ಸಂಚಾರಿ ಪೊಲೀಸರಿಗೆ ಮೂಗುದಾರ…ತಪಾಸಣೆ ವೇಳೆ ಮುನ್ನೆಚ್ಚರಿಕೆ ವಹಿಸಿ…ಖಡಕ್ ವಾರ್ನಿಂಗ್…

ಸಂಚಾರಿ ಪೊಲೀಸರಿಗೆ ಮೂಗುದಾರ…ತಪಾಸಣೆ ವೇಳೆ ಮುನ್ನೆಚ್ಚರಿಕೆ ವಹಿಸಿ…ಖಡಕ್ ವಾರ್ನಿಂಗ್…

ಮೈಸೂರು,ಜೂ2,Tv10 ಕನ್ನಡ

ತಪಾಸಣೆ ವೇಳೆ ಮಗು ಸಾವನ್ನಪ್ಪಿದ ಘಟನೆ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.ಸಂಚಾರಿ ಪೊಲೀಸರಿಗೆ ತಪಾಸಣೆ ವೇಳೆ ನಿಯಮಗಳನ್ನ ಪಾಲಿಸುವಂತೆ ಖಡಕ್ ಆದೇಶ ಹೊರಡಿಸಿದೆ.ವಾಹನ ಸವಾರರಿಗೆ ಅಪಾಯ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.ವಾಹನ ತಪಾಸಣೆ ವೇಳೆ ಅನುಸರಿಸಬೇಕಾದ ಅಂಶಗಳ ಸುತ್ತೋಲೆಯನ್ನ ಹೊರಡಿಸಿದೆ.

ದಾಖಲೆ ಪರಿಶೀಲಿಸುವ ವೇಳೆ ವೇಳೆ ಸಕಾರಣವಿಲ್ಲದೆ ವಾಹನಗಳನ್ನ ತಡೆದು ತಪಾಸಣೆ ನಡೆಸಬಾರದು.ಸಂಚಾರಿ ನಿಯಮಗಳು ಉಲ್ಲಂಘನೆ ಆಗಿರುವುದು ಕಂಡುಬಂದಾಗ ಮಾತ್ರ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನ ದಾಖಲಿಸಬೇಕು.ಪ್ರಕರಣಗಳನ್ನ ದಾಖಲಿಸುವ ಮುನ್ನ ಹೆದ್ದಾರಿಗಳಲ್ಲಿ zig zag ಮಾದರಿಯಲ್ಲಿ ಬ್ಯಾರಿಕೇಡ್ ಗಳನ್ನ ಅಳವಡಿಸಿ ವಾಹನಗಳನ್ನ ತಡೆಯಬಾರದು.ಧಿಢೀರನೆ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು,ಕೀಗಳನ್ನ ಕಿತ್ತುಕೊಳ್ಳುವುದು ಮಾಡಬಾರದು.ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನಗಳನ್ನ ಬೆನ್ನಟ್ಟದೇ ನಂಬರ್ ಗಳನ್ನ ಗುರುತಿಸಿ ಅವರ ಮಾಹಿತಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.ವಾಹನ ತಪಾಸಣೆ ವೇಳೆ ರಿಫ್ಲೆಕ್ಟಿವ್ ಜಾಕೆಟ್ ಗಳನ್ನ ಧರಿಸಬೇಕು.ಸಂಜೆ ವೇಳೆ ಕಡ್ಡಾಯವಾಗಿ ಎಲ್.ಇ.ಡಿ.ಬೇಟನ್ ಬಳಸಬೇಕು.ಹೆದ್ದಾರಿಗಳಲ್ಲಿ ವೇಗವಾಗಿ ಚಲಾಯಿಸುವ ವಾಹನಗಳನ್ನ ತಡೆಯುವ ಪ್ರಯತ್ನ ಮಾಡದೆ ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.ಸಾಧ್ಯವಾದಷ್ಟು ಸಿಗ್ನಲ್ ದೀಪಗಳ ಬಳಿ ತಪಾಸಣೆ ನಡೆಸಬೇಕು ಎನ್ನುವುದು ಸೇರಿದಂತೆ ಹಲವು ನಿಯಮಗಳನ್ನ ಪಾಲಿಸುವಂತೆ ಸಂಚಾರಿ ಪೊಲೀಸರಿಗೆ ಮಹಾ ನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ…

Spread the love

Related post

ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ ಕಾಟ…ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ…

ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ…

ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ ಕಾಟ…ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ… ಮೈಸೂರು,ಏ28,Tv10 ಕನ್ನಡ ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ ಶುರುವಾಗಿದೆ.ಭಿಕ್ಷೆ…
ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್…

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ ಬೆಂಗಳೂರು: ತನ್ನ ವಿಭಿನ್ನ ಹಾಗೂ ಪರಿಣಾಮಕಾರಿ ಉತ್ಪನ್ನಗಳ ಮೂಲಕ ಗಮನ ಸೆಳೆದಿರುವ ಪ್ರಸಿದ್ಧ…
ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ ಕೈವಾಡವೇ…ಅಕ್ರಮದ ಹಿಂದಿರುವ ಕಾಣದ ಕೈಗಳು ಯಾವುದು…?

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ…

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ…

Leave a Reply

Your email address will not be published. Required fields are marked *