ರೈತನಿಗೆ FIR ಹಾಕಿಸುವ ಧಂಕಿ…ನಂಜನಗೂಡು ತಹಸೀಲ್ದಾರ್ ಸ್ಮಿತಾರಾಮು ವಿರುದ್ದ ದೂರು…ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಂದ ಉಪವಿಭಾಗಾಧಿಕಾರಿಗಳಿಗೆ ಪತ್ರ…
- TV10 Kannada Exclusive
- April 4, 2026
- No Comment
- 11



ರೈತನಿಗೆ FIR ಹಾಕಿಸುವ ಧಂಕಿ…ನಂಜನಗೂಡು ತಹಸೀಲ್ದಾರ್ ಸ್ಮಿತಾರಾಮು ವಿರುದ್ದ ದೂರು…ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಂದ ಉಪವಿಭಾಗಾಧಿಕಾರಿಗಳಿಗೆ ಪತ್ರ…
ನಂಜನಗೂಡು,ಏ4,Tv10 ಕನ್ನಡ
ಅರ್ಜಿ ಬಗ್ಗೆ ಮಾಹಿತಿ ಕೇಳಲು ಹೋದ ರೈತನಿಗೆ ನಂಜನಗೂಡು ತಹಸೀಲ್ದಾರ್ ಸ್ಮಿತಾ ರಾಮು ರವರು ಧಂಕಿ ಹಾಕಿ FIR ಹಾಕಿಸುವುದಾಗಿ ಬೆದರಿಸಿ ಆಚೆ ಕಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.ನೊಂದ ರೈತ ತಹಸೀಲ್ದಾರ್ ವಿರುದ್ದ ಕ್ರಮ ಕೈಗೊಳ್ಖುವಂತೆ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ.ಈ ಬಗ್ಗೆ ಕ್ರಮ ಕೈಗೊಂಡು ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.ಜಿಲ್ಲಾಧಿಕಾರಿಗಳು ಉಪಭಾಗಾಧಿಕಾರಿಗಳಿಗೆ ಪತ್ರ ಪರೆದಿದ್ದಾರೆ.
ನಂಜನಗೂಡು ತಾಲೂಕು ನೇರಳೆ ಗ್ರಾಮದ ದೊಡ್ಡಮಾದೇಗೌಡ ಎಂಬುವರು ತಮ್ಮ ತಂದೆಗೆ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾದ ಜಮೀನು ಸರ್ಕಾರದ ಆದೇಶದಂತೆ ದುರಸ್ತಿ ಮಾಡುವ ವಿಚಾರದಲ್ಲಿ ವಿಳಂಬವಾಗಿದೆ.ಈ ಬಗ್ಗೆ ತಹಸೀಲ್ದಾರ್ ಸ್ಮಿತಾ ರಾಮು ರನ್ನ ಕೇಳಲು ಹೋದಾಗ ಧಂಕಿ ಹಾಕಿದ್ದು FIR ದಾಖಲಿಸುವುದಾಗಿ ಬೆದರಿಸಿ ಆಚೆ ಕಳಿಸಿದ್ದಾರೆಂದು ಆರೋಪಿಸಿ ದೊಡ್ಡಮಾದೇಗೌಡ ರವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ.ಇದೀಗ ತಹಸೀಲ್ದಾರ್ ಸ್ಮಿತಾ ವಿರುದ್ದ ನಿಯಮಾನುಸಾರ ಕ್ರಮ ಕೈಗೊಂಡು ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಂದ ಜಿಲ್ಲಾಧಿಕಾರಿಗಳಿಗೆ.ಹಾಗೂ ಜಿಲ್ಲಾಧಿಕಾರಿಗಳಿಂದ ಉಪವಿಭಾಗಾಧಿಕಾರಿಗಳಿಗೆ ಪತ್ರ ರವಾನೆ ಆಗಿದೆ.
ತಹಸೀಲ್ದಾರ್ ಸ್ಮಿತಾ ರಾಮು ರವರ ಬಗ್ಗೆ ರೈತ ಮುಖಂಡರು ಕಿಡಿ ಕಾರಿದ್ದಾರೆ.ರೈತರು ಸಮಸ್ಯೆ ಹೇಳಿ ಬಂದಾಗ ಚೇರ್ ಹಾಕಿ ಕೂರಿಸಿ ಗೌರವ ಕೊಡಬೇಕು.ಇದು ಬ್ರಿಟಿಷ್ ಆಡಳಿತ ಅಲ್ಲ.ಇಂತಹ ವರ್ತನೆ ಮುಂದುವರೆದ್ರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ…