MDA ಹೊಸಬಡಾವಣೆ ನಿರ್ಮಾಣ ಪ್ರಕ್ರಿಯೆ…ಡ್ರೋನ್ ಮೂಲಕ ಜಮೀನು ಸರ್ವೆ ಕಾರ್ಯ…ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಚಾಲನೆ…
- TV10 Kannada Exclusive
- April 4, 2026
- No Comment
- 116

MDA ಹೊಸಬಡಾವಣೆ ನಿರ್ಮಾಣ ಪ್ರಕ್ರಿಯೆ…ಡ್ರೋನ್ ಮೂಲಕ ಜಮೀನು ಸರ್ವೆ ಕಾರ್ಯ…ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಚಾಲನೆ…

ಮೈಸೂರು,ಏ4,Tv10 ಕನ್ನಡ
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನ ಬಡಾವಣೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.2113 ಎಕ್ರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ಬಡಾವಣೆಗೆ 50-50 ಅನುಪಾತದಲ್ಲಿ ಜಮೀನು ಗುರುತಿಸುವ ಸರ್ವೆ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ.ಡ್ರೋನ್ ಮೂಲಕ ಸರ್ವೆ ಕಾರ್ಯ ಆರಂಭಿಸಲಾಗಿದ್ದು ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಅಧ್ಯಕ್ಷರೂ ಆದ ಲಕ್ಷ್ಮಿಕಾಂತ ರೆಡ್ಡಿ ಚಾಲನೆ ನೀಡಿದ್ದಾರೆ. ದೊಡ್ಡಮಾರಗೌಡನಹಳ್ಳಿ, ಕಮರವಳ್ಳಿ, ಬೊಮ್ಮೇನಹಳ್ಳಿ, ನಾಗವಾಲ ಗ್ರಾಮಗಳಲ್ಲಿ ಅನುಪಾತ 50:50ರಂತೆ ಅಂದಾಜು 2113 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣವಾಗಲಿದೆ.ಹೊಸ ಬಡಾವಣೆ ನಿರ್ಮಾಣಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಟಿ.ಎಸ್.ರಕ್ಷಿತ್ ರವರು ವಿಶೇಷ ಆಸಕ್ತಿ ವಹಿಸಿದ್ದು ಪ್ರಕ್ರಿಯೆಗೆ ಚುರುಕು ನೀಡಿದ್ದಾರೆ. ಈ ವೇಳೆ ಡ್ರೋನ್ ಸರ್ವೆ ಕಾರ್ಯದ ಉಸ್ತುವಾರಿಗಳಾದ ರಾಜಗುರು, ಉಪಾಧ್ಯಕ್ಷರು, ARV environment conservation care LTD, ಬೆಂಗಳೂರು ರವರು, ಸೂಪರಿಡೆಂಟ್ ಇಂಜಿನಿಯರ್, ಕಾರ್ಯದರ್ಶಿಗಳು, ನಗರ ಯೋಜನಾ ಸದಸ್ಯರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ವ್ಯವಸ್ಥಾಪಕರು, ವಿಶೇಷ ರಾಜಸ್ವ ನಿರೀಕ್ಷಕರು ಮೈಸೂರು ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಹಾಗೂ ಸ್ಥಳೀಯ ಮುಖಂಡರು ಮತ್ತು ಜಮೀನಿನ ಮಾಲೀಕರು ಹಾಜರಿದ್ದರು…