ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ನಡುವೆ ಹೊಡೆದಾಟ…ಓರ್ವನ ಕೊಲೆಯಲ್ಲಿ ಅಂತ್ಯ…
- CrimeMysore
- October 25, 2022
- No Comment
- 99
ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ನಡುವೆ ಹೊಡೆದಾಟ…ಓರ್ವನ ಕೊಲೆಯಲ್ಲಿ ಅಂತ್ಯ…
ನಂಜನಗೂಡು,ಅ25,Tv10 ಕನ್ನಡ
ಕ್ಷುಲ್ಲಕ ಕಾರಣಕ್ಕಿ ಸಂಭಂಧಿಕರ ನಡುವೆ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ನಂಜನಗೂಡು ತಾಲೂಕು ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.ರಾಜಾಸ್ಥಾನ್ ಮೂಲದ ಸುರೇಶ್(23) ಮೃತ ದುರ್ದೈವಿ.ಸಂಭಂಧಿಕನೇ ಆದ ಆರೋಪಿ ಅಂಗ್ರೇಜ್ ರಾಮ್(26) ಇದೀಗ ಪೊಲೀಸರ ಅತಿಥಿ.ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.ಅಂಗ್ರೆಜ್ ರಾಮ್ ತಾಯಿಯ ಬಗ್ಗೆ ಸುರೇಶ್ ಕೆಟ್ಟದಾಗಿ ಮಾತನಾಡಿದ್ದಾನೆ.ಈ ವಿಚಾರದಲ್ಲಿ ಇಬ್ಬರ ನಡುವೆ ಹೊಡೆದಾಟವಾಗಿದೆ.ಈ ವೇಳೆ ದಪ್ಪವಾದ ಮರದ ಪೀಸ್ ನಿಂದ ಸುರೇಶ್ ಗೆ ಅಂಗ್ರೇಜ್ ರಾಮ್ ಹಲ್ಲೆ ನಡೆಸಿದ್ದಾನೆ.ತೀವ್ರ ಗಾಯಗೊಂಡ ಸುರೇಶ್ ಸಾವನ್ನಪ್ಪಿದ್ದಾನೆ.ಕೊಲೆ ಆರೋಪಿ ಅಂಗ್ರೇಜ್ ರಾಮ್ ನನ್ನು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ…