ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

  • Crime
  • May 26, 2026
  • No Comment
  • 28

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ನಂಜನಗೂಡು,ಮೇ26,Tv10 ಕನ್ನಡ

ಜಮೀನಿಗೆ ತೆರಳಿದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ನಂಜನಗೂಡು ತಾಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ನಾಪತ್ತೆಯಾದ ಸ್ಥಳದಲ್ಲಿ ಮನುಷ್ಯರು ಸೃಷ್ಟಿಸಿದ ಚಿರತೆ ಹೆಜ್ಜೆಯಂತಹ ಗುರುತು ಪತ್ತೆಯಾಗಿದೆ.ಮಹಿಳೆ ಅಪಹರಣವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿರಬಹುದೇ ಎಂಬ ಆತಂಕ ಶುರುವಾಗಿದೆ.ಕುಟುಂಬಸ್ಥರು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ಶಿವರುದ್ರಮ್ಮ (63) ನಿಗೂಢವಾಗಿ ನಾಪತ್ತೆಯಾದ ಮಹಿಳೆ.ನಿನ್ನೆ ಜಮೀನಿಗೆ ಎಂದು ಮನೆ ಬಿಟ್ಟ ಶಿವರುದ್ರಮ್ಮ ಮತ್ತೆ ಹಿಂದಿರುಗಿಲ್ಲ.ತಡರಾತ್ರಿ ಆದ್ರೂ ಮನೆಗೆ ಹಿಂದಿರುಗದ ಹಿನ್ನಲೆ ಕುಟುಂಬಸ್ಥರು ಆತಂಕಗೊಂಡು ನಂಜನಗೂಡು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳ ಪರಿಶೀಲನೆ ನಡೆಸಿದಾಗ ಶಿವರುದ್ರಮ್ಮ ತೆರಳಿದ್ದ ಜಮೀನು ಬಳಿ ಮನುಷ್ಯರು ಬೆರಳಿನಿಂದ ಸೃಷ್ಟಿಸಿದ ಚಿರತೆ ಹೆಜ್ಜೆಯಂತಹ ಗುರುತು ಪತ್ತೆಯಾಗಿದೆ.ಅಲ್ಲದೆ ಶಿವರುದ್ರಮ್ಮ ರವರ ಚಪ್ಪಲಿಗಳು ಅನಾಥವಾಗಿ ಬಿದ್ದಿವೆ.ಕಾಡುಪ್ರಾಣಿಗಳು ಎಳೆದೊಯ್ದಿರಬಹುದೆಂಬ ಶಂಕೆಯಿಂದ ಅರಣ್ಯ ಇಲಾಖೆ ಸಹ ಶೋಧನೆ ನಡೆಸಿದ್ದಾರೆ.ಕೃತಕ ಚಿರತೆ ಹೆಜ್ಜೆ ಗುರುತು ಹೊರತುಪಡಿಸಿದರೆ ಎಳೆದೊಯ್ದಿರುವ ಇನ್ಯಾವುದೇ ಕುರುಹುಗಳು ಕಂಡು ಬಂದಿಲ್ಲ.ಶಿವರುದ್ರಮ್ಮ 60 ಗ್ರ ಚಿನ್ನದ ಸರ ಹಾಗೂ 10 ಗ್ರಾಂ ಕಿವಿ ಓಲೆಗಳು ಧರಿಸಿದ್ದರೆಂದು ಹೇಳಲಾಗಿದೆ.ಶಿವರುದ್ರಮ್ಮ ನಾಪತ್ತೆ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿದೆ.ಕಿಡಿಗೇಡಿಗಳ ಕೃತ್ಯವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿದೆಯೋ ಗೊತ್ತಿಲ್ಲ.ಸಧ್ಯ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡು ಶಿವರುದ್ರಮ್ಮ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ…

Spread the love

Related post

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ… ಮೈಸೂರು,ಮೇ26,Tv10 ಕನ್ನಡ ಶ್ರೀಗಣಪತಿ ಸಚ್ಚಿದಾನಂದ ಶ್ರೀಗಳ 84 ನೇ ಹುಟ್ಟುಹಬ್ಬ ಆಶ್ರಮದಲ್ಲಿ ಸಂಭ್ರಮದಿಂದ ನೆರವೇರುತ್ತಿದೆ.ವಿವಿಧ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹಿರಿಯ ಕಾಂಗ್ರೆಸ್ ಮುಖಂಡರೂ ಹರಿಯಾಣ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಮತ್ತು ಕಾನೂನು ಸಲಹೆಗಾರರಾದ ಪೊನ್ನಣ್ಣ ಸೇರಿ ಹಲವು ಪ್ರಮುಖರ ಜೊತೆಗೆ ದೆಹಲಿಯ ಕನ್ನಡ ಭವನದಲ್ಲಿ ಬೆಳಗಿನ ಉಪಹಾರ ಸವಿದರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರಾದ ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಹಿರಿಯ ಕಾಂಗ್ರೆಸ್ ಮುಖಂಡರೂ ಹರಿಯಾಣ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಮತ್ತು ಕಾನೂನು ಸಲಹೆಗಾರರಾದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯ AICC ಕಚೇರಿಯ ಇಂದಿರಾ ಭವನದಲ್ಲಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯ AICC ಕಚೇರಿಯ ಇಂದಿರಾ ಭವನದಲ್ಲಿ AICC…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯ AICC ಕಚೇರಿಯ ಇಂದಿರಾ ಭವನದಲ್ಲಿ AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತುಕತೆ…

Leave a Reply

Your email address will not be published. Required fields are marked *