾರು ಮಂದಿ… ಕಣ್ತುಂಬಿಕೊಂಡ

ಧುಮ್ಮಿಕ್ಕುವ ಜಲಪಾತದಲ್ಲಿ ಬಣ್ಣಬಣ್ಣಗಳ ಬೆಳಕಿನ ನರ್ತನ…ರಂಗುರಂಗಿನ ಚುಂಚನಕಟ್ಟೆ ಜಲಪಾತೋತ್ಸವ ಕಣ್ತುಂಬಿಕೊಂಡ ಸಹಸ್ರಾರು ಮಂದಿ… ಕಣ್ತುಂಬಿಕೊಂಡ

ಕೆ.ಆರ್.ನಗರ,ನ30,Tv10 ಕನ್ನಡ

ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಚುಂಚನಕಟ್ಟೆ ಜಲಪಾತೋತ್ಸವ ಸಹಸ್ರಾರು ಜನರನ್ನ ತನ್ಮತ್ತ ಸೂಜಿಗಲ್ಲಿನಂತೆ

ಆಕರ್ಷಿಸುತ್ತಿದೆ.ಧುಮ್ಮಿಕ್ಕಿ ಹರಿಯುವ ನೀರಿನ ಮೇಲೆ ಬೆಳಕಿನ ನರ್ತನ ಸಾವಿರಾರು ಮಂದಿಯನ್ನ ಸೆಳೆಯುತ್ತಿದೆ.ಜಲಪಾತೋತ್ಸವದಲ್ಲಿ ನಡೆಯುವ ಬೆಳಕಿನ ಚಿತ್ತಾರಗಳನ್ನ ಸವಿಯಲು ಜನಸಾಗರವೇ ಹರಿದುಬಂದಿದೆ.ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯಲ್ಲಿ ಎತ್ತ ನೋಡಿದರು ಜಗಮಗಿ ಸುವ ವಿದ್ಯುತ್ ದೀಪಾಲಂಕಾರ, ರಸ ದೌತಣ ನೀಡಲು ಬೃಹತ್ ವೇದಿಕೆ.ಹರಿಯುವ ನೀರಿನಲ್ಲಿ ಕಂಗೊಳಿಸುವ ಲೇಸರ್ ಕಿರಣಗಳು ಮನಸೂರೆಗೊಳ್ಳುವಂತೆ ಮಾಡಿದೆ. ವಿದ್ಯುತ್ ದೀಪಾಲಂಕೃತ ಧನುಷ್ಕೋಟಿಯಲ್ಲಿ ಅಲೆ ಅಲೆಯಾಗಿ ತೇಲಿಬಂದ ಸಂಗೀತ ನಿಸರ್ಗ ಪ್ರೇಮಿಗಳ ಹೃದಯ ಗೆದ್ದಿದೆ.ಜಲಪಾತೋತ್ಸವದ ಮೊದಲನೇ ದಿನವಾದ ಇಂದು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ರಾಜ್ಯದ ನಾನಾ ಜಿಲ್ಲೆಗಳಿಂದ ಪ್ರವಾಹೋಪಾದಿಯಲ್ಲಿ ಹರಿದು ಬಂದಿದ್ದು ಬೆಳಕಿನ ಸಾಗರದಲ್ಲಿ ಮಿಂದೆದ್ದಿದ್ದಾರೆ.ಜಲಪಾತೋತ್ಸವದ ಬೆಳಕಿನ ಸೊಬಗನ್ನ ಮನಸಾರೆ ಅಸ್ವಾದಿಸುತ್ತಿದ್ದಾರೆ.
ನವ ವಧುವಿನಂತೆ ಸಿಂಗಾರಗೊಂಡಿರುವ ಚುಂಚನಕಟ್ಟೆಯ ಶ್ರೀರಾಮ ದೇವಾಲಯ, ಬಸವನ ವೃತ್ತ ಸೇರಿದಂತೆ ವಿವಿದೆಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಜನರನ್ನ ಮಂತ್ರ ಮುಗ್ಧರನ್ನಾಗಿಸಿದೆ…

Spread the love

Related post

ನಗರದಲ್ಲಿ ಖಾಕಿ ಪಡೆ ಹೈ ಅಲರ್ಟ್…ಅಶೋಕಾ ರಸ್ತೆಯಲ್ಲಿ ಗಸ್ತು…ಜ್ಯೂಯಲರಿ ಮಳಿಗೆ,ಬ್ಯಾಂಕ್ ಭದ್ರತೆ ಬಗ್ಗೆ ಪರಿಶೀಲನೆ…ಸಲಹೆ ಸೂಚನೆ…

ನಗರದಲ್ಲಿ ಖಾಕಿ ಪಡೆ ಹೈ ಅಲರ್ಟ್…ಅಶೋಕಾ ರಸ್ತೆಯಲ್ಲಿ ಗಸ್ತು…ಜ್ಯೂಯಲರಿ ಮಳಿಗೆ,ಬ್ಯಾಂಕ್ ಭದ್ರತೆ…

ಮೈಸೂರು,ಜ20,Tv10 ಕನ್ನಡ ದರೋಡೆ ಪ್ರಕರಣಗಳು ಘಟಿಸಿದ ಬೆನ್ನ ಹಿಂದೆಯೇ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ಸಾಂಸ್ಕೃತಿಕ ನಗರಿಯಲ್ಲಿ ಯಾವುದೇ ಪ್ರಕರಣಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಮುಂದಾಗಿದ್ದಾರೆ.…
ಮೇಕಪ್ ಆರ್ಟಿಸ್ಟ್ ಖಾಸಗಿ ಫೋಟೋಸ್ ವಿಡಿಯೋ ತೆಗೆದ ಛಾಯಾಗ್ರಾಹಕ…ಮಹಿಳೆ ಕೊಟ್ಟ ಸಾಲ ತೀರಿಸಲು ಸಾಧ್ಯವಾಗದೆ ಬ್ಲಾಕ್ ಮೇಲ್…

ಮೇಕಪ್ ಆರ್ಟಿಸ್ಟ್ ಖಾಸಗಿ ಫೋಟೋಸ್ ವಿಡಿಯೋ ತೆಗೆದ ಛಾಯಾಗ್ರಾಹಕ…ಮಹಿಳೆ ಕೊಟ್ಟ ಸಾಲ…

ಮೈಸೂರು,ಜ20,Tv10 ಕನ್ನಡ ಆರ್ಥಿಕ ಸಂಕಷ್ಟದಲ್ಲಿದ್ದ ಸ್ನೇಹಿತನಿಗೆ ಕೊಟ್ಟಿದ್ದ ಸಾಲ ವಾಪಸ್ ಹಿಂದಿರುಗಿಸುವಂತೆ ಕೇಳಿದ ಮೇಕಪ್ ಆರ್ಟಿಸ್ಟ್ ರವರ ಖಾಸಗಿ ಫೋಟೋಸ್ ಮತ್ತು ವಿಡಿಯೋಗಳನ್ನ ಪ್ರದರ್ಶಿಸಿ ಬ್ಲಾಕ್ ಮೇಲ್ ಮಾಡಿರುವ…
ಸೀಟ್ ಬಾಡಿಗೆ ವಿಚಾರದಲ್ಲಿ ಕಿರಿಕ್…ಆಟೋ ಚಾಲಕನಿಗೆ ಚಾಕುವಿನಿಂದ ಇರಿತ…ಇಬ್ಬರ ವಿರುದ್ದ ಪ್ರಕರಣ ದಾಖಲು…

ಸೀಟ್ ಬಾಡಿಗೆ ವಿಚಾರದಲ್ಲಿ ಕಿರಿಕ್…ಆಟೋ ಚಾಲಕನಿಗೆ ಚಾಕುವಿನಿಂದ ಇರಿತ…ಇಬ್ಬರ ವಿರುದ್ದ ಪ್ರಕರಣ…

ಮೈಸೂರು,ಜ20,Tv10 ಕನ್ನಡ ಆಟೋ ಸೀಟ್ ಬಾಡಿಗೆ ಹೊಡೆಯುವ ವಿಚಾರದಲ್ಲಿ ಇಬ್ಬರು ಯುವಕರು ಕಿರಿಕ್ ತೆಗೆದು ಚಾಲಕನಿಗೆ ಚಾಕುವಿನಿಂದ ಇರಿದ ಘಟನೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಾತಗಳ್ಳಿ ನಿವಾಸಿ…

Leave a Reply

Your email address will not be published. Required fields are marked *