ಕೋಟ್ಯಾಂತರ ಬೆಲೆ ಬಾಳುವ ಜಮೀನು ಜಿಲ್ಲಾಡಳಿತ ವಶಕ್ಕೆ…ತಹಸೀಲ್ದಾರ್ KM ಮಹೇಶ್ ಕುಮಾರ್ ನೇತೃತ್ವದಲ್ಲಿ ಕ್ರಮ…

ಕೋಟ್ಯಾಂತರ ಬೆಲೆ ಬಾಳುವ ಜಮೀನು ಜಿಲ್ಲಾಡಳಿತ ವಶಕ್ಕೆ…ತಹಸೀಲ್ದಾರ್ KM ಮಹೇಶ್ ಕುಮಾರ್ ನೇತೃತ್ವದಲ್ಲಿ ಕ್ರಮ…

ಮೈಸೂರು,ಜ3,Tv10 ಕನ್ನಡ

ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದು ಫಲಕ ಅಳವಡಿಸುವ ಮೂಲಕ ತನ್ನ ವಶಕ್ಕೆ ಪಡೆದಿದೆ.ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ರವರ ಆದೇಶದಂತೆ ತಹಸೀಲ್ದಾರ್ KM ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯನ್ನ ವಶಕ್ಕೆ ಪಡೆದಿದ್ದಾರೆ

ಮೈಸೂರು ತಾಲೂಕು ಕಸಬಾ ಹೋಬಳಿ ಹೆಬ್ಬಾಳು ಗ್ರಾಮದ ಸರ್ವೆ ನಂ.221 ರ 1.25 ಎಕ್ರೆ ಜಮೀನು ಸರ್ಕಾರಕ್ಕೆ ಸೇರಿದ ಆಸ್ತಿ.ಸದರಿ ಆಸ್ತಿಯಲ್ಲಿ ಭೂಗಳ್ಳರು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದ ಮಾಹಿತಿ ಅರಿತ ತಹಸೀಲ್ದಾರ್ KM ಮಹೇಶ್ ಕುಮಾರ್ ದಾಖಲೆಗಳನ್ನ ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.ವಿಜಯನಗರ ಠಾಣೆಗೆ ಪತ್ರ ಬರೆದು ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರು.ಇದರಂತೆ ನಿರ್ಮಾಣ ಕಾರ್ಯಕ್ಕೆ ಬ್ರೇಕ್ ಹಾಕಲಾಗಿತ್ತು.ಇಂದು ಸದರಿ ಜಾಗದಲ್ಲಿ ಫಲಕ ಅಳವಡಿಸುವ ಮೂಲಕ ತಮ್ಮ ವಶಕ್ಕೆ ಪಡೆದಿದ್ದಾರೆ.

ವಿಶೇಷ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ULA 1135/76-77 ದಿನಾಂಕ 5-7-85 ರಂತೆ ಸದರಿ ಜಮೀನನ್ನ ಹೆಚ್ಚುವರಿ ನಗರಾಸ್ತಿ ಎಂದು ಘೋಷಿಸಿ RTC ಯಲ್ಲಿ ‘ಸರ್ಕಾರ’ ಎಂದು ಘೋಷಿಸಿ ನಮೂದಾಗಿದೆ.ದಾಖಲೆಗಳ ಪ್ರಕಾರ ಸರ್ಕಾರಕ್ಕೆ ಸೇರಿದ ಆಸ್ತಿಯಲ್ಲಿ ಭೂಗಳ್ಳರು ಅಕ್ರಮವಾಗಿ ಕಟ್ಟಡ ನಿರ್ಮಿಸಿ ಮಾರಾಟ ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿ ತಹಸೀಲ್ದಾರ್ KM ಮಹೇಶ್ ಕುಮಾರ್ ರವರು ಪೊಲೀಸರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು.ನಿನ್ನೆ ಕಟ್ಟಡ ಕಾಮಗಾರಿಯನ್ನ ಸ್ಥಗಿತಗೊಳಿಸಿದ KM ಮಹೇಶ್ ಕುಮಾರ್ ಇಂದು ಸದರಿ ಜಾಗದಲ್ಲಿ ಫಲಕ ಅಳವಡಿಸಿ ಜಿಲ್ಲಾಡಳಿತದ ವಶಕ್ಕೆ ಪಡೆದಿದ್ದಾರೆ.ಶೀಘ್ರದಲ್ಲೇ ಅಕ್ರಮ ಕಟ್ಟಡವನ್ನೂ ಸಹ ತೆರುವುಗೊಳಿಸುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.

ಇಂದಿನ ಕಾರ್ಯಾಚರಣೆಯಲ್ಲಿ ಆರ್.ಐ.ಹೇಮಂತ್ ಕುಮಾರ್,ಗ್ರಾಮ ಆಡಳಿತಾಧಿಕಾರಿಗಳಾದ ಮಹೇಶ್ .ಡಿ ಹಾಗೂ ಅಜೀಮ್ ಖಾನ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ….

Spread the love

Related post

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ… ಮೈಸೂರು,ಮಾ8,Tv10 ಕನ್ನಡ ವಿಶ್ವಕಪ್…
ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ… ನಂಜನಗೂಡು,ಮಾ8,Tv10 ಕನ್ನಡ ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ…
ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್ ವಾರ್ನಿಂಗ್…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್…

Leave a Reply

Your email address will not be published. Required fields are marked *