
ಚಾಮುಂಡಿಪುರಂ ವೃತ್ತದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನೆನಪು
- TV10 Kannada Exclusive
- December 30, 2024
- No Comment
- 79


ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ 15ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಗರದ ಚಾಮುಂಡಿ ಪುರಂ ವೃತ್ತದಲ್ಲಿ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ವಿಷ್ಣುವರ್ಧನ್ ರವರ ಭಾವಚಿತ್ರ ಹಿಡಿದು ಮೊಂಬತ್ತಿ ಬೆಳಗಿ ಗೌರವ ಸಲ್ಲಿಸಲಾಯಿತು ನಂತರದಲ್ಲಿ ವಿಷ್ಣುವರ್ಧನ್ ರವರ ಚಿತ್ರಗೀತೆಗಳನ್ನು ಕಾರ್ಯಕ್ರಮದಲ್ಲಿ ಕೇಳಿಸಲಾಯಿತು
ಇದೇ ಸಂಧರ್ಭದಲ್ಲಿ ಸಂದೀಪ್ ರವರು ಮಾತನಾಡಿ ಸಾಹಸಸಿಂಹ ವಿಷ್ಣುವರ್ಧನ್ ರವರ ಚಿತ್ರಗಳು ಕೌಟುಂಬಿಕ ಪ್ರಧಾನವಾದುದು ಸಾಮಾಜಿಕ ಸಂದೇಶ ನೀಡುತ್ತಿದ್ದವು, ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರ ಗರಡಿಯಿಂದ ಗುರುತಿಸಿಕೊಂಡ ಸಾಹಸಸಿಂಹ ವಿಷ್ಣುವರ್ಧನ್ ರೆಬಲ್ ಸ್ಟಾರ್ ಅಂಬರೀಶ್ ಜೈಜಗದೀಶ್ ರವರಿಗೆ ಚಾಮುಂಡಿಪುರಂ ಅಚ್ಚುಮೆಚ್ಚಿನ ವೃತ್ತವಾಗಿತ್ತು, ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗಲೆಲ್ಲಾ ಒಮ್ಮೆ ಚಾಮುಂಡಿಪುರಂ ವೃತ್ತಕ್ಕೆ ಬಂದು ತಮ್ಮ ಬಾಲ್ಯದ ದಿನಗಳು ನೆನೆದು ಅಭಿಮಾನಿಗಳನ್ನ ಭೇಟಿ ಮಾಡಿ ಹೋಗುತ್ತಿದ್ದರು
ಈ ಪುಣ್ಯ ಸ್ಮರಣ್ಯ ಕಾರ್ಯಕ್ರಮದಲ್ಲಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸಂದೀಪ್, ಮಾಜಿನಗರ ಪಾಲಿಕೆ ಸದಸ್ಯರಾದ ಪಾರ್ಥಸಾರಥಿ, ನಿರೂಪಕ ಅಜಯ್ ಶಾಸ್ತ್ರಿ ಮುಖಂಡರಾದ ಅಂಬಳೆ ಶಿವಣ್ಣ, ಧರ್ಮೇಂದ್ರ, ಪುರುಷೋತ್ತಮ್, ವಿಕ್ರಮ ಅಯ್ಯಂಗಾರ್, ಪ್ರಭು, ಅರವಿಂದ, ಅಭಿನಂದನ್ ಅರಸ್, ಲೋಕೇಶ್, ಅರ್ಜುನ್ ಅರಸ್, ಸುಬ್ರಹ್ಮಣ್ಯ, ಗುರು, ರಾಜೇಶ್, ಮಹೇಶ್ ಅರಸ್, ಶೇಖರ್, ಸುರೇಶ್, ತೀರ್ಥ, ಸಂತೋಷ್, ಲತಾ, ಸುಶೀಲ, ಭುವನಾಕ್ಷಿ, ಕುಮಾರ್ ಸ್ವಾಮಿ, ವೀಣಾ, ಬಸವರಾಜು, ಕಿರಣ್, ಸೂರಜ್, ಲಿಖಿತ್, ಪವನ್, ಶಿವರಾಜು ಮುಂತಾದವರು ಹಾಜರಿದ್ದರು