ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ…ತಾಯಿ ಪತ್ತೆ…

ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ…ತಾಯಿ ಪತ್ತೆ…

ಎಚ್.ಡಿ.ಕೋಟೆ,ಜ11,Tv10 ಕನ್ನಡ

ನಾಲ್ಕು ದಿನಗಳ ಹಿಂದೆ ನವಜಾತ ಗಂಡು‌ ಶಿಶುವಿನ ಪ್ರಕರಣದ ಸಂಭಂಧ ಇದೀಗ ಪಾಪಿ ತಾಯಿ ಪತ್ತೆಯಾಗಿದ್ದಾಳೆ.ಆರೋಗ್ಯ ಇಲಾಖೆ

ಅಧಿಕಾರಿಗಳು ಹರಸಾಹಸ ನಡೆಸಿ ತಾಯಿಯನ್ನ ಪತ್ತೆ ಮಾಡಿದ್ದಾರೆ.16 ವರ್ಷದ ಅಪ್ರಾಪ್ತ ಬಾಲಕಿಯೇ ಮಗುವಿನ ತಾಯಿ ಆಗಿದ್ದಾಳೆ.ಮದುವೆಯಾಗದೇ ಇದ್ದರೂ ಮಗು ಜನಿಸಿದ್ದರಿಂದ ಮಗು ಜೀವಂತವಾಗಿ ಚರಂಡಿಗೆ ಎಸೆದಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ.ತಾಯಿ ಮಾಡಿದ ತಪ್ಪಿಗೆ ಮಗು ಅನಾಥವಾಗಿ ಜಿಲ್ಲಾಸ್ಪತ್ರೆಯ ಆಶ್ರಯದಲ್ಲಿದೆ.
ಎಚ್.ಡಿ.ಕೋಟೆ ತಾಲೋಕಿನ ರಾಜೇಗೌಡನಹುಂಡಿ ಗ್ರಾಮದಲ್ಲಿ ಘಟನೆ ನಡೆದಿತ್ತು.ರಾಜೇಗೌಡನಹುಂಡಿ ಗ್ರಾಮದ ಅಪ್ರಾಪ್ತ ಬಾಲಕಿಯೇ ಮಗು ಚರಂಡಿಗೆಸಿದಿರುವುದು ಬೆಳಕಿಗೆ ಬಂದಿದೆ. ಮಗು ಚರಂಡಿಗೆಸೆದು ಖಾಸಗಿ ಆಸ್ಪತ್ರೆ ವೈದ್ಯರಲ್ಲಿ ಹೆರಿಗೆ ಮರೆಮಾಚಿ ಹೊಟ್ಟೆನೋವೆಂದು ಹೇಳಿ ಚಿಕಿತ್ಸೆ ಪಡೆದಿದ್ದಾಳೆ.ಕಳೆದ ವರ್ಷ ಬಾಲಕಿಗೆ ವಿವಾಹ ನೆರವೇರಿಸಲು ಸಿದ್ದತೆ ನಡೆದಿದ್ದು ಸಿಡಿಪಿಒ ಇಲಾಖೆ ಮಧ್ಯ ಪ್ರವೇಶದಿಂದ ತಡೆ ಹಿಡಿಯಲಾಗಿತ್ತು.
ಸಧ್ಯದ ಸ್ಥಿತಿಯಲ್ಲಿ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಗು ತಾಯಿ ಮಡಿಲಿಗೆ ಸೇರಿಸಲು ಅಧಿಕಾರಿಗಳ ಹರಸಾಹಸ ನಡೆಸುತ್ತಿದ್ದಾರೆ.ಮತ್ತೊಂದೆಡೆ ಮಗು ಬೇಡವೇ
ಬೇಡ ಎಂದು ತಾಯಿ ನಿರಾಕರಿಸುತ್ತಿದ್ದಾಳೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆಯಲ್ಲೇ ಬಾಲ್ಯವಿವಾಹದಲ್ಲಿ ಎಚ್.ಡಿ.ಕೋಟೆ ತಾಲೋಕು ಪ್ರಥಮ ಸ್ಥಾನದಲ್ಲಿದ್ದು ಇಂದಿಗೂ ತಾಲೋಕಿನಲ್ಲಿ ಕದ್ದುಮುಚ್ಚಿ ಬಾಲ್ಯವಿವಾಹಗಳು ನಡೆಯುತ್ತಿವೆ.
ಬಾಲ್ಯವಿವಾಹ ಅಪರಾಧ ಎಂದು ಕಾನೂನು ಅರಿವು ಮೂಡಿಸಿದರೂ ಎಚ್ಚೆತ್ತುಕೊಳ್ಳದ ಜನತೆ…

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *