
ಮಿನಿಬಸ್ ನಲ್ಲಿ ಮಲಗಿದ್ದ ಡ್ರೈವರ್ ಕೊಲೆಗೆ ಯತ್ನ…ಹಣಕ್ಕಾಗಿ ಕೃತ್ಯ…
- TV10 Kannada Exclusive
- January 4, 2025
- No Comment
- 118
ನಂಜನಗೂಡು,ಜ4,Tv10 ಕನ್ನಡ
ಹಣಕ್ಕಾಗಿ ಮಿನಿಬಸ್ ನಲ್ಲಿ ಮಲಗಿದ್ದ ಡ್ರೈವರ್ ನ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ನಂಜನಗೂಡು ಟೌನ್ ನಲ್ಲಿ ನಡೆದಿದೆ.ಸುರೇಶ್ (43) ಗಾಯಗೊಂಡಿ ಆಸ್ಪತ್ರೆ ಸೇರಿರುವ ಚಾಲಕ.ಕ್ಲೀನರ್ ಸೂರಿ.ಅ.ಲೂಸ್ ಸೂರಿ ಕೊಲೆಗೆ ಯತ್ನಿಸಿದ್ದಾನೆಂದು ಬಸ್ ಮಾಲೀಕರಾದ ಶಫಿಉಲ್ಲಾ ಖಾನ್ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಷಿಉಲ್ಲಾ ಖಾನ್ ರವರಿಗೆ ಸೇರಿದ ಮಿನಿಬಸ್ ಗೆ ಸುರೇಶ್ ಹಲವಾರು ವರ್ಷಗಳಿಂದ ಚಾಲಕರಾಗಿದ್ದಾರೆ.ಜನವರಿ 3 ರಂದು ಮೈಸೂರಿನ ಮಹಾರಾಣಿ ಕಾಲೇಜು ವಿಧ್ಯಾರ್ಥಿನಿಯರನ್ನ ಮಡಿಕೇರಿ ಪ್ರವಾಸಕ್ಕೆ ಕರೆದೊಯ್ದು ಹಿಂದಿರುಗಿ ಬಂದು ಉಳಿಕೆ ಹಣ 9500/- ರೂಗಳನ್ನ ತಮ್ಮ ಬಳಿ ಇಟ್ಟುಕೊಂಡು ಮಿನಿಬಸ್ ನಲ್ಲೇ ಮಲಗಿದ್ದಾರೆ.ಮರುದಿನ ಸುರೇಶ್ ರಕ್ತದ ಮಡುವಿನಲ್ಲಿ ಕಂಡುಬಂದಿದ್ದಾರೆ.ಸಿಮೆಂಟ್ ಇಟ್ಟಿಗೆಯಿಂದ ಸುರೇಶ್ ತಲೆಗೆ ಹೊಡೆದು ಕೊಲೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.ಈ ಹಿಂದೆ ಬಸ್ ಕ್ಲೀನರ್ ಆಗಿದ್ದ ಸೂರಿ ಹಣಕ್ಕಾಗಿ ಕೊಲೆ ಮಾಡಿದ್ದಾನೆಂದು ಅನುಮಾನ ವ್ಯಕ್ತಪಡಿಸಿ ಶಫಿಉಲ್ಲಾ ಖಾನ್ ದೂರು ನೀಡಿದ್ದಾರೆ.ಸುರೇಶ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಸೂರಿ ಇದೀಗ ನಾಪತ್ತೆಯಾಗಿದ್ದಾನೆ.ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…