ಲೆಕ್ಚರರ್ ಜೊತೆ ಸ್ಟೂಡೆಂಟ್ ಎಸ್ಕೇಪ್…ಪಾಠ ಹೇಳಿಕೊಟ್ಟ ಮೇಷ್ಟ್ರನ್ನ ವರಿಸಿದ ವಿಧ್ಯಾರ್ಥಿನಿ…ಹಾಸಿಗೆ ಹಿಡಿದ ತಂದೆ…ವಿದ್ಯೆ ಹೇಳಿಕೊಡುವ ಗುರು ಕೆಲಸವಾ ಇದು…?

ಲೆಕ್ಚರರ್ ಜೊತೆ ಸ್ಟೂಡೆಂಟ್ ಎಸ್ಕೇಪ್…ಪಾಠ ಹೇಳಿಕೊಟ್ಟ ಮೇಷ್ಟ್ರನ್ನ ವರಿಸಿದ ವಿಧ್ಯಾರ್ಥಿನಿ…ಹಾಸಿಗೆ ಹಿಡಿದ ತಂದೆ…ವಿದ್ಯೆ ಹೇಳಿಕೊಡುವ ಗುರು ಕೆಲಸವಾ ಇದು…?

ಹುಣಸೂರು,ಡಿ31,Tv10 ಕನ್ನಡ

ಶಿಕ್ಷಕಿಯಾಗಲು ಬಿಎಡ್ ಕಾಲೇಜ್ ಗೆ ಸೇರಿದ ಯುವತಿ ಪಾಠ ಹೇಳಿಕೊಟ್ಟ ಗುರುವಿನ ಜೊತೆಗೆ ಓಡಿ ಹೋಗಿ ಮದುವೆ ಆದ ಘಟನೆ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.ಮನೆಯವರ ವಿರೋಧ ಲೆಕ್ಕಿಸದೆ ತನಗಿಂತ 15 ವರ್ಷ ಹಿರಿಯನಾದ ಲೆಕ್ಚರ್ ನ್ನ ಮದುವೆ ಆಗಿದ್ದಲ್ಲದೆ ರಕ್ಷಣೆ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.ಮಗಳ ವರ್ತನೆಗೆ ಬೇಸತ್ತ ಪೋಷಕರು ಶಾಕ್ ಗೆ ಒಳಗಾಗಿದ್ದಾರೆ.ಮಗಳ ಯೋಚನೆಯಲ್ಲಿ ತಂದೆ ಹಾಸಿಗೆ ಹಿಡಿದಿದ್ದಾರೆ.

ಹುಣಸೂರಿನ ನಿವಾಸಿ ಪೂರ್ಣಿಮ(24) ಎಂಎ ಮುಗಿಸಿ ಬಿಎಡ್ ಗಾಗಿ ಹುಣಸೂರಿನ ಮಹಾವೀರ್ ಕಾಲೇಜ್ ಆಫ್ ಎಜುಕೇಷನ್ ಗೆ ಸೇರಿದ್ದಾಳೆ.ಪಾಠ ಕಲಿಯುವ ಜೊತೆಗೆ ಲೆಕ್ಚರರ್ ಯಶೋದಕುಮಾರ್(39) ಜೊತೆ ಲವ್ವಿಡವ್ವಿ ಶುರುವಾಗಿದೆ.ಈ ವಿಚಾರ ಮನೆಯವರ ಗಮನಕ್ಕೆ ಬಂದಿದೆ.ಇಬ್ಬರು ಪ್ರೇಮಿಗಳು ಮದುವೆ ಆಗಲು ತೀರ್ಮಾನಿಸಿದ್ದಾರೆ.ಪೂರ್ಣಿಮ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ.ಕಾಲೇಜಿಗೆ ಹೋಗದಂತೆ ತಡೆ ಒಡ್ಡಿದ್ದಾರೆ.ಆದ್ರೆ ಮೊಬೈಲ್ ನಲ್ಲೇ ಇವರ ಪ್ರೇಮಕತೆ ಮುಂದುವರೆದಿದೆ.ಡಿ.26 ರಂದು ಸರ್ಟಿಫಿಕೇಟ್ ತರುವುದಾಗಿ ತಿಳಿಸಿ ಮನೆ ಬಿಟ್ಟ ಪೂರ್ಣಿಮ ಹಿಂದಿರುಗಿಲ್ಲ.ಮೊಬೈಲ್ ನಲ್ಲಿ ಮದುವೆ ಆಗಿರುವುದಾಗಿ ಮೆಸೇಜ್ ಹಾಕಿದ್ದಾಳೆ.ನಮ್ಮಿಬ್ಬರಿಗೂ ತೊಂದರೆ ನೀಡಬಾರದೆಂಬ ಉದ್ದೇಶದಿಂದ ರಕ್ಷಣೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾಳೆ.ಮಕ್ಕಳಿಗೆ ಪಾಠ ಹೇಳಿಕೊಟ್ಟು ಬುದ್ದಿ ಕಲಿಸಬೇಕಿದ್ದ ಶಿಕ್ಷಕರೇ ಹಾದಿ ತಪ್ಪಿದ್ದಾರೆ.

ಬೀದಿಬದಿ ಸೊಪ್ಪುಮಾರಿ 2 ಲಕ್ಷ ಸಾಲ ಮಾಡಿ ಕಾಲೇಜ್ ಗೆ ಸೇರಿಸಿದ ಮಗಳು ಮಾಡಿದ ಕೆಲಸಕ್ಕೆ ಹೆತ್ತವರು ಶಾಕ್ ಆಗಿದ್ದಾರೆ.ಪಾಠ ಹೇಳಿಕೊಡಬೇಕಾದ ಗುರುವಿನ ಕೆಲಸ ಇದೇನಾ ಎಂದು ತಾಯಿ ಮಹದೇವಮ್ಮ ಹಿಡಿ ಶಾಪ ಹಾಕುತ್ತಿದ್ದಾರೆ.ಹಾಸಿಗೆ ಹಿಡಿದ ತಂದೆ ಸಜ್ಜೇಗೌಡ ಎರಡು ಲಕ್ಷ ಸಾಲ ಮಾಡಿ ಓದಿಸಿ ಮುಂದಿನ ದಿನಗಳಲ್ಲಿ ನಮ್ಮ ನೆರವಿಗೆ ಬರುತ್ತಾಳೆ ಎಂದುಕೊಂಡ್ರೆ ಹೀಗಾ ಮಾಡೋದು ಎಂದು ನೊಂದಿದ್ದಾರೆ.ಒಟ್ಟಾರೆ.ಪೂರ್ಣಿಮಾ ಕೊಟ್ಟ ಶಾಕ್ ಸಜ್ಜೇಗೌಡ ಕುಟುಂಬದಲ್ಲಿ ಬಿರುಗಾಳಿ ಬೀಸಿದಂತಾಗಿದೆ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *