ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ ಕಾಟ…ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ…
- TV10 Kannada Exclusive
- April 28, 2026
- No Comment
- 50



ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ…ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳ ಕಾಟ…ರಸ್ತೆ ಸುಗಮ ಸಂಚಾರಕ್ಕೆ ಅಡಚಣೆ…


ಮೈಸೂರು,ಏ28,Tv10 ಕನ್ನಡ
ಮೈಸೂರಿನ ವಾಹನ ಸವಾರರಿಗೆ ಹೊಸ ಪ್ರಾಬ್ಲಂ ಶುರುವಾಗಿದೆ.ಭಿಕ್ಷೆ ಬೇಡುವ ನೆಪದಲ್ಲಿ ಬೀದಿ ಬಸವಣ್ಣಗಳು ಸುಗಮ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದಾರೆ.ಸಿಗ್ನಲ್ ಲೈಟಗಳಲ್ಲಿ ಕಾಣಿಸಿಕೊಳ್ಳುವ ಇವರು ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದಾರೆ.ಕೆ.ಆರ್.ಎಸ್ ಮುಖ್ಯ ರಸ್ತೆಯ ಆಕಾಶವಾಣಿ ವೃತ್ತದಲ್ಲಿ ಪ್ರತಿದಿನದ ದೃಶ್ಯ ಕಂಡು ಬರುತ್ತದೆ.ಹೊರ ರಾಜ್ಯಗಳಿಂದ ಬೀದಿ ಬಸವಗಳ ಸಮೇತ ಬಂದಿರುವ ಈ ಮಂದಿ ವಿಜಯನಗರದ ಸ್ಥಳವೊಂದರಲ್ಲಿ ಗುಡಿಸಿಲುಗಳನ್ನ ಹಾಕಿಕೊಂಡು ನೆಲೆಸಿದ್ದಾರೆ.ಪ್ರತಿದಿನ ಬೆಳಿಗ್ಗೆ ಬಸವಗಳ ಜೊತೆ ಬರುವ ಈ ಜನ ಭಿಕ್ಷೆ ಬೇಡುವ ನೆಪದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದಾರೆ.ಬೀದಿಬಸವಗಳ ಈ ವರ್ತನೆಯಿಂದ ವಾಹನ ಸವಾರರು ತಮ್ಮ ಗುರಿ ಸೇರಲು ತಡವಾಗುತ್ತಿದೆ.ಬೀದಿಬಸವಗಳ ಈ ಕಾಟದಿಂದ ಮುಕ್ತಿ ಸಿಗಬೇಕಿದೆ.ಸಂಚಾರಿ ಪೊಲೀಸರು ಇತ್ತ ಗಮನ ಹರಿಸಬೇಕಿದೆ…