ದೊಡ್ಡಜಾತ್ರೆಯಲ್ಲಿ ಕಾಲ್ತುಳಿತ…ತಂದೆ ಮಗ ಇಬ್ಬರಿಗೂ ಗಾಯ…ಆಸ್ಪತ್ರೆಗೆ ದಾಖಲು…
- TV10 Kannada Exclusive
- March 30, 2026
- No Comment
- 74
ದೊಡ್ಡಜಾತ್ರೆಯಲ್ಲಿ ಕಾಲ್ತುಳಿತ…ತಂದೆ ಮಗ ಇಬ್ಬರಿಗೂ ಗಾಯ…ಆಸ್ಪತ್ರೆಗೆ ದಾಖಲು…
ನಂಜನಗೂಡು,ಮಾ30,Tv10 ಕನ್ನಡ
ನಂಜುಂಡೇಶ್ವರನ ದೊಡ್ಡ ಜಾತ್ರೆಯಲ್ಲಿ ಕಾಲ್ತುಳಿತಕ್ಕೆ ತಂದೆ ಮಗ ಗಾಯಗೊಂಡಿದ್ದಾರೆ.
ಪಂಚ ಮಹಾರಥೋತ್ಸವ ಸಾಗುವ ಸಂದರ್ಭದಲ್ಲಿ ಘಟನೆ ನಡೆದಿದೆ.
ಬಾರಿ ಭಕ್ತ ಸಮೂಹದ ಮಧ್ಯ ಸಿಲುಕಿ ಮಗನಿಗೆ ಕಾಲು ಮುರಿದಿದೆ. ತಂದೆ ಗಾಯಗೊಂಡಿದ್ದಾರೆ.
ಇಬ್ಬರೂ ನಂಜನಗೂಡಿನ ಶ್ರೀರಾಂಪುರ ಬಡಾವಣೆ ವಾಸಿಗಳಾಗಿದ್ದಾರೆ. ಶ್ರೀರಾಂಪುರ ಬಡಾವಣೆಯ ರಂಗಸ್ವಾಮಿ (52) ಮತ್ತು ಇವರ ಪುತ್ರ ಅಪ್ಪು ಗಾಯಗೊಂಡು ಆಸ್ಪತ್ರೆ ಸೇರಿರುವ ಭಕ್ತರು.
ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ದೊಡ್ಡ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
1999 ರಲ್ಲಿ ರಥದ ಚಕ್ರಕ್ಕೆ ಸಿಲುಕಿ ಒಬ್ಬ ಮೃತಪಟ್ಟು ಮೂವರು ಕಾಲು ಕಳೆದುಕೊಂಡಿದ್ದರು.
ಇಂದು ನಡೆದ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ಭಕ್ತರ ಕಾಲ್ತುಳಿತದಿಂದ ಅಪ್ಪ ಮಗ ಸಿಲುಕಿ ಮತ್ತೆ ಅವಘಡಕ್ಕೆ ಕಾರಣವಾಗಿದೆ..