ಗಾಂಜಾ ವ್ಯಸನಿಗಳ ವಿರುದ್ದ ಮೇಟಗಳ್ಳಿ ಠಾಣಾ ಪೊಲೀಸರ ಸಮರ…ಕಾರ್ಯಾಚರಣೆಗೆ ಕತ್ತಲು ಅಡ್ಡಿ…ಕೆಟ್ಟು ನಿಂತ ಬೀದಿ ದೀಪಗಳು…ಕಣ್ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು…

ಗಾಂಜಾ ವ್ಯಸನಿಗಳ ವಿರುದ್ದ ಮೇಟಗಳ್ಳಿ ಠಾಣಾ ಪೊಲೀಸರ ಸಮರ…ಕಾರ್ಯಾಚರಣೆಗೆ ಕತ್ತಲು ಅಡ್ಡಿ…ಕೆಟ್ಟು ನಿಂತ ಬೀದಿ ದೀಪಗಳು…ಕಣ್ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು…

ಮೈಸೂರು,ಜು25,Tv10 ಕನ್ನಡ

ಗಾಂಜಾ ವ್ಯಸನಿಗಳ ವಿರುದ್ದ ಮೇಟಗಳ್ಳಿ ಠಾಣಾ ಪೊಲೀಸರು ಸಮರ ಸಾರಿದ್ದಾರೆ.ಮೇಟಗಳ್ಳಿಯ ಸ್ಮಶಾನದಲ್ಲಿ ಗಾಂಜಾ ವ್ಯಸನಿಗಳ ಕಾಟಕ್ಕೆ ಬ್ರೇಕ್ ಹಾಕಲು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಆದ್ರೆ ಪೊಲೀಸರ ಕಾರ್ಯಾಚರಣೆಗೆ ನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸದಿರುವುದು ವಿಷಾಧನೀಯ.ಇಂದು ಸ್ಮಶಾನದಲ್ಲಿ ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.ಇನ್ಸ್ಪೆಕ್ಟರ್ ಅರುಣ್ ರವರು ತಡಮಾಡದೆ ತಮ್ಮ ಸಿಬ್ಬಂದಿಗಳ ಸಮೇತ ಸ್ಮಶಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಆದ್ರೆ ದಾಳಿ ನಡೆಸಿದ ಸಮಯದಲ್ಲಿ ಬೀದಿ ದೀಪಗಳು ಕೆಟ್ಟುನಿಂತ ಪರಿಣಾಮ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ಗಾಂಜಾ ವ್ಯಸನಿಗಳು ಕತ್ತಲೆಯಲ್ಲೇ ಪರಾರಿಯಾಗಿದ್ದಾರೆ.ಸ್ಮಶಾನದಲ್ಲಿ ಯುವಕರು ಗುಂಪು ಕಟ್ಟಿಕೊಂಡು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಭಯದ ವಾತಾವರಣ ಮೂಡಿಸುತ್ತಿದ್ದಾರೆ ಇದರಿಂದ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುತ್ತದೆ ಹೀಗಾಗಿ ಬೀದಿ ದೀಪಗಳನ್ನ ಸರಿಪಡಿಸುವಂತೆ ಮೇಟಗಳ್ಳಿ ಠಾಣೆ ನಿರೀಕ್ಷಕರು ಫೆಬ್ರವರಿ ತಿಂಗಳಿನಲ್ಲೇ ವಲಯ ಕಚೇರಿ 5 ಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.ಪೊಲೀಸರ ಮನವಿ ಪತ್ರಕ್ಕೆ ಕ್ಯಾರೆ ಎನ್ನದ ಪಾಲಿಕೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ.ಪೊಲೀಸರ ಕಾರ್ಯಚರಣೆಗೆ ಪಾಲಿಕೆ ಅಧಿಕಾರಿಗಳೇ ಸ್ಪಂದಿಸದಿದ್ದಲ್ಲಿ ಗಾಂಜಾ ವ್ಯಸನಿಗಳ ಕಾಟ ತಪ್ಪಿಸುವುದು ಹೇಗೆ ಎಂಬ ಪ್ರಶ್ನೆ ಸ್ಥಳೀಯರದ್ದು.ಸಧ್ಯ ಸ್ಮಶಾನ ಶವಗಳ ಅಂತ್ಯಕ್ರಿಯೆಗಿಂತ ಹೆಚ್ಚಾಗಿ ಗಾಂಜಾ ವ್ಯಸನಿಗಳ ತಾಣವಾಗುತ್ತಿದೆ.ಮೃದೇಹಗಳ ಅಂತ್ಯಕ್ರಿಯೆಗೆ ಬರುವ ಜನರಿಗಂತೂ ಗಾಂಜಾ ವ್ಯಸನಿಗಳ ವರ್ತನೆ ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ.ಗಾಂಜಾ ವ್ಯಸನಿಗಳ ಕಾಟಕ್ಕೆ ಬ್ರೇಕ್ ಹಾಕಬೇಕಿದ್ದಲ್ಲಿ ಪಾಲಿಕೆ ಅಧಿಕಾರಿಗಳು ಸಹ ಪೊಲೀಸರ ಜೊತೆ ಕೈ ಜೋಡಿಸಬೇಕಿದೆ…

Spread the love

Related post

ಸಿಡಿಮದ್ದು ಸ್ಪೋಟ…ಮಹಿಳೆಗೆ ಗಾಯ…ಕವರ್ ಓಪನ್ ಮಾಡಿದಾಗ ಘಟನೆ…

ಸಿಡಿಮದ್ದು ಸ್ಪೋಟ…ಮಹಿಳೆಗೆ ಗಾಯ…ಕವರ್ ಓಪನ್ ಮಾಡಿದಾಗ ಘಟನೆ…

ಹುಣಸೂರು,ಜು25,Tv10 ಕನ್ನಡ ಮನೆ ಬಳಿ ದೊರೆತ ಕವರ್ ಒಂದು ಮಹಿಳೆಯೊಬ್ಬಳನ್ನ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ.ಕವರ್ ಓಪನ್ ಮಾಡಿದಾಗ ಸ್ಪೋಟಗೊಂಡು ಮಹಿಳೆಗೆ ಗಂಭೀರ ಗಾಯವಾಗಿದೆ.ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ಹುಳಿಯಾಳು…
ಮಧ್ಯರಾತ್ರಿ ಹುಟ್ಟುಹಬ್ಬ ಆಚರಣೆ…ರಸ್ತೆಯಲ್ಲಿ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿದ ಯುವಕರು ಪೊಲೀಸರ ವಶಕ್ಕೆ…

ಮಧ್ಯರಾತ್ರಿ ಹುಟ್ಟುಹಬ್ಬ ಆಚರಣೆ…ರಸ್ತೆಯಲ್ಲಿ ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿದ ಯುವಕರು…

ಮೈಸೂರು,ಜು24,Tv10 ಕನ್ನಡ ಮಧ್ಯರಾತ್ರಿ ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ ಯುವಕರನ್ಮ ಕೆ.ಆರ್.ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಮೈಸೂರಿನಬಸವೇಶ್ವರ ರಸ್ತೆಯ 10ನೇ ಕ್ರಾಸ್…
ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ…

ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ…

ಮೈಸೂರು ನಗರ ವ್ಯಾಪ್ತಿಯ 37 ಪಿಎಸ್ಸೈ ಗಳಿಗೆ ವರ್ಗಾವಣೆ…ಪೊಲೀಸ್ ಕಮೀಷನರ್ ಆದೇಶ… ಮೈಸೂರು,ಜು24,Tv10 ಕನ್ನಡ ಮೈಸೂರು ನಗರ ವ್ಯಾಪ್ತಿಯ ವಿವಿಧ ಠಾಣೆಗಳ 37 ಪಿಎಸ್ಸೈ ಗಳಿಗೆ ವರ್ಗಾವಣೆ ಮಾಡಲಾಗಿದೆ.ನಗರ…

Leave a Reply

Your email address will not be published. Required fields are marked *