ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಹತ್ಯೆ ಪ್ರಕರಣ…ಪಕ್ಕದ ಮನನಿವಾಸಿ ಹಂತಕ…ಜಾಗದ ವಿಚಾರಕ್ಕೆ ನಡೆದ ಕೊಲೆ…

ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಹತ್ಯೆ ಪ್ರಕರಣ…ಪಕ್ಕದ ಮನನಿವಾಸಿ ಹಂತಕ…ಜಾಗದ ವಿಚಾರಕ್ಕೆ ನಡೆದ ಕೊಲೆ…

ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಹತ್ಯೆ ಪ್ರಕರಣ…ಪಕ್ಕದ ಮನನಿವಾಸಿ ಹಂತಕ…ಜಾಗದ ವಿಚಾರಕ್ಕೆ ನಡೆದ ಕೊಲೆ…

ಮೈಸೂರು,ನ8,Tv10 ಕನ್ನಡ
ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಕೊಲೆ‌ ಪ್ರಕರಣದ ರಹಸ್ಯವನ್ನ ಭೇದಿಸುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರ ಗುಪ್ತ ಸುದ್ದಿಗೋಷ್ಟಿಯಲ್ಲಿ ಕೊಲೆಗೆ ಸಂಭಂಧ ಪಟ್ಟಂತೆ ಮಾಹಿತಿ ನೀಡಿದ್ದಾರೆ.
ನವೆಂಬರ್ 4 ರಂದು ಸಂಜೆ ಅಫಘಾತ ಮಾದರಿಯಲ್ಲಿ ಅಧಿಕಾರಿ ಕುಲಕರ್ಣಿ ಕೊಲೆಯಾಗಿತ್ತು.
ಮೈಸೂರು ನಗರದ ಮಾನಸ ಗಂಗೋತ್ರಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿತ್ತು.ಹಿಟ್ ಅಂಡ್ ರನ್ ಉದ್ದೇಶ ಪೂರ್ವಕವಾಗಿಯೇ ನಡೆದಿತ್ತು.ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ.ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ತನಿಖೆಗಾಗಿ ನಾಲ್ಕು ತಂಡ ರಚನೆ ಮಾಡಲಾಗಿತ್ತು.ಅತ್ಯಂತ ಜಾಗರುಕತೆಯಿಂದ ಸಾಕ್ಷ್ಯ ಸಂಗ್ರಹಿಸಲಾಗಿದೆ.
ಘಟನೆ ನಂತರ ನಿವೃತ್ತ ಅಧಿಕಾರಿ ಅಳಿಯ ದೂರು ನೀಡಿದ್ದಾರೆ.
ಪಕ್ಕದ ಮನೆಯ ಮಾದಪ್ಪ ಅವರ ಜೊತೆ ಜಾಗದ ವಿಚಾರಕ್ಕೆ ಗಲಾಟೆ ನಡೆದಿತ್ತು.
ಜಾಗದ ವಿಚಾರಕ್ಕೆ ಕೊಲೆ ನಡೆದಿದೆ.
ಕೊಲೆ ಮಾಡಿದವರನ್ನ ಬಂಧಿಸಲಾಗಿದೆ.ಕೊಲೆಗೆ ಉಪಯೋಗಿಸಿದ ಕಾರನ್ನ ಜಪ್ತಿ ಮಾಡಲಾಗಿದೆ.
ಮಾದಪ್ಪನ ಕಿರಿಯ ಮಗ ಮತ್ತು ಸ್ನೇಹಿತರು ಸೇರಿ ಕೊಲೆ ಮಾಡಿದ್ದಾರೆ.
ಮಾದಪ್ಪನ ಮಗ ಮನು ಬಂಧಿಸಲಾಗಿದೆ.ಮತ್ತೊಬ್ಬರನ್ನ ಬಂಧಿಸಬೇಕಿದೆ.
ಮನು ಒಬ್ಬರೇ ಕಾರಿನಲ್ಲಿ ಇದ್ದರು.
ಕೃತ್ಯಕ್ಕೂ ಮುನ್ನ ಅಧಿಕಾರಿಯ ಪ್ರತಿದಿನದ ಚಲನವಲನಗಳನ್ನ ಗಮನಿಸಿದ್ದಾರೆ.
ಹೋಂಡಾ ಕಂಪನಿಯ ಕಾರು.ರಘು ಎಂಬ ಯುವಕನಿಗೆ ಸೇರಿದ ಕಾರು.ಕೊಲೆ ಮಾಡುವ ಉದ್ದೇಶದಿಂದಲೇ ಕಾರು ಖರೀದಿ ಮಾಡಲಾಗಿದ.ಹಂತಕ
ಮನು ಎಂಬಿಎ ಪದವೀಧರನಾಗಿದ್ದಾನೆ ಎಂದು ತಿಳಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *