ಸ್ಮಶಾನದಲ್ಲಿ ಗಾಂಜಾ ಗಮ್ಮತ್ತು…ರಾಜಾರೋಷವಾಗಿ ಧಂ ಎಳೆಯುವ ವ್ಯಸನಿಗಳು…ದೂರು ನೀಡಿದ್ರೂ ಕ್ಯಾರೆ ಎನ್ನದ ಪೊಲೀಸ್ರು…ಮೇಟಗಳ್ಳಿ ಸ್ಮಶಾನದ ದುಃಸ್ಥಿತಿ…

ಸ್ಮಶಾನದಲ್ಲಿ ಗಾಂಜಾ ಗಮ್ಮತ್ತು…ರಾಜಾರೋಷವಾಗಿ ಧಂ ಎಳೆಯುವ ವ್ಯಸನಿಗಳು…ದೂರು ನೀಡಿದ್ರೂ ಕ್ಯಾರೆ ಎನ್ನದ ಪೊಲೀಸ್ರು…ಮೇಟಗಳ್ಳಿ ಸ್ಮಶಾನದ ದುಃಸ್ಥಿತಿ…

ಮೈಸೂರು,ಫೆ16,Tv10 ಕನ್ನಡ

ಮೃತಪಟ್ಟವರ ಆತ್ಮ ಚಿರಶಾಂತಿಗೆ ಜಾರಬೇಕಾದ ಸ್ಮಶಾನ ಗಾಂಜಾ ವ್ಯಸನಿಗಳ ಆವಾಸ ಸ್ಥಾನವಾಗಿ ಪರಿಣಮಿಸಿದೆ.ಹಗಲು ಇರುಳೆನ್ನದೆ ಬೈಕ್ ನಲ್ಲಿ ಬರುವ ವ್ಯಸನಿಗಳು ಸ್ಮಶಾನ ಹಾಗೂ

ಅಕ್ಕಪಕ್ಕದಲ್ಲಿರು ಪೊದೆಗಳ ಆಶ್ರಯ ಪಡೆದು ರಾಜಾರೋಷವಾಗಿ ಗಾಂಜಾ ಸೇವನೆ ಮಾಡುತ್ತಿದ್ದಾರೆ.ಈ ಬಗ್ಗೆ ಸ್ಥಳೀಯರಾದ ಬಿ.ಎನ್.ನಾಗೇಂದ್ರ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.ಮೃತಪಟ್ಟವರು ಚಿರನಿದ್ರೆಗೆ ಜಾರಬೇಕಾದ ಸ್ಥಳವೀಗ ಗಾಂಜಾ ವ್ಯಸನಿಗಳ ಗಮ್ಮತ್ತಿಗೆ ಬಲಿಯಾಗುತ್ತಿದೆ

ಹೌದು…ಇದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 5 ಹಾಗೂ ವಾರ್ಡ್ ನಂ.7 ರ ವ್ಯಾಪ್ತಿಯಲ್ಲಿ ಬರುವ ಸ್ಮಶಾನದ ದುಃಸ್ಥಿತಿ.ಸ್ಮಶಾನದ ಅಭಿವೃದ್ದಿಗಾಗಿ ಮೈಸೂರು ಮಹಾನಗರಪಾಲಿಕೆ ಲಕ್ಷಾಂತರ ರೂ ಖರ್ಚು ಮಾಡಿದೆ.ಹೈ ಮಾಸ್ಕ್ ಸೇರಿದಂತೆ ದೀಪಗಳನ್ನ ಅಳವಡಿಸಿದೆ.ಕಳೆದ ಮೂರು ತಿಂಗಳಿಂದ ಇಲ್ಲಿನ ದೀಪಗಳು ಬೆಳಕು ನೀಡುವುದನ್ನ ಸ್ಥಗಿತಗೊಳಿಸಿದೆ.ಕತ್ತಲನ್ನೇ ಬಳಸಿಕೊಳ್ಳುತ್ತಿರುವ ಗಾಂಜಾ ವ್ಯಸನಿಗಳು ರಾಜಾರೋಷವಾಗಿ ಸ್ಮಶಾನಕ್ಕೆ ಪ್ರವೇಶಿಸಿ ಧಂ ಎಳೆದು ಮತ್ತೇರಿಸಿಕೊಳ್ಳುತ್ತಿದ್ದಾರೆ.ಸ್ಮಶಾನದ ಪಕ್ಕದಲ್ಲೇ ಇರುವ ಆಲದ ಮರದ ಕೆಳಗೆ ಧಂ ಎಳೆಯುವ ದೃಶ್ಯ ಪ್ರತಿನಿತ್ಯ ಕಾಣಿಸುತ್ತಿದೆ.ಪಕ್ಕದಲ್ಲೇ ಹಾದು ಹೋಗಿರುವ ರೈಲ್ವೆ ಹಳಿಯನ್ನೂ ಬಿಡದ ವ್ಯಸನಿಗಳು ಹಳಿ ಮೇಲೇ ಕುಳಿತು ಧಂ ಎಳೆಯುತ್ತಿದ್ದಾರೆ.ಲಕ್ಷಾಂತರ ರೂ ಖರ್ಚು ಮಾಡಿ ಅಭಿವೃದ್ದಿ ಪಡಿಸಿದ ಸ್ಮಶಾನ ನಿರ್ವಹಣೆ ಕೊರತೆಯಿಂದ ಸೊರಗುತ್ತಿದೆ.ಗಾಂಜಾ ವ್ಯಸನಿಗಳನ್ನ ಪ್ರಶ್ನಿಸಿದ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣಗಳೂ ನಡೆದಿವೆ.ಈ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *