ಜಮೀನು ವಿವಾದ…ಸೊಸೈಟಿ ಹಾಗೂ ಮಾಲೀಕರ ನಡುವೆ ಜಟಾಪಟಿ…ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ…
- TV10 Kannada Exclusive
- December 28, 2025
- No Comment
- 37


ಜಮೀನು ವಿವಾದ…ಸೊಸೈಟಿ ಹಾಗೂ ಮಾಲೀಕರ ನಡುವೆ ಜಟಾಪಟಿ…ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ…
ಮೈಸೂರು,ಡಿ28,Tv10 ಕನ್ನಡ
ಜಮೀನು ವಿಚಾರವಾಗಿ ಸೊಸೈಟಿ ಹಾಗೂ ಮಾಲೀಕರ ನಡುವೆ ಗಲಾಟೆ ನಡೆದಿದಗದು ಬೆಳೆದಿದ್ದ ಬೆಳೆ ನಾಶಪಡಿಸಿದ ಪ್ರಕರಣ
ಮೈಸೂರು ತಾಲ್ಲೂಕು ಕೆ ಹೆಮ್ಮನಹಳ್ಳಿಯಲ್ಲಿ ನಡೆದಿದೆ.
ಮಂಜುಳಾ, ಸೌಮ್ಯ, ರಮ್ಯಾ, ಎಂಬುವವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ.
ಒಂದುವರೆ ಎಕರೆಯಲ್ಲಿ ಬೆಳೆದಿದ್ದ ಹುರಳಿ ಬೆಳೆ ನಾಶ ಮಾಡಲಾಗಿದೆ.
ಸಿಟಿಜನ್ ವೆಲ್ ಫೇರ್ ಸೊಸೈಟಿಯವರಿಂದ ನಾಶ ಮಾಡಿದ ಆರೋಪ ಮಾಡಲಾಗಿದೆ.
ಜಮೀನನ್ನು ನಾವು ಖರೀದಿ ಮಾಡಿದ್ದೇವೆ ಅಂತಾ ಬೆಳೆ
ವೀರೇಶ್ ಎಂಬುವರು ಹೇಳಿದ್ದಾರೆ.
ಸೌಮ್ಯ ಹಾಗೂ ರಮ್ಯ ಅವರ ತಂದೆ ಕುಮಾರ್ ರವರು ವಿರೇಶ್ ಅವರಿಗೆ ಅಗ್ರಿಮೆಂಟ್ ಹಾಗೂ ಜಿಪಿಎ ಮಾಡಿಕೊಟ್ಟಿದ್ದರು.
ಆದರೆ ಮಾರಾಟ ಮಾಡಿರಲಿಲ್ಲ.ಈ ಕುರಿತು ಪ್ರಕರಣ ಮೈಸೂರು ಸಿವಿಲ್ ಕೋರ್ಟ್ನಲ್ಲಿದೆ.
ಸೊಸೈಟಿಗೆ ಸಂಬಂಧಿಸಿದ ವೀರೇಶ್, ಜಯಕುಮಾರ್, ರುದ್ರೇಶ್, ಬೆಳವಾಡಿ ಮಹದೇವ ಇತರರು
ಜೆಸಿಬಿ ತಂದು ಬೆಳೆ ನಾಶ ಮಾಡಿದ ಆರೋಪ.
ತಡೆಯಲು ಹೋದಾಗ ಸೌಮ್ಯರ ತಮ್ಮ ಮಂಜು ಹಾಗೂ ಪತಿ ಹರೀಶ್ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ.
ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…