ಸ್ಮಶಾನದಲ್ಲಿ ಗಾಂಜಾ ಗಮ್ಮತ್ತು…ರಾಜಾರೋಷವಾಗಿ ಧಂ ಎಳೆಯುವ ವ್ಯಸನಿಗಳು…ದೂರು ನೀಡಿದ್ರೂ ಕ್ಯಾರೆ ಎನ್ನದ ಪೊಲೀಸ್ರು…ಮೇಟಗಳ್ಳಿ ಸ್ಮಶಾನದ ದುಃಸ್ಥಿತಿ…

ಸ್ಮಶಾನದಲ್ಲಿ ಗಾಂಜಾ ಗಮ್ಮತ್ತು…ರಾಜಾರೋಷವಾಗಿ ಧಂ ಎಳೆಯುವ ವ್ಯಸನಿಗಳು…ದೂರು ನೀಡಿದ್ರೂ ಕ್ಯಾರೆ ಎನ್ನದ ಪೊಲೀಸ್ರು…ಮೇಟಗಳ್ಳಿ ಸ್ಮಶಾನದ ದುಃಸ್ಥಿತಿ…

ಮೈಸೂರು,ಫೆ16,Tv10 ಕನ್ನಡ

ಮೃತಪಟ್ಟವರ ಆತ್ಮ ಚಿರಶಾಂತಿಗೆ ಜಾರಬೇಕಾದ ಸ್ಮಶಾನ ಗಾಂಜಾ ವ್ಯಸನಿಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.ಹಗಲು ಇರುಳೆನ್ನದೆ ಬೈಕ್ ನಲ್ಲಿ ಬರುವ ವ್ಯಸನಿಗಳು ಸ್ಮಶಾನ ಹಾಗೂ

ಅಕ್ಕಪಕ್ಕದಲ್ಲಿರು ಪೊದೆಗಳ ಆಶ್ರಯ ಪಡೆದು ರಾಜಾರೋಷವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ.ಈ ಬಗ್ಗೆ ಸ್ಥಳೀಯರಾದ ಬಿ.ಎನ್.ನಾಗೇಂದ್ರ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.ಮೃತಪಟ್ಟವರು ಚಿರನಿದ್ರೆಗೆ ಜಾರಬೇಕಾದ ಸ್ಥಳವೀಗ ಗಾಂಜಾ ವ್ಯಸನಿಗಳ ಗಮ್ಮತ್ತಿಗೆ ಬಲಿಯಾಗುತ್ತಿದೆ

ಹೌದು…ಇದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ಹಾಗೂ ವಾರ್ಡ್ ನಂ.7 ರ ವ್ಯಾಪ್ತಿಯಲ್ಲಿ ಬರುವ ಸ್ಮಶಾನದ ದುಃಸ್ಥಿತಿ.ಸ್ಮಶಾನದ ಅಭಿವೃದ್ದಿಗಾಗಿ ಮೈಸೂರು ಮಹಾನಗರಪಾಲಿಕೆ ಲಕ್ಷಾಂತರ ರೂ ಖರ್ಚು ಮಾಡಿದೆ.ಹೈ ಮಾಸ್ಕ್ ಸೇರಿದಂತೆ ದೀಪಗಳನ್ನ ಅಳವಡಿಸಿದೆ.ಕಳೆದ ಮೂರು ತಿಂಗಳಿಂದ ಇಲ್ಲಿನ ದೀಪಗಳು ಬೆಳಕು ನೀಡುವುದನ್ನ ಸ್ಥಗಿತಗೊಳಿಸಿದೆ.ಕತ್ತಲನ್ನೇ ಬಳಸಿಕೊಳ್ಳುತ್ತಿರುವ ಗಾಂಜಾ ವ್ಯಸನಿಗಳು ರಾಜಾರೋಷವಾಗಿ ಸ್ಮಶಾನಕ್ಕೆ ಪ್ರವೇಶಿಸಿ ಧಂ ಎಳೆದು ಮತ್ತೇರಿಸಿಕೊಳ್ಳುತ್ತಿದ್ದಾರೆ.ಸ್ಮಶಾನದ ಪಕ್ಕದಲ್ಲೇ ಇರುವ ಆಲದ ಮರದ ಕೆಳಗೆ ಧಂ ಎಳೆಯುವ ದೃಶ್ಯ ಪ್ರತಿನಿತ್ಯ ಕಾಣಿಸುತ್ತಿದೆ.ಪಕ್ಕದಲ್ಲೇ ಹಾದು ಹೋಗಿರುವ ರೈಲ್ವೆ ಹಳಿಯನ್ನೂ ಬಿಡದ ವ್ಯಸನಿಗಳು ಹಳಿ ಮೇಲೇ ಕುಳಿತು ಧಂ ಎಳೆಯುತ್ತಿದ್ದಾರೆ.ಲಕ್ಷಾಂತರ ರೂ ಖರ್ಚು ಮಾಡಿ ಅಭಿವೃದ್ದಿ ಪಡಿಸಿದ ಸ್ಮಶಾನ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ.ಗಾಂಜಾ ವ್ಯಸನಿಗಳನ್ನ ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣಗಳೂ ನಡೆದಿವೆ.ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ…

Spread the love

Related post

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ…

ಮೈಸೂರು,ಮಾ11,Tv10 ಕನ್ನಡ ಸುಡು ಬೇಸಿಗೆಯ ಉಷ್ಣಾಂಶದಲ್ಲಿ ಜೀವಸಂಕುಲಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಮೂಕಸ್ಪಂದನೆ ಎಂಬ ಜಾಗೃತಿ ಅಭಿಯಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಕೈ…
ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ ಆದೇಶದಂತೆ ಕ್ರಮ…

ಖಾಸಗಿ ಜಾಗಕ್ಕೆ ಅತಿಕ್ರಮ ಪ್ರವೇಶ ಆರೋಪ…ಗ್ರಾ.ಪಂ.ಉಪಾಧ್ಯಕ್ಷ ಸೇರಿದಂ ನಾಲ್ವರ ವಿರುದ್ದ FIR…ನ್ಯಾಯಾಲಯದ…

ಮೈಸೂರು,ಮಾ11,Tv10 ಕನ್ನಡ ಖಾಸಗಿ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಮಾಲೀಕರಿಗೆ ನಿಂದನೆ, ಕೊಲೆ ಬೆದರಿಕೆ ಆರೋಪದ ಹಿನ್ನಲೆ ನ್ಯಾಯಾಲಯದ ಆದೇಶದಂತೆಚಾಮುಂಡಿ ಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಎಸ್‌. ರವಿ…
ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ಪ್ರಕರಣ ದಾಖಲು…

ಕಾರು ಪಡೆದು ವಂಚನೆ ಆರೋಪ…ಮೈ ಟಾರ್ಪಾಲಿನ್ಸ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ…

ಮೈಸೂರು,ಮಾ11,Tv10 ಕನ್ನಡ ವೈಯುಕ್ತಿಕ ಉಪಯೋಗಕ್ಕಾಗಿ ವ್ಯಕ್ತಿಯೊಬ್ಬರಿಂದ ಪಡೆದ ಕಾರನ್ನ ಹಿಂದಿರುಗಿಸದ ಮೈ ಟಾರ್ಪಾಲಿನ್ ಮಾಲೀಕ ಪ್ರದೀಪ್ ಸಿಂಗ್ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಬೆಂಗಳೂರಿನ ರಾಜಿಯಾ…

Leave a Reply

Your email address will not be published. Required fields are marked *