- November 3, 2022
ಇನ್ಮುಂದೆ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಧ್ಯಾನ…ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ…

ಇನ್ಮುಂದೆ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಧ್ಯಾನ…ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ…
ಬೆಂಗಳೂರು,3,Tv10 ಕನ್ನಡ
ಇನ್ನುಮುಂದೆ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳು ಧ್ಯಾನ ಮಾಡಲಿದ್ದಾರೆ.ಪ್ರತಿದಿನ 10 ನಿಮಿಷ ಧ್ಯಾನ ಮಾಡಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ ಹೊರಡಿಸಿದ್ದಾರೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳ ಮನವಿ ಪತ್ರದ ಮೇರೆಗೆ ಸಚಿವರು ಇಂತಹ ನಿರ್ಧಾರ ಕೈಗೊಂಡಿದ್ದಾರೆ.ವಿಧ್ಯಾರ್ಥಿಗಳಲ್ಲಿ ಧೃಢತೆ,ಏಕಾಗ್ರತೆ,ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಯಾಗಲು ಧ್ಯಾನ ಸಹಕಾರಿಯಾಗಲಿದೆ ಎಂಬ ದೃಷ್ಟಿಯಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.ಶಾಲೆ ಹಾಗೂ ಪದವಿ ಪೂರ್ವ ವಿಧ್ಯಾರ್ಥಿಗಳು ಇನ್ಮುಂದೆ ಧ್ಯಾನ ಮಾಡಬೇಕಿದೆ…