ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ…ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ…ಕುರ್ಚಿಗಳು ಖಾಲಿ..ಖಾಲಿ…

ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ…ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ…ಕುರ್ಚಿಗಳು ಖಾಲಿ..ಖಾಲಿ…

ನಂಜನಗೂಡು,ಜ21,Tv10 ಕನ್ನಡ

ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯುವ ಉದ್ದೇಶದಿಂದ ನಂಜನಗೂಡು ನಗರಸಭೆ ಬಜೆಟ್ ನ ಪೂರ್ವಭಾವಿ ಸಭೆ ಇಂದು ಕರೆಯಲಾಗಿತ್ತು.ಬಜೆಟ್ ಗೆ ಅಭಿಪ್ರಾಯಗಳನ್ನ ನೀಡಬೇಕಿದ್ದ ಸಾರ್ವಜನಿಕರೇ ಇಲ್ಲದ ಕಾರಣ ನೀರಸ ಪ್ರತಿಕ್ರಿಯೆ ದೊರೆಯಿತು.

ಅಂಬೇಡ್ಕರ್ ಸಮುದಾಯ ಭವನದಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಕಂಠಸ್ವಾಮಿ ಹಾಗೂ ಪೌರಾಯುಕ್ತರಾದ ವಿಜಯ್ ರವರ ನೇತೃತ್ವದಲ್ಲಿ 2025-26 ನೇ ಸಾಲಿನ ಆಯವ್ಯಯ ಸಿದ್ದಪಡಿಸಲು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನ ಪಡೆಯಲು ಆಯೋಜಿಸಲಾಗಿತ್ತು.ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಸಂಘಟನೆಯ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನ ತಿಳಿಸಬೇಕಿತ್ತು.ಆದ್ರೆ ಸಭೆ ಆರಂಭವಾಗಿ ಗಂಟೆಗಳು ಉರುಳಿದರೂ ಸಾರ್ವಜನಿಕರು ಆಗಮಿಸದೆ ಸಭೆ ಮಂಕಾಯಿತು.ಕೆಲವು ಪತ್ರಕರ್ತರು ಬೆರಳೆಣಿಕೆಯ ಸಾಋವಜನಿಕರು ಹೊರತುಪಡಿಸಿದ್ರೆ ಸಭೆಗೆ ನೀರಸ ಪ್ರತಿಕ್ರಿಯೆ ದೊರೆಯಿತು.ಸಭೆಯಲ್ಲಿ ಸಾರ್ವಜನಿಕರ ಅನುಪಸ್ಥಿತಿ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಮುಜುಗರ ತಂದಿತ್ತು.ನಂಜನಗೂಡು ನಗರದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಧ್ಯತೆ ನೀಡುವುದಾಗಿ ತಿಳಿಸಿ ಸಭೆಯನ್ನ ಅಂತ್ಯಗೊಳಿಸಿದರು.

ಅಭಿವೃದ್ದಿಗೆ ಒತ್ತು ನೀಡದ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬೇಸತ್ತಿರುವ ಸಾರ್ವಜನಿಕರು ಸಭೆಗೆ ಗೈರಾಗಿರುವ ಮಾಹಿತಿ ಇದೆ. ಈ ಬೆಳವಣಿಗೆ ನಂಜನಗೂಡಿನ ಸರ್ವತೋಮುಖ ಅಭಿವೃದ್ದಿಗೆ ಮಾರಕ ಎಂದೇ ಹೇಳಲಾಗುತ್ತಿದೆ.ಸಾರ್ವಜನಿಕರ ಗೈರಂತೂ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷತೆ ವಹಿಸಿದವರಿಗೆ ಮುಖಭಂಗವಾದಂತಿದೆ…

Spread the love

Related post

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ…

ಹಾಡು ಹಗಲು ರಸ್ತೆಯಲ್ಲಿ ಗಜರಾಜನ ಬಿಂದಾಸ್ ವಾಕ್… ಗ್ರಾಮಸ್ಥರಲ್ಲಿ ಆತಂಕ… ವಿರಾಜಪೇಟೆ,ಜೂ13,Tv10 ಕನ್ನಡ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟ ಗಜರಾಜ ರಸ್ತೆಯಲ್ಲಿ ಸಂಚರಿಸಿ ಭಯದ ವಾತಾವರಣ ಮೂಡಿಸಿದ ಘಟನೆ ಕೊಡಗು…
ಕಾವೇರಿ ಆರತಿ,ಅಮ್ಯೂಸ್ ಮೆಂಟ್ ಪಾರ್ಕ್ ಗೆ ವಿರೋಧ…ರೈತರ ಪ್ರತಿಭಟನೆ…

ಕಾವೇರಿ ಆರತಿ,ಅಮ್ಯೂಸ್ ಮೆಂಟ್ ಪಾರ್ಕ್ ಗೆ ವಿರೋಧ…ರೈತರ ಪ್ರತಿಭಟನೆ…

ಮಂಡ್ಯ,ಜೂ12,Tv10 ಕನ್ನಡ ಕೆಆರ್ ಎಸ್ ನಲ್ಲಿ ಕಾವೇರಿ ಆರತಿ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ.ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆದಿದೆ.ಕೆಆರ್ ಎಸ್ ಬೃಂದಾವನದ ಬಳಿ…
ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಇ ಆಫೀಸ್ ಕಚೇರಿ ಆರಂಭಕ್ಕೆ ಕ್ಷಣಗಣನೆ…ಸಿಬ್ಬಂದಿಗಳಿಗೆ ತರಬೇತಿ…

ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಇ ಆಫೀಸ್ ಕಚೇರಿ ಆರಂಭಕ್ಕೆ ಕ್ಷಣಗಣನೆ…ಸಿಬ್ಬಂದಿಗಳಿಗೆ ತರಬೇತಿ…

ಮೈಸೂರು,ಜೂ11,Tv10 ಕನ್ನಡ ಸರ್ಕಾರದ ಆದೇಶದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇ ಆಫೀಸ್ ವ್ಯವಸ್ಥೆ ಅನುಷ್ಠಾನಗೊಳಿಸುವುದು ಕಡ್ಡಾಯವಾಗಿದೆ.2021 ರಲ್ಲೇ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಅನುಷ್ಠಾನಗೊಳಿಸಲು ಮೈಸೂರು ಅಭಿವೃದ್ದಿ ಪ್ರಾಧಿಕಾರ…

Leave a Reply

Your email address will not be published. Required fields are marked *