ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಟಾರ್ಚರ್ ಆರೋಪ…ಯಡಿಯೂರಪ್ಪ,ಸಿದ್ದರಾಮಯ್ಯ ಹೆಸರು ಬಳಕೆ…ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್…ಹಣ ಚಿನ್ನಾಭರಣ ವಸೂಲಿ…ಮಾನಸಿಕ ಹಿಂಸೆ…ಖಾಲಿ ಚೆಕ್ ದುರುಪಯೋಗ ಆರೋಪ…ಜಾತಿ ವಿಷಯದಲ್ಲೂ ಕಿರುಕುಳ…ರಕ್ಷಣೆ ಕೋರಿ ಪೊಲೀಸರ ಮೊರೆಹೋದ ವಿಧ್ಯಾರ್ಥಿನಿ…

ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಟಾರ್ಚರ್ ಆರೋಪ…ಯಡಿಯೂರಪ್ಪ,ಸಿದ್ದರಾಮಯ್ಯ ಹೆಸರು ಬಳಕೆ…ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್…ಹಣ ಚಿನ್ನಾಭರಣ ವಸೂಲಿ…ಮಾನಸಿಕ ಹಿಂಸೆ…ಖಾಲಿ ಚೆಕ್ ದುರುಪಯೋಗ ಆರೋಪ…ಜಾತಿ ವಿಷಯದಲ್ಲೂ ಕಿರುಕುಳ…ರಕ್ಷಣೆ ಕೋರಿ ಪೊಲೀಸರ ಮೊರೆಹೋದ ವಿಧ್ಯಾರ್ಥಿನಿ…

ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಟಾರ್ಚರ್ ಆರೋಪ…ಯಡಿಯೂರಪ್ಪ,ಸಿದ್ದರಾಮಯ್ಯ ಹೆಸರು ಬಳಕೆ…ಫೋಟೋ ಎಡಿಟ್ ಮಾಡಿ ಬ್ಲಾಕ್ ಮೇಲ್…ಹಣ ಚಿನ್ನಾಭರಣ ವಸೂಲಿ…ಮಾನಸಿಕ ಹಿಂಸೆ…ಖಾಲಿ ಚೆಕ್ ದುರುಪಯೋಗ ಆರೋಪ…ಜಾತಿ ವಿಷಯದಲ್ಲೂ ಕಿರುಕುಳ…ರಕ್ಷಣೆ ಕೋರಿ ಪೊಲೀಸರ ಮೊರೆಹೋದ ವಿಧ್ಯಾರ್ಥಿನಿ…

ಮೈಸೂರು,ಏ2,Tv10 ಕನ್ನಡ

ಕಾನೂನು ವಿಧ್ಯಾರ್ಥಿನಿಗೆ ಲಾ ಸ್ಟೂಡೆಂಟ್ ಒಬ್ಬರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ ಫೋಟೋಗಳನ್ನ ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡಿ ವಂಚನೆ ಮಾಡಿರುವುದಾಗಿ ಆರೋಪಿಸಿದ್ದಾರೆ.ಮಾಜಿ ಮುಖ್ಯಮಂತ್ರಿ ಯೆಡಿಯೂರಪ್ಪ,ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹೆಸರನ್ನ ಬಳಸಿ ಕೆಲಸ ಮಾಡಿಕೊಡುವುದಾಗಿ ನಂಬಿಸಿ ಹಣ ವಸೂಲಿ ಮಾಡಿದ್ದಲ್ಲದೆ ಎಮೋಷನಲ್ ಬ್ಲಾಕ್ ಮೇಲ್ ಮಾಡಿ ಚಿನ್ನಾಭರಣ ಹಾಗೂ ಹಣ ಪಡೆದಿರುವುದಾಗಿ ವಿಧ್ಯಾರ್ಥಿನಿ ಆರೋಪಿಸಿದ್ದಾರೆ.ಈ ಸಂಬಂಧ ಲಾಸ್ಟೂಡೆಂಟ್ ಪ್ರದೀಪ್ ಸೋಲೆಮನ್ ಹಾಗೂ ಇವರ ತಾಯಿ ಕಲಾವತಿ ವಿರುದ್ದ ವಿಧ್ಯಾರ್ಥಿನಿ ನಯನ ಎಂಬುವರು ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2018-2023 ರ ಅವಧಿಯಲ್ಲಿ ಇವರಿಬ್ಬರಿಗೆ ಪರಿಚಯವಾಗಿದೆ.ವಿಧ್ಯಾವಿಕಾಸ್ ಕಾನೂನು ಕಾಲೇಜಿನಲ್ಲಿ ನಯನ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದ ವೇಳೆ ಪ್ರದೀಪ್ ಸೋಲೆಮನ್ ಸಹ ಇದೇ ಕಾಲೇಜಿನಲ್ಲಿ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದು ಪರಿಚಯವಾಗಿದೆ.ಸ್ನೇಹಿತರೊಂದಿಗೆ ಇರುವಾಗ ನಯನ ರವರ ಫೋಟೋಗಳನ್ನ ಪ್ರದೀಪ್ ತೆಗೆದುಕೊಂಡಿದ್ದಾರೆ.ಆತ್ಮೀಯತೆಯನ್ನ ಬೆಳೆಸಿಕೊಂಡು ನಯನ ರವರ ತಂದೆ ಸುಬ್ರಹ್ಮಣ್ಯ ರನ್ನ ಪರಿಚಯಿಸಿಕೊಂಡಿದ್ದಾನೆ ಪ್ರದೀಪ್.ಸುಬ್ರಹಣ್ಯಸ್ವಾಮಿ ದೇವಸ್ಥಾನದ ಸಮಸ್ಯೆ ಬಗೆಹರಿಸುವುದಾಗಿ ನಂಬಿಸಿ ತನಗೆ ಸಿದ್ದರಾಮಯ್ಯ,ಯಡಿಯೂರಪ್ಪ ಪರಿಚಯ ಎಂದು ಹೇಳಿಕೊಂಡು ನಂಬಿಸಿ 5 ಲಕ್ಷ ಪಡೆದಿದ್ದಾನೆ.ನಂತರ ಕರೊನಾ ವೇಳೆ ಒಡವೆಗಳನ್ನ ಗಿರವಿ ಇಡಿಸಿ ಮೂರು ಲಕ್ಷ ಪಡೆದಿದ್ದಾನೆ.ಸ್ನೇಹಿತೆಯರೊಂದಿಗೆ ಇದ್ದ ಫೋಟೋಗಳನ್ನ ಎಡಿಟ್ ಮಾಡಿ ತನ್ನ ಜೊತೆ ಇರುವಂತೆ ಕ್ರಿಯೇಟ್ ಮಾಎಇ ಬ್ಲಾಕ್ ಮೇಲ್ ತಂತ್ರ ಪ್ರಯೋಗಿಸಿ ಹಣ ವಸೂಲಿಗೆ ಇಳಿದಿದ್ದಾನೆ.ಓವನ್,ಮೊಬೈಲ್ ಹಾಗೂ ಬುಲೆಟ್ ಬೈಕ್ ಗಳನ್ನ ನಯನ ಹೆಸರಲ್ಲಿ ಇಎಂಐ ಮಾಡಿಸಿ ಖರೀದಿಸಿದ್ದಾನೆ.ಕೆಲವು ಖಾಲಿ ಚೆಕ್ ಗಳನ್ನೂ ಸಹ ಪಡೆದಿದ್ದಾನೆ.ಚರ್ಚ್ ಗೆ ಕರೆದೊಯ್ದು ಕುಂಕುಮ‌ ಅಳಿಸಿಹಾಕಿ ಸಂಪ್ರದಾಯಕ್ಕೆ ಧಕ್ಕೆ ತರುವ ಕೆಲಸ ಮಾಡಿರುತ್ತಾನೆ.ಬುಲೆಟ್ ಬೈಕ್ ಸಾಲ ಪಡೆಯುವಾಗ ರಿಲಿಜಿಯನ್ ಕಾಲಂ ನಲ್ಲಿ ಕ್ರಿಶ್ಚಿಯನ್ ಎಂದು ನಮೂದಿಸಿರುವುದಲ್ಲದೆ ಮ್ಯಾರೀಡ್ ಎಂದು ಉಲ್ಕೇಖಿಸಿರುವುದಾಗಿ ನಯನ ದೂರಿನಲ್ಲಿ ದಾಖಲಿಸಿದ್ದಾರೆ.ಹಂತಹಂತವಾಗಿ ಹಣ ಪಡೆದ ಪ್ರದೀಪ್ ಫೋಟೋಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ತಂತ್ರಗಾರಿಕೆ ಉಪಯೋಗಿಸಿರುವುದಾಗಿ ಆರೋಪಿಸಿರುವ ನಯನ ಈತನಿಂದ ರಕ್ಷಣೆ ಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ.ಇದೀಗ ಜೆಎಸ್ ಎಸ್ ಕಾನೂನು ಕಾಲೇಜಿನಲ್ಲಿ ಎರಡನೇ ವರ್ಷದ ಎಂಎಲ್ ಎಂ ವ್ಯಾಸಂಗ ಮಾಡುತ್ತಿರುವ ನಯನ ತನಗೆ ಪ್ರಾಣ ಬೆದರಿಕೆ ಇದೆ ಎಂದು ದೂರಿದ್ದಾರೆ.ತನ್ನದಲ್ಲದ ತಪ್ಪಿಗೆ ಬ್ಯಾಂಕ್ ಏಜೆಂಟರು ನೀಡುತ್ತಿರುವ ಮಾನಸಿಕ ಕಿರುಕುಳ ತಪ್ಪಿಸಿ ಪ್ರದೀಪ್ ನಿಂದ ರಕ್ಷಣೆ ನೀಡುವಂತೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.ಇವೆಲ್ಲ ಅನ್ಯಾಯಕ್ಕೆ ತಾಯಿ ಕಲಾವತಿ ಸಹಕರಿಸಿರುವುದಾಗಿ ಆರೋಪಿಸಿ FIR ನಲ್ಲಿ ದಾಖಲಿಸಿದ್ದಾರೆ…

Spread the love

Related post

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ…

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಚ್.ವಿ. ರಾಘವೇಂದ್ರ ಅವರ…
ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್… ಮೈಸೂರು,ಜೂ30,Tv10 ಕನ್ನಡ ಪ್ರೀತಿಸಿ ಮದುವೆಯಾದ ವಿವಾಹಿತೆಯನ್ನ ಮೂವರು ವ್ಯಕ್ತಿಗಳು ಕಿಡ್ನಾಪ್ ಮಾಡಿ ರಾಮನಗರದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಘಟನೆ…
ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು…

ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ…

ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು ಮೈಸೂರು,ಜೂ29,Tv10 ಕನ್ನಡ ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದ ಶ್ರೀ ಸುಭ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿರುವ…

Leave a Reply

Your email address will not be published. Required fields are marked *