ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ತುತ್ತು ನೀಡಿದ ವೃದ್ದೆಯ ಸಾವಿಗೆ ಮಿಡಿದ ವಾನರ…ಮೃತದೇಹದ ಬಳಿ ಕುಳಿತು ಅಂತಿಮ ನಮನ…ರಾಮನಗರದಲ್ಲೊಂದು ಹೃದಯಸ್ಪರ್ಶಿ ಘಟನೆ…

ರಾಮನಗರ,ಏ1,Tv10 ಕನ್ನಡ

ಒಂದೆಡೆ ಮಾನವ ಪ್ರಾಣಿ ಸಂಘರ್ಷ ತಾರಕಕ್ಕೆ ಏರುತ್ತಿದೆ.ಮತ್ತೊಂದೆಡೆ ಮಾನವ ಪ್ರಾಣಿಯ ಅವಿನಾನುಭಾವ ಸಂಬಂಧಕ್ಕೆಬೆಲೆಯೇ ಕಟ್ಟಲಾಗದಂತಹ ಸನ್ನಿವೇಶಗಳು ಕಾಣಿಸುತ್ತವೆ.ಅಂತಹದ್ದೊಂದು ಹೃದಯಸ್ಪರ್ಶಿ ಸನ್ನಿವೇಶ ರಾಮನಗರದಲ್ಲಿ ಕಂಡುಬಂದಿದೆ.ಪುಟಾಣಿ ಮರಿಯಿಂದ ಮಂಗವೊಂದಕ್ಕೆ ವೃದ್ದೆ ಪಾರ್ವತಮ್ಮ ತುತ್ತು ನೀಡಿದ್ದಾರೆ.ಅಕ್ಕರೆಯಿಂದ ಕೋತಿಯನ್ನ ನೋಡಿಕೊಂಡಿದ್ದಾರೆ.ವಾನರ ಮತ್ತು ಪಾರ್ವತಮ್ಮನ ನಡುವಿನ ಒಡನಾಟ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.ಸ್ಥಳೀಯರಿಗಂತೂ ಇಬ್ಬರ ಸಂಬಂಧ ನೋಡಿ ಸಂತಸ ವ್ಯಕ್ತಪಡಿಸುವುದೇ ಒಂದು ಖುಷಿ.ವಾನರನಿಗೆ ತುತ್ತು ನೀಡಿ ಆರೈಕೆ ಮಾಡಿದ್ದ ಪಾರ್ವತಮ್ಮ ಕೊನೆ ಉಸಿರೆಳೆದಿದ್ದಾರೆ.ಬದುಕಿನ ಪಯಣ ಮುಗಿಸಿದ ಪಾರ್ವತಮ್ಮನಿಗೆ ಸಾಕಿ ಸಲುಹಿದ ವಾನರ ಅಂತಿಮ ವಿದಾಯ ಹೇಳುವ ದೃಶ್ಯ ಮನಮಿಡಿಯುವಂತೆ ಮಾಡಿದೆ.ಪಾರ್ವತಮ್ಮ ರವರ ಮೃತದೇಹದ ಬಳಿ ಕುಳಿತ ಮಂಗ ಕಂಬನಿ ಮಿಡಿದು ಹೊರಳಾಡಿದೆ.ಇಂತಹ ಅಪೂರ್ವ ಸನ್ನಿವೇಶಕ್ಕೆ ಸ್ಥಳೀಯ ಜನ ಮೂಕಸಾಕ್ಷಿಯಾಗಿದ್ದಾರೆ.ಮೂಲತಃ ಚನ್ನಪಟ್ಟಣ ತಾಲ್ಲೂಕಿನ ಬಿ.ವಿ. ಹಳ್ಳಿ ಗ್ರಾಮದ ಪಾರ್ವತಮ್ಮ ಹೃದಯಾಘಾತದಿಂದ ಕೊನೆ ಉಸಿರೆಳೆದಿದ್ದಾರೆ.
ರಾಮನಗರದ ರಾಯರದೊಡ್ಡಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಪಾರ್ವತಮ್ಮ ವಾಸವಿದ್ದರು.ಪಾರ್ವತಮ್ಮನ ಅಗಲಿಕೆ ವಾನರನಿಗೆ ನೋವನ್ನ ತಂದಿದೆ.ತನಗೆ ತುತ್ತು ನೀಡಿದ ಪಾರ್ವತಮ್ಮರ ಸಾವಿಗೆ ಮರುಗಿದೆ.ಮೃತದೇಹದ ಮೇಲೆ ಹೊರಳಾಡಿ ಅಂತಿಮ ವಿದಾಯ ಹೇಳಿದ ಸನ್ನಿವೇಶ ಮನಕಲುಕುವಂತೆ ಮಾಡಿದೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *