
ವರದಕ್ಷಿಣೆ ಕಿರುಕುಳ…ಪತ್ನಿ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ…ಗಂಡನ ಮೇಲೆ ಗ್ರಾಮಸ್ಥರಿಂದಲೇ ಕೊಲೆ ಆರೋಪ…
- Crime
- June 10, 2025
- No Comment
- 113
ನಂಜನಗೂಡು,ಜೂ10,Tv10 ಕನ್ನಡ
ಮದುವೆ ಆಗಿ 22 ವರ್ಷವಾದರೂ ಗಂಡನಿಂದ ವರದಕ್ಷಿಣೆ ಕಿರುಕುಳ ಅನುಭವಿಸಿದ ಗೃಹಿಣಿ ಹಾಗೂ ಮಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಇಬ್ಬರ ಸಾವಿಗೆ ಪತಿ ಗಂಡನೇ ಹೊಣೆ ಎಂದು ಗ್ರಾಮಸ್ಥರು ಕೊಲೆ ಆರೋಪ ಹೊರೆಸಿದ್ದಾರೆ.ತಾಯಿ ಮಗಳ ಸಾವಿಗೆ ಕಾರಣ ಕೇಳಲು ಹೋದ ಗ್ರಾಮಸ್ಥರ ಜೊತೆ ಪೊಲೀಸರು ಸಂಯಮದಿಂದ ವರ್ತಿಸಿಲ್ಲವೆಂದು ಆರೋಪಿಸಿದ್ದಾರೆ.ಪತಿರಾಯನೇ ಪತ್ನಿ ಹಾಗೂ ಮಗಳನ್ನ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.
ನಂಜನಗೂಡು ತಾಲೂಕು ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ತಾಯಿ ಮಹದೇವಮ್ಮ( 38) ಮಗಳು ಸುಪ್ರಿಯ(20) ಮೃತ ದುರ್ದೈವಿಗಳು.ಕೊಲೆ ಆರೋಪ ಹೊತ್ತ ಪತಿ ಜಯರಾಮು ನಾಪತ್ತೆಯಾಗಿದ್ದಾನೆ.22 ವರ್ಷಗಳ ಹಿಂದೆ ಮಹದೇವಮ್ಮಳನ್ನ ಮದುವೆ ಆಗಿದ್ದ ಜಯರಾಮ ದಂಪತಿಗೆ ಸುಪ್ರಿಯ ಎಂಬ ಮಗಳಿದ್ದಾಳೆ.ವರ್ಷಗಳು ಉರುಳಿದರೂ ಜಯರಾಮು ಗೆ ವರದಕ್ಷಿಣೆ ದಾಹ ಕಡಿಮೆ ಆಗಿರಲಿಲ್ಲ.ಈ ವಿಚಾರದಲ್ಲಿ ಪತ್ನಿ ಜೊತೆ ಜಗಳವಾಡುತ್ತಲೇ ಇದ್ದ.ಇದರಿಂದ ಮಗಳು ಸುಪ್ರಿಯ ಸಹ ನೊಂದಿದ್ದಳು.ಗಂಡನ ವರ್ತನೆಯಿಂದ ಬೇಸತ್ತ ಮಹದೇವಮ್ಮ ಹಲವು ಬಾರಿ ಹುಲ್ಲಹಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದಳೆಂದು ಹೇಳಲಾಗಿದೆ.ಪೊಲೀಸರಿಂದಾಗಲಿ ಅಥವಾ ಕುಟುಂಬಸ್ಥರಿಂದ ಮಹದೇವಮ್ಮ ಗೆ ನ್ಯಾಯ ದೊರೆತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗಂಡನ ವರದಕ್ಷಿಣೆ ದಾಹಕ್ಕೆ ಬೇಸತ್ತಿದ್ದ ಮಹದೇವಮ್ಮ ಹಾಗೂ ಮಗಳು ಮನೆಯ ತಂಬಾಕು ಬೇಯಿಸುವ ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಇಬ್ಬರ ಸಾವಿಗೆ ಗಂಡ ಜಯರಾಮು ಕಾರಣ ಎಂದು ಆರೋಪಿಸಿರುವ ಗ್ರಾಮಸ್ಥರು ಪೊಲೀಸರ ವರ್ತನೆಯನ್ನೂ ಸಹ ಖಂಡಿಸಿದ್ದಾರೆ…