ಕುರಿದೊಡ್ಡಿಯಾದ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್…ಹಳ್ಳ ಹಿಡಿಯುತ್ತಿರುವ ಸಿಎಂ ಸಿದ್ದರಾಮಯ್ಯ ಮಹತ್ತರ ಯೋಜನೆ…

ಕುರಿದೊಡ್ಡಿಯಾದ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್…ಹಳ್ಳ ಹಿಡಿಯುತ್ತಿರುವ ಸಿಎಂ ಸಿದ್ದರಾಮಯ್ಯ ಮಹತ್ತರ ಯೋಜನೆ…

ಮೈಸೂರು,ಜೂ2,Tv10 ಕನ್ನಡ

ಟ್ರಿಣ್ ಟ್ರಿಣ್ ಸೈಕಲ್ ಗಳು ತುಂಬಿರಬೇಕಾದ ಸ್ಟ್ಯಾಂಡ್ ಇದೀಗ ಕುರಿದೊಡ್ಡಿಯಾಗಿ ಪರಿವರ್ತನೆಯಾಗಿದೆ.ಪರಿಸರ ಉಳಿವಿಗಾಗಿ ತಂದ ಯೋಜನೆ ನೈರ್ಮಲ್ಯಕ್ಕೆ ಕಾರಣವಾಗುತ್ತಿದೆ.ಸೈಕಲ್ ಗಳು ತುಂಬಿರಬೇಕಿದ್ದ ಸ್ಥಳದಲ್ಲಿ ಕುರಿಗಳನ್ನ ತುಂಬಿದ್ದರೂ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ.ಸಿಎಂ ಸಿದ್ದರಾಮಯ್ಯ ರವರ ಮಹತ್ತರ ಯೋಜನೆ ಈ ಮೂಲಕ ಹಳ್ಳ ಹಿಡಿಯುವ ಸೂಚನೆ ತೋರಿಸುತ್ತಿದೆ.

ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸಿದ್ದರಾಮಯ್ಯ ನವರು ಈ ಯೋಜನೆಯನ್ನ 2016 ರಲ್ಲಿ ಜಾರಿಗೆ ತಂದರು.ಪ್ರಾಯೋಗಿಕವಾಗಿ ಆರಂಭವಾದ ಯೋಜನೆಗೆ ಸಾರ್ವಜನಿಕರೂ ಸಹ ಉತ್ತಮವಾಗಿ ಸ್ಪಂದಿಸಿ ಸೈಕಲ್ ಬಳಕೆಯತ್ತ ಗಮನ ಹರಿಸಿದ್ರು.ಲಕ್ಷಾಂತರ ಮಂದಿ ಟ್ರಿಣ್ ಟ್ರಿಣ್ ಸೈಕಲ್ ವ್ಯವಸ್ಥೆಯನ್ನ ಸಮರ್ಪಕವಾಗಿಯೂ ಬಳಸಿಕೊಂಡ್ರು.ಇತ್ತೀಚೆಗೆ ಯೋಜನೆ ಹಳ್ಳ ಹಿಡಿಯುವ ಸೂಚನೆ ಕಾಣುತ್ತಿದೆ.ಸೈಕಲ್ ಗಳ ಬದಲಾಗಿ ಕುರಿಗಳನ್ನ ತುಂಬಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಸೈಕಲ್ ಗಳನ್ನ ಖರೀದಿಸುವತ್ತ ಪಾಲಿಕೆ ಗಮನ ಹರಿಸದ ಕಾರಣ ಸಂಖ್ಯೆ ಕ್ಷೀಣಿಸುತ್ತಿದೆ.ಸೈಕಲ್ ಗಳ ಕೊರತೆಯಿಂದಾಗ ನಿಲ್ದಾಣಗಳು ಖಾಲಿಯಾಗುತ್ತಿವೆ.ಇದನ್ನೇ ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.ನಿಲ್ದಾಣದಲ್ಲಿ ಕುರಿಗಳನ್ನ ತುಂಬಿಸಿಕೊಂಡು ದೊಡ್ಡಿ ಮಾಡಿಕೊಂಡಿದ್ದಾರೆ.ಮೈಸೂರಿನ ಒಂಟಿಕೊಪ್ಪಲಿನ ಮಾತೃ ಮಂಡಳಿ ವೃತ್ತದ ಬಳಿ ಇರುವ ಟ್ರಿಣ್ ಟ್ರಿಣ್ ಸೈಕಲ್ ನಿಲ್ದಾಣದ ಪರಿಸ್ಥಿತಿ ಇದು.

ಸಿಎಂ ಸಿದ್ದರಾಮಯ್ಯ ನವರು 2016 ರಲ್ಲಿ ಖುದ್ದು ಸೈಕಲ್ ಸವಾರಿ ಮಾಡುವ ಮೂಲಕ ಈ ಯೋಜನೆಗೆ ಅದ್ದೂರಿ ಚಾಲನೆ ನೀಡಿದ್ರು.ಸಿದ್ದರಾಮಯ್ಯ ರವರ ಮಹತ್ತರ ಯೋಜನೆಗಳಲ್ಲಿ ಒಂದಾದ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಮತ್ತಷ್ಟು ಅಧೋಗತಿಗೆ ಇಳಿಯುವ ಮುನ್ನ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕಿದೆ.ಅಧಿಕಾರಿಗಳ ದಿವ್ಯನಿರ್ಲಕ್ಷ್ಯಕ್ಕೆ ಒಳಗಾದ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಅಧಿಕಾರಿಗಳು ಚುರುಕು ನೀಡಬೇಕಿದೆ…

Spread the love

Related post

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ…

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ…

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ… ಮಂಡ್ಯ,ಮಾ21,Tv10 ಕನ್ನಡ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ರವರು ಫ್ಲೆಕ್ಸ್ ಗಳಲ್ಲಿ ರಾಜಕಾರಿಣಿಗಳನ್ನೇ ಮೀರಿಸುತ್ತಿದ್ದಾರೆ.ಮಂಡ್ಯದ ವಿವಿದೆಡೆ ಯುಗಾದಿ ಹಬ್ಬದ…
ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು… ಮೈಸೂರು,ಮಾ20,Tv10 ಕನ್ನಡ ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿಸಿ ವೃದ್ದರೊಬ್ಬರಿಗೆ 8,50,047/- ರೂ ವಂಚಿಸಿದ…
ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು…

ರಮ್ಯಾ ಆರ್. ಮಹಿಳೆ ನ್ಯಾಯಾಧೀಶರಾಗಿ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಹೊಸ ಮೈಲುಗಲ್ಲುಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಿರಗುಂದ ಗ್ರಾಮದ ರಾಜೇಂದ್ರ ಪ್ರಸಾದ್ MD(ಜಾನಪದ ಕಲಾವಿದರು ) ಪಾರ್ವತಮ್ಮ N…

Leave a Reply

Your email address will not be published. Required fields are marked *