
ಬಂಡೀಪುರ ಮುಖ್ಯ ರಸ್ತೆ ಬಳಿ ಕರಡಿ ದರುಶನ…ಮುಡಾ ಮಾಜಿ ಅಧ್ಯಕ್ಷ ರಾಜೀವ್ ರವರ ಮೊಬೈಲ್ ನಲ್ಲಿ ದೃಶ್ಯ ಸೆರೆ…
- TV10 Kannada Exclusive
- December 31, 2024
- No Comment
- 137
ಮೈಸೂರು,ಡಿ31,Tv10 ಕನ್ನಡ
ಬಂಡಿಪುರ ಅರಣ್ಯ ವಲಯದ ಮುಖ್ಯರಸ್ತೆಯಲ್ಲಿ ಕರಡಿ ದರುಶನ ನೀಡಿದೆ.ರಸ್ತೆ ಬಳಿಯಲ್ಲೇ ಕುಳಿತಿದ್ದ ಕರಡಿಯ ದೃಶ್ಯ ಮುಡಾ ಮಾಜಿ ಅಧ್ಯಕ್ಷ ರಾಜೀವ್ ರವರ ಮೊಬೈಲ್ ನಲ್ಲಿ ಸೆರೆಯಾಗಿದೆ.ನಿನ್ನೆ ಕುಟುಂ ಸಮೇತ ಮದುಮಲೈ ಗೆ ತೆರಳಿದ್ದ ರಾಜೀವ್ ರವರು ಹಿಂದಿರುಗಿ ಬರುವಾಗ ಅಪರೂಪದ ದೃಶ್ಯ ಕಂಡು ಬಂದಿದೆ.ಸಹಜವಾಗಿ ಕರಡಿಗಳು ರಸ್ತೆ ಬಳಿ ಕಾಣಿಸಿಕೊಳ್ಳುವುದಿಲ್ಲ.ಆದ್ರೆ ನಿನ್ನೆ ರಸ್ತೆ ಬಳಿ ಕಾಣಿಸಿಕೊಂಡ ಕರಡಿ ಸುಮಾರು 30 ಸೆಕೆಂಡುಗಳ ಕಾಲ ಒಂದೇ ಸ್ಥಳದಲ್ಲಿ ವಿರಮಿಸುತ್ತಾ ದರುಶನ ನೀಡಿದೆ.ಕರಡಿಯ ಚಲನವಲನಗಳನ್ನ ರಾಜೀವ್ ರವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ…