ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ…

ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ…

ಕೊಲೆ ಆರೋಪಿ ಜೈಲಿಗೆ…ಮೃತನ ಅಣ್ಣನ ಮೇಲೆ ರಿವೆಂಜ್…ಮಾರಣಾಂತಿಕ ಹಲ್ಲೆ…ಕೋಮಾ ಸ್ಥಿತಿಗೆ ತಲುಪಿದ ಅಣ್ಣ…ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರು ಆರೋಪ…

ನಂಜನಗೂಡು,ಏ3,Tv10 ಕನ್ನಡ

ತಮ್ಮನ ಕೊಲೆ ಆರೋಪಿ ಜೈಲಿಗೆ ಸೇರಿದ ಹಿನ್ನಲೆ ಧ್ವೇಷ ಬೆಳೆಸಿಕೊಂಡ ಗುಂಪು ಮೃತನ ಅಣ್ಣನನ್ನ ಹಗ್ಗದಿಂದ ಕಟ್ಟಿ ಎಳೆದೊಯ್ದು ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಿದ ಪರಿಣಾಮ ಕೋಮಾ ಸ್ಥಿತಿಗೆ ತಲುಪಿದ ಅಣ್ಣ ಆಸ್ಪತ್ರಗೆ ದಾಖಲಾದ ಘಟನೆ ನಂಜನಗೂಡಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.ತೀವ್ರವಾಗಿ ಗಾಯಗೊಂಡ ಅಣ್ಣ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳದ ನಂಜನಗೂಡು ಗ್ರಾಮಾಂತರ ಪೊಲೀಸರ ವಿರುದ್ದ ಗಾಯಗೊಂಡ ವ್ಯಕ್ತಿ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

8 ತಿಂಗಳ ಹಿಂದೆ ಯುವತಿ ವಿಚಾರದಲ್ಲಿ ಕಿರಣ್ ಎಂಬಾತನ ಕೊಲೆ ಆಗಿದೆ.ಘಟನೆ ಸಂಬಂಧ ಸಿದ್ದರಾಜು,ವಸಂತ್ ಕುಮಾರ್ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.ವಸಂತ್ ಕುಮಾರ್ ಇಂದಿಗೂ ಜೈಲು ವಾಸ ಅನುಭವಿಸುತ್ತಿದ್ದಾನೆ.ಈ ವಿಚಾರದಲ್ಲಿ ಕೊಲೆಯಾದ ಕಿರಣ್ ಅಣ್ಣ ಆನಂದ್ ಮೇಲೆ ವಸಂತ್ ಕುಮಾರ್ ಸಹೋದರ ಸಿದ್ದರಾಜು ದ್ವೇಷ ಬೆಳೆಸಿಕೊಂಡಿದ್ದಾನೆ.ಆಗಾಗ ಗಲಾಟೆಗಳು ನಡೆದಿವೆ.12 ದಿನಗಳ ಹಿಂದೆ ಮನೆಯಲ್ಲಿದ್ದ ಆನಂದ್ ರನ್ನ ಸಿದ್ದರಾಜು,ಶಿವಕುಮಾರ್,ಲೋಕೇಶ್ ಹಾಗೂ ಕೇಶವ ಬಲವಂತವಾಗಿ ಎಳೆದೊಯ್ದು ಹಗ್ಗದಿಂದ ಕಟ್ಟಿಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.ಗಂಭೀರವಾಗಿ ಗಾಯಗೊಂಡ ಆನಂದ್ ಕೋಮಾ ಸ್ಥಿತಿ ತಲುಪಿದ್ದಾರೆ.ಸಿದ್ದರಾಜು ಮತ್ತು ಇತರರ ವಿರುದ್ದ ಆನಂದ್ ಮನೆಯವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.ದೂರು ನೀಡಿ 12 ದಿನಗಳು ಕಳೆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಆನಂದ್ ರನ್ನ ಎಳೆದೊಯ್ದಿರುವ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಪೊಲೀಸರು ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.ಸಿದ್ದರಾಜು ಡ್ರಾಗರ್ ಹಿಡಿದು ಫೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭೀತಿ ಸೃಷ್ಟಿಸುತ್ತಿದೆ.ಹೀಗಿದ್ದೂ ಪೊಲೀಸರು ಮೌನಕ್ಕೆ ಶರಣಾಗಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ.ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳ ಹೆಡೆಮುರಿ ಕಟ್ಟುವರೇ…?

Spread the love

Related post

ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು “ರಕ್ಕಿ” ಚಿತ್ರದ ಮೊದಲ ಗೀತೆಯಾಗಿದೆ.

ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK…

ಬಹು ನಿರೀಕ್ಷಿತ “ರಕ್ಕಿ” ಚಿತ್ರದ “ರಗಡೋ ರಕ್ಕಿ” ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ…
ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ.

ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ.

ಮಾನ್ಯ ಮುಖ್ಯಮಂತ್ರಿಗಳಿಂದ ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿ ಪರಿಶೀಲನೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ (ರಿಂಗ್ ರೋಡ್ ಒಳ ಭಾಗದಲ್ಲಿ) ಹಾಲಿ…
ನಾಗಮಲೆಯಲ್ಲಿ ಚಿರತೆ ದಾಳಿ: ಬೆಂಗಳೂರು ಮೂಲದ ಬಾಲಕ ಮೃತ.

ನಾಗಮಲೆಯಲ್ಲಿ ಚಿರತೆ ದಾಳಿ: ಬೆಂಗಳೂರು ಮೂಲದ ಬಾಲಕ ಮೃತ.

ನಾಗಮಲೆಯಲ್ಲಿ ಚಿರತೆ ದಾಳಿ: ಬೆಂಗಳೂರು ಮೂಲದ ಬಾಲಕ ಮೃತ. ಹನೂರು Tv10 ಕನ್ನಡ. ಹನೂರು :ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿ ಪ್ರಕರಣ ರಾಜ್ಯದ…

Leave a Reply

Your email address will not be published. Required fields are marked *