
ರಂಗೋಲಿಯಲ್ಲಿ ಮೂಡಿಬಂದ ಶಿವನ ಚಿತ್ರಗಳು…ಶಿವರಾತ್ರಿ ಅಂಗವಾಗಿ ಸ್ಪರ್ಧೆ…
- TV10 Kannada Exclusive
- February 26, 2025
- No Comment
- 20

ಮೈಸೂರು,ಫೆ26,Tv10 ಕನ್ನಡ
ಶಿವರಾತ್ರಿ ಹಬ್ಬದ ಅಂಗವಾಗಿ ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಸಮೃದ್ಧಿ ಟ್ರಸ್ಟ್ ಹಾಗೂ ಕೆಎಂಪಿ ಕೆ ಟ್ರಸ್ಟ್ ಮತ್ತು ಜೆ ಸಿ ಐ ಮೈಸೂರು ಕಿಂಗ್ ಲೇಡೀಸ್ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು.ವಿವಿದ ವಯೋಮಾನದ ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಮಹಿಳೆಯರ ಕೈಚಳಕದಲ್ಲಿ ಅಂದವಾದ ಶಿವನ ಚಿತ್ರಗಳು ಮೂಡಿಬಂದವು. 5 ಬಹುಮಾನಗಳನ್ನ ನಿಗದಿ ಪಡಿಸಲಾಗಿತ್ತು.
ರಾಮಾನುಜಾ ರಸ್ತೆಯ ನಿವಾಸಿ ಸುಶೀಲಾ, ಕಲ್ಯಾಣಗಿರಿಯ ಕೋಮಲಾ, ವಿದ್ಯಾರಣ್ಯಪುರಂನ ವನಿತಾ ಸುಭಾಷ್,ಜನಿಷಾ ಎಂ.ಎಚ್. ಹಾಗೂ ಶ್ರೀರಾಂಪುರದ ಮಂಗಳಾ ರವರು ಬಹುಮಾನಕ್ಕೆ ಭಾಜನರಾದರು.
ಈ ಸಂದರ್ಭದಲ್ಲಿ
ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ, ಮಾಜಿನಗರ ಪಾಲಿಕಾ ಸದ್ಯಸ ಮಾ ವಿ ರಾಮಪ್ರಸಾದ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ಪಬ್ಲಿಕ್ ಶಾಲೆಯ ಸಿ ಇ ಓ ತೇಜಸ್ ಶಂಕರ್, ಸಮೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಸಹನಗೌಡ, ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್,ಸಾಯಿರಾಂ ಫೌಂಡೇಷನ್ ಅಧ್ಯಕ್ಷರು
ಖುಷಿ,ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷರಾದ ಸವಿತಾ ಘಾಟ್ಕೆ , ವಕೀಲರಾದ ಜಯಶ್ರೀ ಶಿವರಾಮ್, ಸಂಧ್ಯಾ, ಸುಶೀಲ, ಮಹಾನ್ ಶ್ರೇಯಸ್, ಜೆ ಸಿ ಐ ಸದಸ್ಯರು ಮೋಹನ್ ರಾಚಯ್ಯ, ಗೌತಮ್ ಹಾಗೂ ಇನ್ನಿತರರು ಹಾಜರಿದ್ದರು…