
ಹಳೆ ದ್ವೇಷ…ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ…
- Crime
- March 20, 2025
- No Comment
- 73

ಪಿರಿಯಾಪಟ್ಟಣ,ಮಾ20,Tv10 ಕನ್ನಡ
ಬೈಕ್ ಅಡ್ಡಗಟ್ಟಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪಿರಿಯಾಪಟ್ಟಣ ತಾಲೂಕು ಸಿಗೂರು ಗ್ರಾಮದ ಬಳಿ ನಡೆದಿದೆ.ಆಯಿತನಹಳ್ಳಿ ಗ್ರಾಮದ ಪ್ರಜ್ವಲ್ ಹಲ್ಲೆಗೆ ಒಳಗಾದ ಯುವಕ.
ಕುಡಿತದ ವಿಚಾರದಲ್ಲಿ ಗಲಾಟೆ ನಡೆದಿತ್ತು.
ಅದೇ ವಿಚಾರಕ್ಕೆ ಕುಡಿದು ಬಂದ ಯುವಕರು ಪ್ರಜ್ವಲ್ ಮೇಲೆ ಹಲ್ಲೆ ಮಾಡಿದ್ದಾರೆ.
ಸಿಗೂರಿನ ಫ್ಯಾಕ್ಟರಿ ಬಳಿ ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ.
ಅದೇ ಗ್ರಾಮದ ನಾಗೇಶ್, ಪಾಲಾಕ್ಷ, ಹಾಸನ ಮೂಲದ ಅಕ್ಷಯ್ ಮತ್ತು ಮಹೇಶ್ ಎಂಬುವರು
ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.
ಗೆಳತಿಯ ಮದುವೆ ಮುಗಿಸಿ ಬರುತ್ತಿದ್ದಾಗ ರಾತ್ರಿ ಸಮಯದಲ್ಲಿ ಹಲ್ಲೆ ಮಾಡಿದ್ದಾರೆ.
ಗಾಯಾಳು ಪ್ರಜ್ವಲ್ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…