ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ ಕೆ.ಎಸ್.ರಕ್ಷಿತ್ ಕಚೇರಿ ಬಳಿ ಪ್ರತಿಭಟನೆ…
- TV10 Kannada Exclusive
- March 31, 2026
- No Comment
- 4

ಪ್ರಾಧಿಕಾರದ ಆಸ್ತಿ ಉಳಿಸಿ…ಡಿಎಸ್ ಎಸ್ ಮುಖಂಡರಿಂದ ತಮಟೆ ಚಳುವಳಿ…ಎಂಡಿಎ ಪ್ರಭಾರ ಆಯುಕ್ತ ಕೆ.ಎಸ್.ರಕ್ಷಿತ್ ಕಚೇರಿ ಬಳಿ ಪ್ರತಿಭಟನೆ…
ಮೈಸೂರು,ಮಾ31,Tv10 ಕನ್ನಡ
ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಸ್ತಿ ಉಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಎಂಡಿಎ ಪ್ರಭಾರ ಆಯುಕ್ತ ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿ ಕೆಎಸ್ ರಕ್ಷಿತ್ ರವರ ಕಚೇರಿ ಬಾಗಿಲ ಬಳಿ ತಮಟೆ ಚಳುವಳಿ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.ಮೈಸೂರಿನ ದೇವನೂರು ಗ್ರಾಮದ ಸರ್ವೆ ನಂ.208 ಹಾಗೂ 184/6 ರ ಜಮೀನುಗಳನ್ನ ಖಾಸಗಿ ವ್ಯಕ್ತಿಗಳು ಕಬಳಿಸಿ ಮಾರಾಟ ಮಾಡಿದ್ದಾರೆ.ಈ ಬಗ್ಗೆ ಜನವರಿಯಲ್ಲಿ ಕ್ರಮ ಕೈಗೊಳ್ಳುವಂತೆ ಡಿಎಸ್ ಎಸ್ ಮುಖಂಡರು ಮನವಿ ಸಲ್ಲಿಸಿದ್ದರು.ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆ ಇಂದು ಮತ್ತೊಮ್ಮೆ ಪ್ರಭಾರ ಆಯುಕ್ತ ರಕ್ಷಿತ್ ರವರಿಗೆ ಮನವಿ ಕೊಡಲು ಬಂದಾಗ ಸೂಕ್ತವಾಗಿ ಸ್ಪಂದಿಸದೆ ನಿರ್ಲಕ್ಷಿಸಿದರು.ಇದರಿಂದ ಬೇಸತ್ತ ದಲಿತ ಸಂಘಟನೆ ಮುಖಂಡರು ಬಾಗಿಲ ಬಳಿ ನಿಂತು ತಮಟೆ ಹೊಡೆಯುವ ಮೂಲಕ ಎಂಡಿಎ ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು…