ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ವಿರುದ್ದ ಅವ್ಯವಹಾರ ಆರೋಪ…ಮಾನಹಾರಿಕ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯ ಆದೇಶ…
- TV10 Kannada Exclusive
- April 4, 2026
- No Comment
- 85
ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ವಿರುದ್ದ ಅವ್ಯವಹಾರ ಆರೋಪ…ಮಾನಹಾರಿಕ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯ ಆದೇಶ…
ಮೈಸೂರು,ಏ4,Tv10 ಕನ್ನಡ
ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯ ಗೆ ಬಿಗ್ ರಿಲೀಫ್ ಸಿಕ್ಕಿದೆ.ಅರಮನೆ ಬಗ್ಗೆ ಇತಿಹಾಸ ಮತ್ತು ಮಾಹಿತಿ ನೀಡುವ ಆಡಿಯೋ ಗೈಡ್ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪದ ವಿಚಾರದಲ್ಲಿ ಮೈಸೂರು ನ್ಯಾಯಾಲಯ ಮಾಧ್ಯಮಗಳಿಗೆ ಆದೇಶ ಹೊರಡಿಸಿದೆ.ಟಿ.ಎಸ್.ಸುಭ್ರಹ್ಮಣ್ಯ ವಿರುದ್ದ ಯಾವುದೇ ಮಾನಹಾರಿಕ ಹೇಳಿಕೆಗಳನ್ನ ಪ್ರಕಟಿಸದಂತೆ ಎಲ್ಲಾ ರೀತಿಯ ಮಾಧ್ಯಮಗಳಿಗೆ ಸೂಚನೆ ನೀಡಿದೆ.ಟಿ.ಎಸ್.ಸುಭ್ರಹ್ಮಣ್ಯ ಪರ ವಕೀಲರಾದ ಬಿ.ಆರ್.ರಾಜೇಶ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಆಡಿಯೋ ಗೈಡ್ ಸೇವೆಯನ್ನ ನ್ಯಾರೋಕ್ಯಾಸ್ಟರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.ಈ ಸಂಬಂಧ ಕೋಟ್ಯಾಂತರ ಹಣ ದುರುಪಯೋಗವಾದ ಬಗ್ಗೆ ಆರೋಪಗಳು ಕೇಳಿ ಬಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.ನ್ಯಾರೋಕ್ಯಾಸ್ಟರ್ ಸಂಸ್ಥೆ ವ್ಯವಸ್ಥೆಯನ್ನ ದುರುಪಯೋಗಪಡಿಸಿಕೊಂಡ ಅರಮನೆ ಮಂಡಳಿಗೆ ನಷ್ಟ ಉಂಟು ಮಾಡುತ್ತಿರುವ ಬಗ್ಗೆ ಟಿ.ಎಸ್.ಸುಭ್ರಹ್ಮಣ್ಯ ರವರೇ ಪತ್ತೆ ಹಚ್ಚಿ ತಡೆ ಹಿಡಿದಿದ್ದರು.ಈ ಹಿನ್ನಲೆ ಸಂಸ್ಥೆಯ ಕೆಲವು ವ್ಯಕ್ತಿಗಳು ಹಿಂದೆ ಇದ್ದ ಅಧಿಕಾರಿಗಳ ಜೊತೆ ಕೈ ಜೋಡಿಸಿ ಸತ್ಯವನ್ನ ಮರೆಮಾಚಿ ಸುಳ್ಳುಸುದ್ದಿ ಪ್ರಚಾರ ಮಾಡಲಾಗಿದೆ ಎಂದು ನ್ಯಾಯಾಲಯ ಮನಗಂಡಿರುವ ಹಿನ್ನಲೆ ಆದೇಶ ಹೊರಡಿಸಿದೆ.ಟಿ.ಎಸ್.ಸುಭ್ರಹ್ಮಣ್ಯ ರವರ ವಿರುದ್ದ ಮಾನಹಾರಿಕ ಹೇಳಿಕೆಗಳನ್ನ ಪ್ರಸಾರ ಮಾಡದಂತೆ ಮೈಸೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ…