ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಸಾಬೀತು…12.35 ಲಕ್ಷ ಗುಳುಂ…ವರದಿ ಸಲ್ಲಿಸುವಂತೆ ಆಡಳಿತ ಮಂಡಳಿಗೆ ನೋಟೀಸ್…

ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ಆರೋಪ ಸಾಬೀತು…12.35 ಲಕ್ಷ ಗುಳುಂ…ವರದಿ ಸಲ್ಲಿಸುವಂತೆ ಆಡಳಿತ ಮಂಡಳಿಗೆ ನೋಟೀಸ್…

ನಂಜನಗೂಡು,ಫೆ19,Tv10 ಕನ್ನಡ

ನಂಜನಗೂಡು ತಾಲೂಕು ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳು ಸೇರಿ ನಡೆಸಿದ ಅವ್ಯವಹಾರ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.12,35,916/- ರೂ ಅವ್ಯವಹಾರ ನಡೆದಿರುವುದು ಪರಿಶೀಲನೆಯಲ್ಲಿ ಖಚಿತವಾದ ಹಿನ್ನಲೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮನೋಜ್ ಕುಮಾರ್ ರವರು ಹಾಡ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನೋಟೀಸ್ ನೀಡಿ ಮುಖ್ಯ ಕಾರ್ಯನಿರ್ವಾಹಕರು ನಡೆಸಿದ ಅವ್ಯವಹಾರಗಳ ಬಗ್ಗೆ ಚರ್ಚಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಮುಖ್ಯ ಕಾರ್ಯನಿರ್ವಾಹಕ ಹಾಗೂ ಸಿಬ್ಬಂದಿಗಳು ಸೇರಿ ಉತ್ಪಾದಕರಿಂದ ಶೇಖರಿಸಿದ ಹಾಲಿಗೆ ನೀರು ಹಾಗೂ ಇತರ ಸಾಮಗ್ರಿಗಳನ್ನ ಮಿಶ್ರಣ ಒಕ್ಕೂಟಕ್ಕೆ ಸರಬರಾಜು ಮಾಡಿದ್ದಾರೆ.ಹೈನುಗಾರಿಕೆ ಮಾಡದ ತಮ್ಮ ಸಂಭಂಧಿಕರ ಹೆಸರಿಗೆ ಹೆಚ್ಚುವರಿ ಪ್ರಮಾಣದ ಹಾಲನ್ನ ನಮೂದಿಸಿ ಹಣ ಪಾವತಿ ಮಾಡಿದ್ದಾರೆ.5/- ರೂ ಪ್ರೋತ್ಸಾಹ ಧನ ನೀಡುವಲ್ಲಿ ಭೋಗಸ್ ಕಾರ್ಡ್ ಸೃಷ್ಟಿಸಿದ್ದಾರೆ.ಮುಖ್ಯ ಕಾರ್ಯನಿರ್ವಾಹಕರ 10 ಸಂಭಂಧಿಕರು ಹಾಗೂ ನಿಕಟವರ್ತಿಗಳ ಹೆಸರಲ್ಲಿ ನಕಲಿ ಕಾರ್ಡ್ ಸೃಷ್ಟಿಸಿದ್ದಾರೆ.ಪರಿಶೀಲನೆ ವೇಳೆ 12,35,916/- ರೂ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ.ಹಾಲು ಶೇಖರಣೆ ಮಾಡಿರುವ ಖರೀದಿಗೂ ಹಾಗೂ ಬಟವಾಡೆ ಮಾಡಿರುವ ಮೊತ್ತಕ್ಕೂ ವೆತ್ಯಾಸ ಕಂಡುಬಂದಿದೆ.ಸಂಘದ ಆಡಳಿತ ಮಂಡಳಿ ಗಮನಕ್ಕೆ ಬಾರದೆ ಹುರಾ ಹಾಲು ಉತ್ಪಾದಕರ ಸಂಘದಿಂದ 1 ಲಕ್ಷ ಹಣ ಪಾವತಿ ಮಾಡಿರುವುದು ಸಹ ಕಂಡುಬಂದಿದೆ.ಸಂಘದ ಕಂಪ್ಯೂಟರ್ ನಲ್ಲಿರುವ ಬಟವಾಡೆ ಪಟ್ಟಿಗೂ ಬ್ಯಾಂಕ್ ಗೆ ಒದಗಿಸಿರುವ ಬಟವಾಡ ಪಟ್ಟಿಗೂ ವೆತ್ಯಾಸ ಕಂಡು ಬಂದಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಪೂರ್ಣ ವರದಿ ಸಲ್ಲಿಸುವಂತೆ ನೋಟೀಸ್ ನೀಡಲಾಗಿದೆ…

Spread the love

Related post

ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್

ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್

ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್ ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಬಲಿಷ್ಠ ಸಂವಿದಾನವಾಗಿದೆ. ಭಾರತದ ಶಕ್ತಿ ಅದರ ಸಂವಿಧಾನ. ಸಂವಿಧಾನವೇ ದೇಶದ ಆತ್ಮ ಮತ್ತು ಪ್ರಜಾಪ್ರಭುತ್ವದ…
ಮೈಸೂರಿನಲ್ಲಿ ಬಿತ್ತು ಮತ್ತೊಂದು ಹೆಣ…ಸ್ನೇಹಿತನಿಂದಲೇ ಹತ್ಯೆ…

ಮೈಸೂರಿನಲ್ಲಿ ಬಿತ್ತು ಮತ್ತೊಂದು ಹೆಣ…ಸ್ನೇಹಿತನಿಂದಲೇ ಹತ್ಯೆ…

ಮೈಸೂರಿನಲ್ಲಿ ಬಿತ್ತು ಮತ್ತೊಂದು ಹೆಣ…ಸ್ನೇಹಿತನಿಂದಲೇ ಹತ್ಯೆ… ಮೈಸೂರು,ನ26,Tv10 ಕನ್ನಡ ಮೈಸೂರಿನಲ್ಲಿ ಮತ್ತೊಂದು ಹೆಣ ಉರುಳಿಬಿದ್ದಿದೆ.ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಯುವಕನನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.ಮೈಸೂರಿನ ಶಾಂತಿನಗರದ ಚೌಕಂಡಿಯಲ್ಲಿ ಘಟನೆ ನಡೆದಿದೆ.ಸೈಯದ್…
ಫ್ರಾಡ್ ಮೆಸೇಜ್ ಓಪನ್ ಮಾಡಿದ 21 ನಿಮಿಷದಲ್ಲಿ 1.98 ಲಕ್ಷ ಗಾಯಬ್…

ಫ್ರಾಡ್ ಮೆಸೇಜ್ ಓಪನ್ ಮಾಡಿದ 21 ನಿಮಿಷದಲ್ಲಿ 1.98 ಲಕ್ಷ ಗಾಯಬ್…

ಮೈಸೂರು,ನ25,Tv10 ಕನ್ನಡ ಫ್ರಾಡ್ ಮೆಸೇಜ್ ಓಪನ್ ಮಾಡಿ ಕೇವಲ 21 ನಿಮಿಷದಲ್ಲಿ ಖದೀಮರು ಕ್ರೆಡಿಟ್ ಕಾರ್ಡ್ ನಿಂದ 1.98 ಲಕ್ಷ ಲಪಟಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ.ವಂಚನೆಗೆ ಒಳಗಾದ ಪ್ಯಾಕರ್ಸ್…

Leave a Reply

Your email address will not be published. Required fields are marked *