ಗಣಪತಿ ಆಶ್ರಮದಲ್ಲಿ ಹನುಮಜಯಂತಿ ಸಂಭ್ರಮ…ಕಾರ್ಯಸಿದ್ದಿ ಹನುಮಂತನಿಗೆ ವಜ್ರಾಲಂಕಾರ…

ಗಣಪತಿ ಆಶ್ರಮದಲ್ಲಿ ಹನುಮಜಯಂತಿ ಸಂಭ್ರಮ…ಕಾರ್ಯಸಿದ್ದಿ ಹನುಮಂತನಿಗೆ ವಜ್ರಾಲಂಕಾರ…

ಗಣಪತಿ ಆಶ್ರಮದಲ್ಲಿ ಹನುಮಜಯಂತಿ ಸಂಭ್ರಮ…ಕಾರ್ಯಸಿದ್ದಿ ಹನುಮಂತನಿಗೆ ವಜ್ರಾಲಂಕಾರ…

ಮೈಸೂರು,ಏ2,Tv10 ಕನ್ನಡ

ಗಣಪತಿ ಆಶ್ರಮದಲ್ಲಿ ಹನುಮಜಯಂತಿ ಆಚರಣೆ ಸಂಭ್ರಮದಿಂದ ನೆರವೇರಿತು.

ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಚೈತ್ರ ಶುದ್ಧ ಹುಣ್ಣಿಮೆ ಅಂಗವಾಗಿ ಹನುಮಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ವರ್ಷದಲ್ಲಿ 6 ಬಾರಿ ಆಶ್ರಮದಲ್ಲಿ ಹನುಮಜಯಂತಿ ಆಚರಿಸಲಾಗುತ್ತದೆ.ಚೈತ್ರ ಪೂರ್ಣಿಮೆ ಅಂಗವಾಗಿ ಆಚರಿಸಿದ ಹನುಮಜಯಂತಿಯಲ್ಲಿ ಭಾಗವಹಿಸಿದ ಭಕ್ತರು ಪುನೀತರಾದರು. ಆಶ್ರಮದ ಕಿರಿಯ ಪೀಠಾಧಿಪತಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿತು. ಭಕ್ತಾದಿಗಳಿಗೆ ಕಿರಿಯ ಸ್ವಾಮೀಜಿಗಳು ವಿಶೇಷ ಸಂದೇಶ ನೀಡಿದರು.
ಹನುಮ ಜಯಂತಿ ಪ್ರಯುಕ್ತ ಕಾರ್ಯಸಿದ್ದಿ ಹನುಮಂತನಿಗೆ ವಿಶೇಷವಾಗಿ ‘ವಜ್ರಾಲಂಕಾರ’ ಮಾಡಲಾಗಿತ್ತು.
ಬಜರಂಗಿ ಎಂದರೆ ವಜ್ರಾಂಗಿ ಎಂದರ್ಥ. ಸ್ವಾಮಿಯು ಭಕ್ತರಿಗೆ ವಜ್ರದಂತಹ ದೈಹಿಕ ಸಾಮರ್ಥ್ಯವನ್ನು ಮತ್ತು ಹೂವಿನಂತಹ ಮೃದುವಾದ ಮನಸ್ಸನ್ನು ಕರುಣಿಸಲಿ” ಎಂದು ಸ್ವಾಮೀಜಿ ಹಾರೈಸಿದರು.
ಈ ಸಂದರ್ಭದಲ್ಲಿ ಹನುಮಂತನಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಕಾರ್ಯಸಿದ್ದಿ ರಕ್ಷೆ ಮತ್ತು
ಸೇವಾರ್ಥಿಗಳಿಗೆ 13 ಗಂಟುಗಳಿರುವ ವಿಶೇಷ ‘ಕಾರ್ಯಸಿದ್ದಿ ರಕ್ಷೆ’ಯನ್ನು ವಿತರಿಸಲಾಯಿತು.

ಆಶ್ರಮದ ಹಿರಿಯ ಪೀಠಾಧಿಪತಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನೆರವೇರಿದವು…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *