
ಮಳೆ ಎಫೆಕ್ಟ್…ಪೇದೆ ಸಾವು…ಬಿರುಗಾಳಿಯಿಂದ ಬಿದ್ದ ಮರ ತಪ್ಪಿಸಲು ಹೋಗಿ ದುರ್ಘಟನೆ…
- TV10 Kannada Exclusive
- March 20, 2025
- No Comment
- 95
ಹುಣಸೂರು,ಮಾ20,Tv10 ಕನ್ನಡ
ಮಳೆ ಅನಾಹುತಕ್ಕೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಮೊದಲ ಬಲಿಯಾಗಿದೆ.
ಮಳೆ ಗಾಳಿಯಿಂದ ರಸ್ತೆಗೆ ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆಯುವುದನ್ನ ತಪ್ಪಿಸಲು ಯತ್ನಿಸುವಾಗ ದುರ್ಘಟನೆ ನಡೆದಿದೆ.
ನಿಯಂತ್ರಣ ತಪ್ಪಿ ಬೈಕ್ನಿಂದ ಬಿದ್ದು ಕೆಎಸ್ ಆರ್ ಪಿ ಪೇದೆ ಸಾಗರ್ ಸಾವನ್ನಪ್ಪಿದ್ದಾರೆ.
ಹುಣಸೂರು ತಾಲೂಕಿನ ಶಿರೇನಹಳ್ಳಿ ರಸ್ತೆಯಲ್ಲಿ ಘಟನೆ ನಡೆದಿದೆ.
ಸ್ನೇಹಿತನ ಮದುವೆಯ ಚಪ್ಪರದ ಊಟಕ್ಕೆ ಹೋಗಿ ಬರುವಾಗ ಘಟನೆ ಸಂಭವಿಸಿದೆ.
ಸಾಗರ್ ಜೊತೆಗಿದ್ದ ವಾಸು ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ವಾಸುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಗರ್ ಕಟ್ಟೆಮಳಲವಾಡಿ ಗ್ರಾಮದ ನಿವಾಸಿ.
ಬೆಂಗಳೂರು ಕೋರಮಂಗಲದ ಬೆಟಾಲಿಯನ್ 4 ರಲ್ಲಿ ಸಾಗರ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಸ್ನೇಹಿತನ ಮದುವೆಗೆ ಬಂದಿದ್ದ ಸಾಗರ್
ಬಿರುಗಾಳಿ ಮಳೆಗೆ ರಸ್ತೆಯಲ್ಲಿ ಬಿದ್ದಿದ್ದ ಮರವನ್ನ ತಪ್ಪಿಸುವ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…