ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ…
- TV10 Kannada Exclusive
- October 7, 2022
- No Comment
- 95
ಎರಡು ಟ್ರೈನುಗಳ ಹೆಸರು ಬದಲಾವಣೆ…ಧನ್ಯವಾದ ಅರ್ಪಿಸಿದ ಸಂಸದ ಪ್ರತಾಪ್ ಸಿಂಹ…
ಮೈಸೂರು,ಅ7,Tv10 ಕನ್ನಡ
ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ ಪ್ರೆಸ್ ಟ್ರೈನ್ ಹೆಸರು ಬದಲಾವಣೆಯಾಗಿದ್ದು ಇನ್ನು ಮುಂದೆ ಒಡೆಯರ್ ಎಕ್ಸ್ ಪ್ರೆಸ್ ಎಂಬ ಹೆಸರಲ್ಲಿ ಸೇವೆ ನೀಡಲಿದೆ.ಅಲ್ಲದೆ ಮೈಸೂರು-ತಾಳಗುಪ್ಪ ನಡುವೆ ಸಂಚರಿಸುವ ತಾಳಗುಪ್ಪ ರೈಲು ಕುವೆಂಪು ಎಕ್ಸ್ ಪ್ರೆಸ್ ಆಗಲಿದೆ. ಟ್ರೈನುಗಳ ಹೆಸರು ಬದಲಾವಣೆಯಾದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅಧಿಕೃತವಾಗಿ ತಿಳಿಸಿದ್ದಾರೆ.ಟ್ರೈನುಗಳ ಹೆಸರು ಬದಲಿಸಲು ಸಮ್ಮತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಜೊತೆಗೆ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಹಾಗೂ ಕುವೆಂಪು ಹೆಸರು ಸೂಚಿಸಿದ ಸ್ನೇಹಿತರಾದ ಡಿಪಿ ಸತೀಶ್ ರಿಗೂ ಸಹ ಧನ್ಯವಾದಗಳನ್ನ ತಿಳಿಸಿದ್ದಾರೆ…