ಪೊಲೀಸಪ್ಪನ ಮನೆಯಲ್ಲೇ ಕಳ್ಳತನ…ಅತ್ತಿಗೆಯಿಂದಲೇ ಕೈಚಳಕ…
- TV10 Kannada ExclusiveUncategorized
- March 18, 2025
- No Comment
- 90
ಮೈಸೂರು,ಮಾ18,Tv10 ಕನ್ನಡ
ಪೊಲೀಸ್ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳುವಾದ ಪ್ರಕರಣ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಕೆ.ಆರ್.ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಭಾನ್ ಎಂಬುವರ ಮನೆಯಲ್ಲಿ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.ಸ್ವಂತ ಅತ್ತಿಗೆ ಕಳ್ಳತನ ಮಾಡಿದ್ದಾರೆಂದು ಸುಬಾನ್ ಪತ್ನಿ ಸಾದಿಯಾ ಆರೋಪಿಸಿದ್ದಾರೆ.ಅತ್ತಿಗೆ ಆಯೆಷಾ ಎಂಬುವರ ಮೇಲೆ ಆರೋಪ ಮಾಡಲಾಗಿದೆ.ರಾಜೀವ್ ನಗರದಲ್ಲಿ ಸುಬಾನ್ ರವರ ಮನೆ ಇದೆ.ಅಡಿಗೆ ಮನೆಯ ಡಬ್ಬದಲ್ಲಿ ಚಿನ್ನಾಭರಣ ಇಡುತ್ತಿದ್ದರು.ಈ ವಿಚಾರ ದಂಪತಿಗೆ ಹೊರತುಪಡಿಸಿದರೆ ಅತ್ತಿಗೆ ಆಯೆಷಾ ಗೆ ಮಾತ್ರ ಗೊತ್ತಿತ್ತು.ಹೀಗಾಗಿ ಆಯೆಷಾ ನೇ ಚಿನ್ನಾಭರಣ ಕಳುವು ಮಾಡಿದ್ದಾರೆಂದು ಆರೋಪಿಸಿದ್ದಾರೆ.ಸುಮಾರು 8 ತಿಂಗಳ ಹಿಂದೆ ಚಿನ್ನಾಭರಣ ಕಳುವಾಗಿದೆ.ಅನುಮಾನಗೊಂಡ ದಂಪತಿ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಡುವುದಾಗಿ ಹೇಳಿದಾಗ ಆಯೆಷಾ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.ಹಿಂದಿರುಗಿಸಲು ಸಮಯ ತೆಗೆದುಕೊಂಡ ಆಯೆಷಾ ನಂತರ ಉಲ್ಟಾ ಹೊಡೆದಿದ್ದಾಳೆ.ಸಧ್ಯ ಸುಬಾನ್ ಪತ್ನಿ ಸಾದಿಯಾ ರವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಅತ್ತಿಗೆ ಆಯೆಷಾ ವಿರುದ್ದ ಪ್ರಕರಣ ದಾಖಲಿಸಿದ್ದಾರೆ…