ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ…
- Temples
- May 26, 2026
- No Comment
- 12

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದ
ಸ್ವಾಮಿಗಳ ಹುಟ್ಟು ಹಬ್ಬ ಆಚರಣೆ…
ಮೈಸೂರು,ಮೇ26,Tv10 ಕನ್ನಡ
ಶ್ರೀಗಣಪತಿ ಸಚ್ಚಿದಾನಂದ ಶ್ರೀಗಳ 84 ನೇ ಹುಟ್ಟುಹಬ್ಬ ಆಶ್ರಮದಲ್ಲಿ ಸಂಭ್ರಮದಿಂದ ನೆರವೇರುತ್ತಿದೆ.ವಿವಿಧ ಕಾರ್ಯಕ್ರಮಗಳ ಮೂಲಕ ಭಕ್ತರಿಗೆ ವಿಶೇಷವಾಗಿ ಧಾರ್ಮಿಕ ರಸದೌತಣ ನೀಡುತ್ತಿದೆ.ನಾಡಿನ ವಿವಿದ ಭಾಗಗಳಿಂದ ಆಗಮಿಸಿರುವ ಭಕ್ತವೃಂದ ಗಣಪತಿ ಶ್ರೀಗಳ ಜನ್ಮದಿನಾಚರಣೆಯ ಸವಿಯನ್ನ ಅನುಭವಿಸುತ್ತಿದೆ.ಕೇವಲ ಆಶ್ರಮದಲ್ಲಿ ಮಾತ್ರವಲ್ಲದೆ ಹೊರಗೂ ಸಹ ಭಕ್ತರು ಭಕ್ತಿಭಾವದಿಂದ ಗಣಪತಿ ಶ್ರೀಗಳ ಹುಟ್ಟುಹಬ್ಬವನ್ನ ವಿನೂತನವಾಗಿ ಆಚರಿಸಿ ಹಾರೈಸುತ್ತಿದ್ದಾರೆ.
ಅಪೂರ್ವ ಸ್ನೇಹ ಬಳಗ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಭಕ್ತವೃಂದ
ಮೈಸೂರಿನ ನಂಜುಮಳಿಗೆಯಲ್ಲಿ ಗೋಪೂಜೆ ಸಲ್ಲಿಸಿ ನಂತರ ಗೋವುಗಳಿಗೆ ಮೇವು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿನಗರ ಪಾಲಿಕಾ ಸದಸ್ಯರುಗಳಾದ ಮಾ ವಿ ರಾಮಪ್ರಸಾದ್,ಎಂ ಡಿ ಪಾರ್ಥಸಾರಥಿ,ಜಗದೀಶ್,ಜೀವದಾರ ಗಿರೀಶ್,ಕೆಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ವಿಕ್ರಂ ಅಯ್ಯಂಗಾರ್,
ಆಧ್ಯಾತ್ಮಿಕ ಚಿಂತಕ ವಿಕಾಶ್ ಶಾಸ್ತ್ರಿ,
ನಿರೂಪಕ ಅಜಯ್ ಶಾಸ್ತ್ರಿ,ಅಪೂರ್ವ ಸುರೇಶ್, ದೂರ ರಾಜಣ್ಣ,ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್,ಜತ್ತಿ ಪ್ರಸಾದ್,ಶಿವಲಿಂಗ ಸ್ವಾಮಿ,ಗೌರಿಶಂಕರ ನಗರ ಶಿವು,ಟಿ ಎಸ್ ಅರುಣ್,ಚಕ್ರಪಾಣಿ ,ಸುಚೇಂದ್ರ,
ದಯಾನಂದ ನಾಯಕ್,ಹಾಗೂ ಇನ್ನಿತರರು ಹಾಜರಿದ್ದರು..