
ಸಹಕಾರಿ ಸಂಘದ ಹಣ ಗುಳುಂ…ಸಿಇಓ ವಿರುದ್ದ FIR…30.18 ಲಕ್ಷ ದುರುಪಯೋಗ ಆರೋಪ…
- TV10 Kannada Exclusive
- January 12, 2025
- No Comment
- 364
ಮೈಸೂರು,ಜ12,Tv10 ಕನ್ನಡ
ಮೈಸೂರಿನ ಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಗಿಲಯೋಗಿ ವಿವಿದೋದ್ದೇಶ ಸಹಕಾರ ಸಂಘದ 30.18 ಲಕ್ಷ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಇಓ ವಿರುದ್ದ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.ಸಂಸ್ಥೆಯ ಅಧ್ಯಕ್ಷರಾದ ಪರಮೇಶ್ವರ ರವರು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಎಂಬುವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.
ಕಳೆದ 10 ವರ್ಷಗಳಿಂದ ವೆಂಕಟೇಶ್ ಸಂಸ್ಥೆಯಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನೇಗಿಲಯೋಗಿ ವಿವಿದೋದ್ದೇಶವಸೌಹಾರ್ಧ ಸಹಕಾರಿ ಸಂಸ್ಥೆಯು ಮರುಳೇಶ್ವರ ಸೇವಾ ಟ್ರಸ್ಟ್ ಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು.ಕಾರಣಾಂತರದಿಂದ 19-02-2024 ಬೀಗ ಹಾಕಲಾಗಿತ್ತು.ಈ ಹಿನ್ನಲೆ ನೇಗಿಲಯೋಗಿ ಸಂಸ್ಥೆ 27-06-2024 ರಂದು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.ಈ ಅವಧಿಯಲ್ಲಿ ಷೇರುದಾರರು ಹಾಗೂ ಸಾಲಗಾರರು ಪಾವತಿಸಬೇಕಾದ ಹಣವನ್ನ ಸಿಇಓ ವೆಂಕಟೇಶ್ ರವರಿಗೆ ತಲುಪಿಸಿದ್ದಾರೆ.ಹಣಕ್ಕೆ ರಸೀತಿ ಸಹ ನೀಡಿದ್ದಾರೆ.ಆದ್ರೆ ಹಣವನ್ನ ಸಂಸ್ಥೆಯ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಇನ್ನಿತರ ಖಾತೆಗಳಿಗೆ ಜಮಾ ಮಾಡಿದ್ದಾರೆ.ಈ ಬಗ್ಗೆ ವೆಂಕಟೇಶ್ ರವರನ್ನ ಪ್ರಶ್ನಿಸಿದಾಗ 3.06 ಲಕ್ಷ ಬಳಸಿಕೊಂಡಿರುವುದಾಗಿ ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದಾರೆ.ಆದ್ರೆ ಆಡಿಟ್ ಮಾಡಿಸಿದಾಗ 30.18 ಲಕ್ಷ ಹಣ ದುರುಪಯೋಗವಾಗಿರುವುದಯ ಬೆಳಕಿಗೆ ಬಂದಿದೆ.ಈ ಬಗ್ಗೆ ವೆಂಕಟೇಶ್ ಸೂಕ್ತ ಉತ್ತರ ನೀಡಿಲ್ಲ ಹಾಗೂ ಸಂಸ್ಥೆಯ ಪದಾಧಿಕಾರಿಗಳ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ.ಈ ಹಿನ್ನಲೆ ವೆಂಕಟೇಶ್ ವಿರುದ್ದ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ…