ಸ್ಥಳ ನಿಯುಕ್ತಿಗೊಳಿಸದೆ ಸರ್ಕಾರಿ ನೌಕರರನ್ನ ವರ್ಗಾವಣೆ ಮಾಡಿದ್ರೆ ಜೋಕೆ…ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಖಡಕ್ ವಾರ್ನಿಂಗ್…
- TV10 Kannada Exclusive
- April 1, 2026
- No Comment
- 100



ಸ್ಥಳ ನಿಯುಕ್ತಿಗೊಳಿಸದೆ ಸರ್ಕಾರಿ ನೌಕರರನ್ನ ವರ್ಗಾವಣೆ ಮಾಡಿದ್ರೆ ಜೋಕೆ…ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಖಡಕ್ ವಾರ್ನಿಂಗ್…
ಬೆಂಗಳೂರು,ಏ1,Tv10 ಕನ್ನಡ
ಸ್ಥಳ ನಿಯುಕ್ತಿಗೊಳಿಸದೆ ಸರ್ಕಾರಿ ನೌಕರರನ್ನ ವರ್ಗಾವಣೆ ಮಾಡುವ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನ ರಜನೀಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.12/5/25 ರ ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.ಮಾರ್ಗಸೂಚಿ ಅನ್ವಯ ಯಾವುದೇ ನೌಕರ/ಅಧಿಕಾರಿ ಯನ್ನು ಸ್ಥಳನಿಯುಕ್ತಿ ಮಾಡದೆ ವರ್ಗಾವಣೆ ಮಾಡುವಂತಿಲ್ಲ ಎಂಬ ಆದೇಶವನ್ನು ವನ್ನು ಗಣನೆಗೆ ತೆಗೆದುಕೊಳ್ಳದೇ ಅದೇ ಚಾಳಿ ಮುಂದುವರೆದಿರುವು ದನ್ನು ಕಂಡ ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಮತ್ತೊಮ್ಮೆ ಘನ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ. 35777/2025 ದಿ.30/01/2026 ರ ಆದೇಶವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ಯಾವುದೇ ನೌಕರ/ಅಧಿಕಾರಿಯನ್ನು ಸ್ಥಳನಿಯುಕ್ತಿ ಗಳಿಸದೇ ವರ್ಗಾವಣೆ ಮಾಡಿಬಾರದೆಂದು ಎಚ್ಚರಿಸಿದ್ದಾರೆ. ಕೆಲಸ ಪಡೆಯದೇ ಸುಮ್ಮನೆ ಸಂಬಳ ಕೊಡುವುದು ಆರ್ಥಿಕ ನಷ್ಟವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರದ ಯಾವುದೇ ನೌಕರ/ಅಧಿಕಾರಿ ಯನ್ನು ಸ್ಥಳನಿಯುಕ್ತಿ ಗಳಿಸದೇ ವರ್ಗಾವಣೆ ಮಾಡುವಂತಿಲ್ಲ. ಮಾಡಿದ್ದಲ್ಲಿ ಆ ರೀತಿ ಆದೇಶಿಸಿದ ಸಕ್ಷಮ ಪ್ರಾಧಿಕಾರದಿಂದ ಆ ನೌಕರ/ಅಧಿಕಾರಿಯಿಂದ ಸ್ಥಳ ನಿರೀಕ್ಷಣೆ ಅವಧಿಯ ಸಂಬಳ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ…