
ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರ…
- TV10 Kannada Exclusive
- March 24, 2025
- No Comment
- 85

ನಂಜನಗೂಡು,ಮಾ24,Tv10 ಕನ್ನಡ
ಸಿಡಿಮದ್ದು ಸಿಡಿದು ಹಸುವಿನ ಬಾಯಿ ಛಿದ್ರವಾದ ಘಟನೆ ನಂಜನಗೂಡಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಹಸು
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ಹಂದಿಗಳ ಬೇಟೆಗಾಗಿ ಕಿಡಿಗೇಡಿಗಳಿ ಸಿಡಿಮದ್ದು ಇರಿಸಿದ್ದಾರೆ. ಮೇವು ಮೇಯುತ್ತಿದ್ದ ಹಸು ಸಿಡಿಮದ್ದಿನ ಬಳಿ ಬಂದಾಗ ಸಿಡಿದಿದೆ.
ಕೆಂಪಿಸಿದ್ದನಹುಂಡಿ ಗ್ರಾಮದ ರೈತ ಚನ್ನನಂಜೇಗೌಡ ಎಂಬವರಿಗೆ ಸೇರಿದ ಹಸು.ಗ್ರಾಮದ ವಾಟರ್ ಟ್ಯಾಂಕ್ ಬಳಿ ಜಾನುವಾರುಗಳನ್ನ ಮೇಯಲು ಬಿಟ್ಟಿದ್ದಾರೆ.
ಕಾಡು ಹಂದಿ ಬೇಟೆಗೆ ಕಿಡಿಗೇಡಿಗಳು ಅದೇ ಜಾಗದಲ್ಲಿ ಸಿಡಿಮದ್ದು ಅಡಗಿಸಿಟ್ಟಿದ್ದಾರೆ.
ಮೇಯುತ್ತಿದ್ದ ವೇಳೆ ಆಹಾರದ ಜೊತೆ ಇಟ್ಟಿದ್ದ ಸಿಡಿಮದ್ದು ತಿನ್ನಲು ಯತ್ನಿಸಿದೆ.
ಸ್ಫೋಟದ ರಭಸಕ್ಕೆ ಹಸುವಿನ ಬಾಯಿ ಛಿದ್ರವಾಗಿದೆ.
ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…