ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ರಾಮನಗರ,ಏ1,Tv10 ಕನ್ನಡ

ಒಂದೆಡೆ ಮಾನವ ಪ್ರಾಣಿ ಸಂಘರ್ಷ ತಾರಕಕ್ಕೆ ಏರುತ್ತಿದೆ.ಮತ್ತೊಂದೆಡೆ ಮಾನವ ಪ್ರಾಣಿಯ ಅವಿನಾನುಭಾವ ಸಂಬಂಧಕ್ಕೆಬೆಲೆಯೇ ಕಟ್ಟಲಾಗದಂತಹ ಸನ್ನಿವೇಶಗಳು ಕಾಣಿಸುತ್ತವೆ.ಅಂತಹದ್ದೊಂದು ಹೃದಯಸ್ಪರ್ಶಿ ಸನ್ನಿವೇಶ ರಾಮನಗರದಲ್ಲಿ ಕಂಡುಬಂದಿದೆ.ಪುಟಾಣಿ ಮರಿಯಿಂದ ಮಂಗವೊಂದಕ್ಕೆ ವೃದ್ದೆ ಪಾರ್ವತಮ್ಮ ತುತ್ತು ನೀಡಿದ್ದಾರೆ.ಅಕ್ಕರೆಯಿಂದ ಕೋತಿಯನ್ನ ನೋಡಿಕೊಂಡಿದ್ದಾರೆ.ವಾನರ ಮತ್ತು ಪಾರ್ವತಮ್ಮನ ನಡುವಿನ ಒಡನಾಟ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.ಸ್ಥಳೀಯರಿಗಂತೂ ಇಬ್ಬರ ಸಂಬಂಧ ನೋಡಿ ಸಂತಸ ವ್ಯಕ್ತಪಡಿಸುವುದೇ ಒಂದು ಖುಷಿ.ವಾನರನಿಗೆ ತುತ್ತು ನೀಡಿ ಆರೈಕೆ ಮಾಡಿದ್ದ ಪಾರ್ವತಮ್ಮ ಕೊನೆ ಉಸಿರೆಳೆದಿದ್ದಾರೆ.ಬದುಕಿನ ಪಯಣ ಮುಗಿಸಿದ ಪಾರ್ವತಮ್ಮನಿಗೆ ಸಾಕಿ ಸಲುಹಿದ ವಾನರ ಅಂತಿಮ ವಿದಾಯ ಹೇಳುವ ದೃಶ್ಯ ಮನಮಿಡಿಯುವಂತೆ ಮಾಡಿದೆ.ಪಾರ್ವತಮ್ಮ ರವರ ಮೃತದೇಹದ ಬಳಿ ಕುಳಿತ ಮಂಗ ಕಂಬನಿ ಮಿಡಿದು ಹೊರಳಾಡಿದೆ.ಇಂತಹ ಅಪೂರ್ವ ಸನ್ನಿವೇಶಕ್ಕೆ ಸ್ಥಳೀಯ ಜನ ಮೂಕಸಾಕ್ಷಿಯಾಗಿದ್ದಾರೆ.ಮೂಲತಃ ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ ಗ್ರಾಮದ ಪಾರ್ವತಮ್ಮ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ರಾಮನಗರದ ರಾಯರದೊಡ್ಡಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಪಾರ್ವತಮ್ಮ ವಾಸವಿದ್ದರು.ಪಾರ್ವತಮ್ಮನ ಅಗಲಿಕೆ ವಾನರನಿಗೆ ನೋವನ್ನ ತಂದಿದೆ.ತನಗೆ ತುತ್ತು ನೀಡಿದ ಪಾರ್ವತಮ್ಮರ ಸಾವಿಗೆ ಮರುಗಿದೆ.ಮೃತದೇಹದ ಮೇಲೆ ಹೊರಳಾಡಿ ಅಂತಿಮ ವಿದಾಯ ಹೇಳಿದ ಸನ್ನಿವೇಶ ಮನಕಲುಕುವಂತೆ ಮಾಡಿದೆ…

Spread the love

Related post

ನಂಜನಗೂಡಿನಲ್ಲಿ ಮಾರಾಮಾರಿ…ಮಾರಕಾಸ್ತ್ರಗಳಿಂದ ಹೊಡೆದಾಟ…ಕ್ಷುಲ್ಲಕ ವಿಚಾರಕ್ಕೆ ಹೊಡಿಬಡಿ…5 ಮಂದಿ ಆಸ್ಪತ್ರೆಗೆ ದಾಖಲು…

ನಂಜನಗೂಡಿನಲ್ಲಿ ಮಾರಾಮಾರಿ…ಮಾರಕಾಸ್ತ್ರಗಳಿಂದ ಹೊಡೆದಾಟ…ಕ್ಷುಲ್ಲಕ ವಿಚಾರಕ್ಕೆ ಹೊಡಿಬಡಿ…5 ಮಂದಿ ಆಸ್ಪತ್ರೆಗೆ ದಾಖಲು…

ನಂಜನಗೂಡಿನಲ್ಲಿ ಮಾರಾಮಾರಿ…ಮಾರಕಾಸ್ತ್ರಗಳಿಂದ ಹೊಡೆದಾಟ…ಕ್ಷುಲ್ಲಕ ವಿಚಾರಕ್ಕೆ ಹೊಡಿಬಡಿ…5 ಮಂದಿ ಆಸ್ಪತ್ರೆಗೆ ದಾಖಲು… ನಂಜನಗೂಡು,ಏ3,Tv10 ಕನ್ನಡ ಕ್ಷುಲ್ಲಕ ವಿಚಾರಕ್ಕೆ ನಂಜನಗೂಡಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ…
ಪಾಲನೆಯಾಗದ ಕೋರ್ಟ್ ಆದೇಶ: ಮೈಸೂರು ಡಿಸಿ ಬಂಧನಕ್ಕೆ ವಾರೆಂಟ್..!

ಪಾಲನೆಯಾಗದ ಕೋರ್ಟ್ ಆದೇಶ: ಮೈಸೂರು ಡಿಸಿ ಬಂಧನಕ್ಕೆ ವಾರೆಂಟ್..!

ಪಾಲನೆಯಾಗದ ಕೋರ್ಟ್ ಆದೇಶ: ಮೈಸೂರು ಡಿಸಿ ಬಂಧನಕ್ಕೆ ವಾರೆಂಟ್..! ಮೈಸೂರು: ಭೂ ವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಮೈಸೂರಿನ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ವಿರುದ್ಧ…
ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ…

ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ…

ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ… ನಂಜನಗೂಡು,ಏ3,Tv10 ಕನ್ನಡ ತಮ್ಮನ ಕೊಲೆ ಆರೋಪಿ ಜೈಲಿಗೆ…

Leave a Reply

Your email address will not be published. Required fields are marked *